ಜನ ಮನದ ನಾಡಿ ಮಿಡಿತ

Advertisement

ಮಧೂರು ಬ್ರಹ್ಮಕಲಶೋತ್ಸವದ ಹಿನ್ನಲೆ; ಮಧೂರು ದೇವಾಲಯಕ್ಕೆ ಮ್ಯಾರಥಾನ್ ಓಟ

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆಯ ಅಂಗವಾಗಿ ಶ್ರೀ ಕದ್ರಿ ಮಂಜುನಾಥೇಶ್ವರ ದೇವಾಲಯದ ಆವರಣ ದಿಂದ ಮದೂರು ದೇವಾಲಯಕ್ಕೆ ಮ್ಯಾರಥಾನ್ ಓಟ ನಡೆಯಿತು.

ಮ್ಯಾರಥಾನ್ ಓಟವನ್ನು ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಉದ್ಘಾಟಿಸಿದರು. ಉದ್ಘಾಟಕರು ಮಾತಾಡಿ ಯುವ ಮನಸುಗಳು ಇಂದು ಹಾದಿ ತಪ್ಪುತ್ತಿದೆ. ಈ ಸಂದರ್ಭದಲ್ಲಿ ಇಂತಹ ಯುವಕರ ದೇವಾಲಯದ ಕಡೆಗಿನ ಮ್ಯಾರಥಾನ್ ಓಟವು ಇತರ ಯುವಕರಿಗೂ ಪ್ರೇರಣೆ ನೀಡುವಂತದ್ದು. ಇದು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಇನ್ನು ಮಧುರು ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟ್ ಸದಸ್ಯರ ಮಾತನಾಡಿ ದಕ್ಷಿಣ ಕನ್ನಡಕ್ಕೂ ಕಾಸರಗೋಡಿಗೂ ಅವಿನಾಭಾವ ಸಂಬoಧವಿದೆ. ಇಲ್ಲಿನ ಕದ್ರಿ ದೇಗುಲಕ್ಕೆ ಅದರದ್ದೆ ಆದ ಐತಿಹ್ಯ ಇದೆ. ಹಾಗೆ ಇತಿಹಾಸ ಪ್ರಸಿದ್ಧ ಮದ್ದೂರು ದೇವಾಲಯಕ್ಕೆ ಇಲ್ಲಿನಿಂದಲೇ ಪ್ರಚಾರ ಸಿಗಬೇಕೆನ್ನುವುದು ನಮ್ಮೆಲ್ಲರ ಅಭಿಲಾಷೆ ಎಂದರು. ಮ್ಯಾರಥಾನ್ ಓಟಗಾರ ಮಾತಾಡಿ ನಮಗೆ ದೇಶ ಸೇವೆ ಮಾಡಬೇಕೆನ್ನುವ ಆಸೆ ಇದೆ. ಹಾಗಾಗಿ ಊರಿನಲ್ಲಿ ಓಟದ ಸ್ಪರ್ಧೆ ಆಗಾಗ್ಗೆ ಮಾಡುತ್ತಿದ್ದೆವು. ನಮ್ಮ ಹರಕೆ ಈಡೇರಲು ನಮ್ಮ ಮ್ಯಾರಥಾನ್ ದೇವಸ್ಥಾನದ ಕಡೆಗೆ ಸಾಗಲಿದೆ. ಭವಿಷ್ಯತ್ತಿನಲ್ಲಿ ಸೇನೆಗೆ ಸೇರುವ ಅಭಿಲಾಷೆ ಈಡೇರಿಸಲು ಗಣಪನಲ್ಲಿ ಬೇಡುವೆ ಎಂದರು. ಈ ಮ್ಯಾರಥಾನ್ ಉದ್ಘಾಟನೆಯಲ್ಲಿ ಮಧೂರು ದೇವಾಲಯದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತಿದ್ದರು.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!