ಜಿಲ್ಲೆಯ ಮುಖ್ಯ ಪೇಟೆಯಾದ ಕಾಸರಗೋಡಿನಲ್ಲಿ ಈ ಹಿಂದೆಲ್ಲ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಶಾಲಾ ಹಾಗೂ ಕಚೇರಿ ಸಮಯ ಮಾತ್ರ ಕಾಡುತ್ತಿದ್ದ ಟ್ರಾಫಿಕ್ ಸಮಸ್ಯೆ ಇದೀಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಮೇಲ್ಸೆತುವೆ ಕೆಲಸಗಳು ಪ್ರಗತಿಯಲ್ಲಿರುವುದರಿಂದ ನಿತ್ಯವೂ ನರಕ ಸದಶ್ಯವಾಗಿ ಗೋಚರಿಸುತ್ತದೆ. ಹೆಚ್ಚಿನ ಎಲ್ಲಾ ಸಮಯದಲ್ಲೂ ವಾಹನಗಳಿಂದ ಗಿಜಿಗಿಡುತ್ತಿದ್ದ ಮುಖ್ಯ ರಸ್ತೆಯಲ್ಲಿ ಇದೀಗ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಕಾಸರಗೋಡಿನಿಂದ ಅತ್ತ ಕಣ್ಣೂರಿಗೆ ತೆರಳುವ ಚೆರ್ಕಳ ವರೆಗೆ ಇತ್ತ ಕುಂಬಳೆ ಮಂಗಳೂರು ರಸ್ತೆಯ ಮೊಗ್ರಾಲ್ ನವರೆಗೆ ಟ್ರಾಫಿಕ್ ಜಾಮ್ ಆಗುವುದರಿಂದ ವಾಹನ ಪ್ರಯಾಣಿಕರು ಸಂದಿಗ್ದತೆಯಲ್ಲಿ ಸಿಲುಕಿ ಹಾಕಿಕೊಳ್ಳುವುದು ಇಲ್ಲಿ ದಿನ ನಿತ್ಯದ ಸಮಸ್ಯೆಯಾಗಿದೆ. ರಸ್ತೆಯ ಸಂಚಾರ ಸ್ಥಿತಿಗಳನ್ನು ಹಲವೆಡೆಗಳಲ್ಲಿ ಬದಲಾಗಿಸಲಾಗಿದ್ದು ದೂರದಿಂದ ಬರುವ ಘನ ವಾಹನಗಳಿಗೆ ಈ ಬಗ್ಗೆ ಮಾಹಿತಿಯಿಲ್ಲದೆ ಟ್ರಾಫಿಕ್ ಜಾಮ್ ಉಂಟಾಗುತ್ತಿರುವುದಾಗಿ ಸ್ಥಳೀಯರು ತಿಳಿಸುತ್ತಿದ್ದಾರೆ, ಈ ನಡುವೆ ರಿಕ್ಷಾ ಕಾರಿನಂತಹ ಬಾಡಿಗೆ ವಾಹನಗಳು ಟ್ರಾಫಿಕ್ ಜಾಮ್ ನಿಂದಾಗಿ ಬಾಡಿಗೆ ಕಳೆದುಕೊಳ್ಳುವ ಪರಿಸ್ಥಿತಿಯೂ ಇಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಎಂಬ ಕಾರಣಕ್ಕೆ ಈ ದಾರಿಯಿಂದಾಗಿ ದೂರದ ಊರಿಗೆ ಪ್ರಯಾಣಿಸುವ ಹಲವಾರು ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ತಲುಪಲಾಗದೆ ಟ್ರಾಫಿಕ್ ನೊಳಗಡೆ ಗೋಳಾಡುವ ಪರಿಸ್ಥಿತಿ ಸರ್ವೆ ಸಾಮಾನ್ಯವಾಗಿದೆ. ಮಂಗಳೂರಿಗೆ ಸಂಚರಿಸುವ ಅಂತರಾಜ್ಯ ಬಸ್ಸುಗಳಿಗೆ ಈ ಟ್ರಾಫಿಕ್ ಜಾಮ್ ನಿಂದಾಗಿ ಗಂಟೆಗಳಷ್ಟು ವ್ಯತವ್ಯಯ ಉಂಟಾಗುತ್ತಿರುವುದಾಗಿ ಬಸ್ ಚಾಲಕರು ನಿರ್ವಾಹಕರು ತಿಳಿಸಿದ್ದಾರೆ.ಇದೀಗ ಮಳೆಗಾಳವಾದ್ದರಿಂದ ಕಾಮಗಾರಿ ನಡೆಯುವ ಹಲವೆಡೆ ದೊಡ್ಡ ದೊಡ್ಡ ಹೊಂಡಗಳುಂಟಾಗಿದ್ದು ವಾಹನಗಳು ಇದಕ್ಕೆ ಇಳಿದು ಅಪಾಯ ಸಂಭವಿಸುದರ ಬಗ್ಗೆಯೂ ವರದಿಯಾಗಿದೆ. ಶೀಘ್ರವೇ ಮೇಲ್ಸೆತುವೆ ಕಾಮಗಾರಿ ಪೂರ್ತಿಗೊಳಿಸಿ ಸಂಚಾರ ಸುಗಮಗೊಳಿಸಬೇಕೆಂದು ಒಕ್ಕೊರಲಿನ ಒತ್ತಾಯ ಕೇಳಿ ಬರುತ್ತಿದೆ.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…