ಹುಣಸೂರು: ರಾತ್ರಿ ಸಮಯದಲ್ಲಿ ಮೊಬೈಲ್ ಅಂಗಡಿ ಮತ್ತು ಬಾಳೆಮಂಡಿ ಅಂಗಡಿಯಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ಹನಗೋಡು ಹೋಬಳಿಯಲ್ಲಿ ನಡೆದಿದೆ. ಕಳ್ಳರು ಬೀಗ ಮುರಿದು ಮಾಲಿಕ ಮಹೇಶ್ ರವರ ಮೊಬೈಲ್ ಅಂಗಡಿಯಲ್ಲಿ ಸುಮಾರು 60000/- ನಗದು ಮತ್ತು ಪಕ್ಕದ ಬಾಳೆಮಂಡಿ ಅಂಗಡಿಲ್ಲಿ 4000/- ನಗದನ್ನು ದೋಚಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಮುರಿದ ಬೀಗವನ್ನು ಅನುಮಾನ ಬಾರದಿರಲ್ಲಿ ಎಂದು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ.
ಹನಗೋಡು ಹೋಬಳಿಯ ವೀರತಯ್ಯನಕೊಪ್ಪಲು ಗ್ರಾಮದ ನಿವಾಸಿ ಮಹೇಶ್ ರವರು ಹನಗೋಡು ಗ್ರಾಮದ ಶಂಕರಪ್ಪ ರವರ ಮಳಿಗೆಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಎಂದಿನಂತೆ ಸಾಯಿಂಕಾಲ ಸುಮಾರು 60000 ಹಣವನ್ನು ಕ್ಯಾಸ್ ಬಾಕ್ಸ್ ನಲ್ಲಿ ಇರಿಸಿ ಬೀಗ ಹಾಕಿ ಹೋಗಿದ್ದರಂತೆ. ಬೆಳಗ್ಗೆ ಬಂದು ನೋಡಿದಾಗ ಅಂಗಡಿಯ ಬೀಗ ತೆರೆದಿರುವುದು ಕಂಡು ಗಾಬರಿಗೊಂಡ ಮಾಲಿಕ ಮಹೇಶ್ ತಕ್ಷಣ ಒಳಗೆ ಹೋಗಿ ನೋಡಿದಾಗ ಹಣ ದೋಚಿರುವುದು ಖಚಿತವಾಗಿದೆ. ಪಕ್ಕದ ಬಾಳೆ ಮಂಡಿ ಮಾಲಿಕರಾದ ರಾಘುವೇಂದ್ರ ರವರು ತಮ್ಮ ಅಂಗಡಿಯಲ್ಲೂ ಇಟ್ಟಿದ್ದ 4000/- ನಗದನ್ನು ಕಳ್ಳರು ದೋಚಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಹನಗೋಡು ಹೋಬಳಿಯು ಸುಮಾರು ಗ್ರಾಮಗಳಿಂದ ಕೂಡಿದ್ದು ಹಲವಾರು ಜನ ವ್ಯಾಪಾರ, ವ್ಯವಹಾರ ಮಾಡುವುದರಿಂದ ಪೊಲೀಸ್ ವ್ಯವಸ್ತೆ ಸುವ್ಯವಸ್ಥಿತವಾಗಿರಬೇಕು ಹಾಗೂ ಈ ಹಿಂದೆ ಇದ್ದ ಹೆಡ್ ಕಾನ್ಸಟೇಬಲ್ ನಾಗರಾಜು ರವರ ಕಾಲಾವಧಿಯಲ್ಲಿ ಹನಗೋಡು ಹೋಬಳಿಯಲ್ಲಿ ಎಲ ರೀತಿಯಲ್ಲೂ ಸ್ವಲ್ಪ ಭದ್ರತೆಯಿಂದ ಇತ್ತು, ಈಗ ಪೊಲೀಸ್ ಚೌಕಿ ಇದ್ದರೂ ಅದರಲ್ಲಿ ಪೊಲೀಸ್ ಇರುತ್ತಿಲ್ಲ ಬೀಗ ಹಾಕಿ ಅವರ ಪಾಡಿಗೆ ಹೋಗುತ್ತಿರುತ್ತಾರೆ ಹಾಗಾಗಿ ಮುಂದಿನ ದಿನಗಳಲ್ಲಿ ರಾತ್ರಿ ವೇಳೆಯಲ್ಲಿ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಗ್ರಾಮಸ್ಥರು ಮತ್ತು ವ್ಯಾಪಾರಸ್ಥರು ಮನವಿ ಮಾಡಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತ ಠಾಣೆಯಲ್ಲಿ ದೂರು ದಾಖಲಾಗಿದ್ದು , ಪೊಲೀಸ್ ಅಧಿಕಾರಿಗಳು ಸ್ಥಳ ಮಹಜರು ಮಾಡಿ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
ತಣ್ಣೀರುಬಾವಿ ಬೀಚ್ ಬಳಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ರೌಡಿಶೀಟರ್ನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಕಸಬಾ ಬೆಂಗ್ರೆ ನಿವಾಸಿ…
ಎರಡು ದಿನಗಳ ಹಿಂದೆ ಮಡಂತ್ಯಾರು ಸಮೀಪದ ಪಾರೆಂಕಿ ಎಂಬಲ್ಲಿ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ…
ಹೋಟೆಲ್ನಲ್ಲಿದ್ದ ಎರಡು ಸಿಲಿಂಡರ್ ಏಕಾಏಕಿ ಬ್ಲಾಸ್ಟ್ ಆದ ಪರಿಣಾಮ ಹೋಟೆಲ್ ಹೊತ್ತಿ ಉರಿದ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ…
ಆದಿ ಉಡುಪಿ ಎಪಿಎಂಸಿ ಮಾರುಕಟ್ಟೆಯ ಹಿಂಭಾಗದ ಖಾಸಗಿ ಸ್ಥಳದಲ್ಲಿದ್ದರುವ ಪಾಳುಬಾವಿಯಲ್ಲಿ ಕೊಳೆತಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಮೃತದೇಹ…
ಕಾಪು ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ತಡೆರಹಿತ ಬಸ್ಸೊಂದು ಕಾಪು ಸಾಯಿ ಸರ್ವಿಸ್ ಸ್ಟೇಶನ್ ಬಳಿ ಸ್ಕೂಟಿಯೊಂದಕ್ಕೆ ಹಿಂಬದಿಯಿಂದ…
ಮುಂಡತಿಕ್ಕೋಡುವಿನ ಪಟಾಕಿ ಸಂಗ್ರಹಣಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 14 ಜನರು ಸಾವನ್ನಪ್ಪಿದ ನಂತರ, ತ್ರಿಶೂರ್ ಪೂರಂ ಉತ್ಸವದ ಪಟಾಕಿ…