ಜನ ಮನದ ನಾಡಿ ಮಿಡಿತ

Advertisement

ಮಧೂರು ಬ್ರಹ್ಮಕಲಶೋತ್ಸವದ ಹಿನ್ನಲೆ; ಮಧೂರು ದೇವಾಲಯಕ್ಕೆ ಮ್ಯಾರಥಾನ್ ಓಟ

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆಯ ಅಂಗವಾಗಿ ಶ್ರೀ ಕದ್ರಿ ಮಂಜುನಾಥೇಶ್ವರ ದೇವಾಲಯದ ಆವರಣ ದಿಂದ ಮದೂರು ದೇವಾಲಯಕ್ಕೆ ಮ್ಯಾರಥಾನ್ ಓಟ ನಡೆಯಿತು.

ಮ್ಯಾರಥಾನ್ ಓಟವನ್ನು ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಉದ್ಘಾಟಿಸಿದರು. ಉದ್ಘಾಟಕರು ಮಾತಾಡಿ ಯುವ ಮನಸುಗಳು ಇಂದು ಹಾದಿ ತಪ್ಪುತ್ತಿದೆ. ಈ ಸಂದರ್ಭದಲ್ಲಿ ಇಂತಹ ಯುವಕರ ದೇವಾಲಯದ ಕಡೆಗಿನ ಮ್ಯಾರಥಾನ್ ಓಟವು ಇತರ ಯುವಕರಿಗೂ ಪ್ರೇರಣೆ ನೀಡುವಂತದ್ದು. ಇದು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಇನ್ನು ಮಧುರು ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟ್ ಸದಸ್ಯರ ಮಾತನಾಡಿ ದಕ್ಷಿಣ ಕನ್ನಡಕ್ಕೂ ಕಾಸರಗೋಡಿಗೂ ಅವಿನಾಭಾವ ಸಂಬoಧವಿದೆ. ಇಲ್ಲಿನ ಕದ್ರಿ ದೇಗುಲಕ್ಕೆ ಅದರದ್ದೆ ಆದ ಐತಿಹ್ಯ ಇದೆ. ಹಾಗೆ ಇತಿಹಾಸ ಪ್ರಸಿದ್ಧ ಮದ್ದೂರು ದೇವಾಲಯಕ್ಕೆ ಇಲ್ಲಿನಿಂದಲೇ ಪ್ರಚಾರ ಸಿಗಬೇಕೆನ್ನುವುದು ನಮ್ಮೆಲ್ಲರ ಅಭಿಲಾಷೆ ಎಂದರು. ಮ್ಯಾರಥಾನ್ ಓಟಗಾರ ಮಾತಾಡಿ ನಮಗೆ ದೇಶ ಸೇವೆ ಮಾಡಬೇಕೆನ್ನುವ ಆಸೆ ಇದೆ. ಹಾಗಾಗಿ ಊರಿನಲ್ಲಿ ಓಟದ ಸ್ಪರ್ಧೆ ಆಗಾಗ್ಗೆ ಮಾಡುತ್ತಿದ್ದೆವು. ನಮ್ಮ ಹರಕೆ ಈಡೇರಲು ನಮ್ಮ ಮ್ಯಾರಥಾನ್ ದೇವಸ್ಥಾನದ ಕಡೆಗೆ ಸಾಗಲಿದೆ. ಭವಿಷ್ಯತ್ತಿನಲ್ಲಿ ಸೇನೆಗೆ ಸೇರುವ ಅಭಿಲಾಷೆ ಈಡೇರಿಸಲು ಗಣಪನಲ್ಲಿ ಬೇಡುವೆ ಎಂದರು. ಈ ಮ್ಯಾರಥಾನ್ ಉದ್ಘಾಟನೆಯಲ್ಲಿ ಮಧೂರು ದೇವಾಲಯದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತಿದ್ದರು.

Leave a Reply

Your email address will not be published. Required fields are marked *

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪ*ಘಾತದಲ್ಲಿ ಯುವಕ ಸಾ*ವು….!

ಬಂಟ್ವಾಳ: ಅಮ್ಮುಂಜೆ ವೃದ್ಧೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ…!

ನವದೆಹಲಿ: ಚಿನ್ನದ ಬೆಲೆ ಇಳಿಯುತ್ತಾ? ವಿಶ್ವ ಚಿನ್ನ ಮಂಡಳಿಯ ಭವಿಷ್ಯ…!

error: Content is protected !!