ಜನ ಮನದ ನಾಡಿ ಮಿಡಿತ

Advertisement

ಕಾಸರಗೋಡು ಮೇಲ್ಸೆತುವೆ ಕಾಮಗಾರಿ ಮುಗಿಯುವವರೆಗೆ ಮುಗಿಯದ ಗೋಳು “ಟ್ರಾಫಿಕ್ ಜಾಂ”

ಜಿಲ್ಲೆಯ ಮುಖ್ಯ ಪೇಟೆಯಾದ ಕಾಸರಗೋಡಿನಲ್ಲಿ ಈ ಹಿಂದೆಲ್ಲ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಶಾಲಾ ಹಾಗೂ ಕಚೇರಿ ಸಮಯ ಮಾತ್ರ ಕಾಡುತ್ತಿದ್ದ ಟ್ರಾಫಿಕ್ ಸಮಸ್ಯೆ ಇದೀಗ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಮೇಲ್ಸೆತುವೆ ಕೆಲಸಗಳು ಪ್ರಗತಿಯಲ್ಲಿರುವುದರಿಂದ ನಿತ್ಯವೂ ನರಕ ಸದಶ್ಯವಾಗಿ ಗೋಚರಿಸುತ್ತದೆ. ಹೆಚ್ಚಿನ ಎಲ್ಲಾ ಸಮಯದಲ್ಲೂ ವಾಹನಗಳಿಂದ ಗಿಜಿಗಿಡುತ್ತಿದ್ದ ಮುಖ್ಯ ರಸ್ತೆಯಲ್ಲಿ ಇದೀಗ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.


ಕಾಸರಗೋಡಿನಿಂದ ಅತ್ತ ಕಣ್ಣೂರಿಗೆ ತೆರಳುವ ಚೆರ್ಕಳ ವರೆಗೆ ಇತ್ತ ಕುಂಬಳೆ ಮಂಗಳೂರು ರಸ್ತೆಯ ಮೊಗ್ರಾಲ್ ನವರೆಗೆ ಟ್ರಾಫಿಕ್ ಜಾಮ್ ಆಗುವುದರಿಂದ ವಾಹನ ಪ್ರಯಾಣಿಕರು ಸಂದಿಗ್ದತೆಯಲ್ಲಿ ಸಿಲುಕಿ ಹಾಕಿಕೊಳ್ಳುವುದು ಇಲ್ಲಿ ದಿನ ನಿತ್ಯದ ಸಮಸ್ಯೆಯಾಗಿದೆ. ರಸ್ತೆಯ ಸಂಚಾರ ಸ್ಥಿತಿಗಳನ್ನು ಹಲವೆಡೆಗಳಲ್ಲಿ ಬದಲಾಗಿಸಲಾಗಿದ್ದು ದೂರದಿಂದ ಬರುವ ಘನ ವಾಹನಗಳಿಗೆ ಈ ಬಗ್ಗೆ ಮಾಹಿತಿಯಿಲ್ಲದೆ ಟ್ರಾಫಿಕ್ ಜಾಮ್ ಉಂಟಾಗುತ್ತಿರುವುದಾಗಿ ಸ್ಥಳೀಯರು ತಿಳಿಸುತ್ತಿದ್ದಾರೆ, ಈ ನಡುವೆ ರಿಕ್ಷಾ ಕಾರಿನಂತಹ ಬಾಡಿಗೆ ವಾಹನಗಳು ಟ್ರಾಫಿಕ್ ಜಾಮ್ ನಿಂದಾಗಿ ಬಾಡಿಗೆ ಕಳೆದುಕೊಳ್ಳುವ ಪರಿಸ್ಥಿತಿಯೂ ಇಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಎಂಬ ಕಾರಣಕ್ಕೆ ಈ ದಾರಿಯಿಂದಾಗಿ ದೂರದ ಊರಿಗೆ ಪ್ರಯಾಣಿಸುವ ಹಲವಾರು ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ತಲುಪಲಾಗದೆ ಟ್ರಾಫಿಕ್ ನೊಳಗಡೆ ಗೋಳಾಡುವ ಪರಿಸ್ಥಿತಿ ಸರ್ವೆ ಸಾಮಾನ್ಯವಾಗಿದೆ. ಮಂಗಳೂರಿಗೆ ಸಂಚರಿಸುವ ಅಂತರಾಜ್ಯ ಬಸ್ಸುಗಳಿಗೆ ಈ ಟ್ರಾಫಿಕ್ ಜಾಮ್ ನಿಂದಾಗಿ ಗಂಟೆಗಳಷ್ಟು ವ್ಯತವ್ಯಯ ಉಂಟಾಗುತ್ತಿರುವುದಾಗಿ ಬಸ್ ಚಾಲಕರು ನಿರ್ವಾಹಕರು ತಿಳಿಸಿದ್ದಾರೆ.ಇದೀಗ ಮಳೆಗಾಳವಾದ್ದರಿಂದ ಕಾಮಗಾರಿ ನಡೆಯುವ ಹಲವೆಡೆ ದೊಡ್ಡ ದೊಡ್ಡ ಹೊಂಡಗಳುಂಟಾಗಿದ್ದು ವಾಹನಗಳು ಇದಕ್ಕೆ ಇಳಿದು ಅಪಾಯ ಸಂಭವಿಸುದರ ಬಗ್ಗೆಯೂ ವರದಿಯಾಗಿದೆ. ಶೀಘ್ರವೇ ಮೇಲ್ಸೆತುವೆ ಕಾಮಗಾರಿ ಪೂರ್ತಿಗೊಳಿಸಿ ಸಂಚಾರ ಸುಗಮಗೊಳಿಸಬೇಕೆಂದು ಒಕ್ಕೊರಲಿನ ಒತ್ತಾಯ ಕೇಳಿ ಬರುತ್ತಿದೆ.

Leave a Reply

Your email address will not be published. Required fields are marked *

ಆಂಧ್ರಪದೇಶದಲ್ಲಿ ಫ್ಲೋರ್ ಮಾಸ್ಟರ್ಸ್ ಮೊದಲ ಫ್ಲಾಟ್ ಬ್ರೆಡ್ ಸ್ಥಾವರ; ರೂ. 100 ಕೋಟಿ ಹೂಡಿಕೆ, ರಫ್ತು ಆಧಾರಿತ ಉದ್ಯಮ..!

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿ ಬಸ್-ಕಾರು ಡಿಕ್ಕಿ; ಮಕ್ಕಳಿದ್ದ ಕಾರು ಅಪಾಯದಿಂದ ಪಾರು

ನ್ಯೂಯಾರ್ಕ್: ಅಮೆರಿಕ-ಇರಾನ್ ಮಿಲಿಟರಿ ವಿರಾಮದ ಪರಿಣಾಮ; ಕಚ್ಚಾ ತೈಲ ಬೆಲೆ ಇಳಿಕೆ, ಹಣದುಬ್ಬರಕ್ಕೂ ಬ್ರೇಕ್?

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಬಂಟ್ವಾಳ: ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಲ್ಲಿ ಆತಂಕ..!

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

error: Content is protected !!