ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬ್ರಹ್ಮರಕೂಟ್ಲೂ ಟೋಲ್ ಗೇಟ್ ಬಳಿ ಟ್ರಕ್ ಡ್ರೈವರ್ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿದ್ದು, ಆ ಸಂಬಂಧಿತ ವೀಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.

ಮೊದಲೇ ಹೊಂಡ ಗುಂಡಿ ಯಿಂದ ಕೂಡಿದ ರಸ್ತೆ ಇದಾಗಿದ್ದು, ಇಂತಹ ರಸ್ತೆಗೆ ಟೋಲ್ ಕಟ್ಟುವ ಪರಿಸ್ಥಿತಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಬಂದಿದೆ. ಅದರ ಜೊತೆ ಇಂತಹ ದುರ್ವರ್ತನೆ ತೋರುತ್ತಿರುವ ಇಲ್ಲಿನ ಸಿಬ್ಬಂದಿ ಈ ಟೋಲ್ ಗೇಟ್ ಯಾವ ಕಾರಣಕ್ಕೆ ಇದೆ ಎಂದು ಪ್ರಶ್ನಿಸುವಂತೆ ಮಾಡಿದೆ.ಈ ಟೋಲ್ ನ ಹಿಂದೆ ಯಾವ ಸಂಸ್ಥೆ ಇದೆ, ಈ ಟೋಲ್ ನಿಂದ ಯಾರಿಗೆ ಲಾಭ ಎಂಬುದೂ ಸಾರ್ವಜನಿಕರು ಎತ್ತಿರುವ ಪ್ರಶ್ನೆ. ಹಲ್ಲೆ ಮಾಡಿದ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಲು ಪೋಲೀಸ್ ಇಲಾಖೆ ಗಮನ ಹರಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.



