ದಕ್ಷಿಣ ಕನ್ನಡ :ಭತ್ತದ ಬೆಳೆಯಲ್ಲಿ ತೇನೆ ತಿಗಣೆ (ಬಂಬುಚಿ) ಕೀಟದ ನಿರ್ವಹಣೆ
ಭತ್ತವು ಪ್ರಮುಖ ಆಹಾರ ಬೆಳೆಯಾಗಿದ್ದು, ಸುಮಾರು 200 ಕ್ಕೂ ಹೆಚ್ಚು ಕೀಟಗಳ ಬಾಧೆಗೆ ಒಳಗಾಗುತ್ತದೆ. ಇವುಗಳಲ್ಲಿ 20 ಕೀಟಗಳು ಭತ್ತದ ಬೆಳೆಯ ವಿವಿಧ ಹಂತದಲ್ಲಿ ಕಂಡು ಬಂದು ಇಳುವರಿಯೂ ಕಡಿಮೆಮಾಡಿ ಆರ್ಥಿಕ ಹಾನಿಯುಂಟು ಮಾಡುತ್ತವೆ. ಪ್ರಮುಖವಾಗಿ ಭತ್ತದ ತೆನೆ ಬಿಡುವ ಸಮಯ ಮತ್ತು ಕಾಳು ತುಂಬುವ ಸಮಯದಲ್ಲಿ ತೆನೆ ತಿಗಣೆ (ಬಾಂಬೂಚಿ) ಕೀಟದ ಹಾವಳಿ ಕಂಡು ಬರುತ್ತದೆ.
ಈ ಕೀಟದ ಮರಿ ಹಾಗೂ ಪ್ರೌಢ ಕೀಟಗಳು ಭತ್ತದ ತೇನೆಗಳಲ್ಲಿನ ಬೀಜಗಳ ರಸವನ್ನು ಹೀರುವುದರಿಂದ ಕಾಳುಗಳು ಜೊಳ್ಳಾಗುವುದಲ್ಲದೆ, ರಸ ಹಿರಿರುವ ಕಾಳುಗಳ ಜಾಗದಲ್ಲಿ ಕಪ್ಪು ಚುಕ್ಕೆ ಕಾಣುತ್ತವೆ, ಇದರಿಂದ ಭತ್ತದ ಇಳುವರಿ ಕಡಿಯಾಗುವದಲ್ಲದೆ ಭತ್ತದ ಮಾರುಕಟ್ಟೆ ಬೆಲೆಯು ಕಡಿಮೆಯಾಗಿ ರೈತರು ಆರ್ಥಿಕ ನಷ್ಠ ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಕೀಟದ ಸಮಗ್ರ ನಿರ್ವಹಣೆ ತುಂಬಾ ಅವಶ್ಯಕವೆಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿಗಳಾದ ಡಾ. ಕೇದಾರನಾಥ ರವರು ತಿಳಿಸಿದರು. ಈ ಕೀಟದ ಸಮಗ್ರ ನಿರ್ವಹಣೆಗಾಗಿ ರೈತರು ಭತ್ತದ ಗದ್ದೆಯಲ್ಲಿ ಮತ್ತು ಬದುಗಳಲ್ಲಿರುವ ಕಳೆಗಳನ್ನು ತೆಗೆದು ಸ್ವಚ್ಛತೆಯನ್ನು ಕಾಪಾಡಬೇಕು. ಹಾಗೆಯೇ 5 ಮಿಲಿ ಅಝಾಡಿರಚ್ಟಿನ್ 0.03 % (ಕಹಿ ಬೇವಿನ ಎಣ್ಣೆ) ಅಥವಾ 2 ಮಿಲಿ ಫಿಪ್ರೊನಿಲ್ 5% ಎಸ್ ಸಿ ಅಥವಾ 0.6 ಮಿಲಿ ಇಮೀಡಾಕ್ಲೋಪ್ರಿಡ್ 06% + ಲಾಂಬ್ಧಾ ಸೈಹಲೋತ್ರೀನ್ 04 % ಎಸ್ ಎಲ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.
ತುಳುನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಈ ನಾಡಿನ…
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಪ್ರಥಮ ಸುದ್ದಿ ವಾಹಕ…
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕಾಸರಗೋಡು ವರ್ಕಾಡಿ ಮೂಲದ ರೂಪಶ್ರೀ ವರ್ಕಾಡಿ…
ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಮ್ಮ ಹುದ್ದೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ…
ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆ ಪ್ರತಿ ಗ್ರಾಂಗೆ 25 ರೂಪಾಯಿ ಏರಿಕೆಯಾದರೂ,…
ತುಮಕೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಪುತ್ರನೇ ಹೈಡ್ರೋ ಗಾಂಜಾ…