ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆಯ ಅಂಗವಾಗಿ ಶ್ರೀ ಕದ್ರಿ ಮಂಜುನಾಥೇಶ್ವರ ದೇವಾಲಯದ ಆವರಣ ದಿಂದ ಮದೂರು ದೇವಾಲಯಕ್ಕೆ ಮ್ಯಾರಥಾನ್ ಓಟ ನಡೆಯಿತು.
ಮ್ಯಾರಥಾನ್ ಓಟವನ್ನು ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಉದ್ಘಾಟಿಸಿದರು. ಉದ್ಘಾಟಕರು ಮಾತಾಡಿ ಯುವ ಮನಸುಗಳು ಇಂದು ಹಾದಿ ತಪ್ಪುತ್ತಿದೆ. ಈ ಸಂದರ್ಭದಲ್ಲಿ ಇಂತಹ ಯುವಕರ ದೇವಾಲಯದ ಕಡೆಗಿನ ಮ್ಯಾರಥಾನ್ ಓಟವು ಇತರ ಯುವಕರಿಗೂ ಪ್ರೇರಣೆ ನೀಡುವಂತದ್ದು. ಇದು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಇನ್ನು ಮಧುರು ಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟ್ ಸದಸ್ಯರ ಮಾತನಾಡಿ ದಕ್ಷಿಣ ಕನ್ನಡಕ್ಕೂ ಕಾಸರಗೋಡಿಗೂ ಅವಿನಾಭಾವ ಸಂಬoಧವಿದೆ. ಇಲ್ಲಿನ ಕದ್ರಿ ದೇಗುಲಕ್ಕೆ ಅದರದ್ದೆ ಆದ ಐತಿಹ್ಯ ಇದೆ. ಹಾಗೆ ಇತಿಹಾಸ ಪ್ರಸಿದ್ಧ ಮದ್ದೂರು ದೇವಾಲಯಕ್ಕೆ ಇಲ್ಲಿನಿಂದಲೇ ಪ್ರಚಾರ ಸಿಗಬೇಕೆನ್ನುವುದು ನಮ್ಮೆಲ್ಲರ ಅಭಿಲಾಷೆ ಎಂದರು. ಮ್ಯಾರಥಾನ್ ಓಟಗಾರ ಮಾತಾಡಿ ನಮಗೆ ದೇಶ ಸೇವೆ ಮಾಡಬೇಕೆನ್ನುವ ಆಸೆ ಇದೆ. ಹಾಗಾಗಿ ಊರಿನಲ್ಲಿ ಓಟದ ಸ್ಪರ್ಧೆ ಆಗಾಗ್ಗೆ ಮಾಡುತ್ತಿದ್ದೆವು. ನಮ್ಮ ಹರಕೆ ಈಡೇರಲು ನಮ್ಮ ಮ್ಯಾರಥಾನ್ ದೇವಸ್ಥಾನದ ಕಡೆಗೆ ಸಾಗಲಿದೆ. ಭವಿಷ್ಯತ್ತಿನಲ್ಲಿ ಸೇನೆಗೆ ಸೇರುವ ಅಭಿಲಾಷೆ ಈಡೇರಿಸಲು ಗಣಪನಲ್ಲಿ ಬೇಡುವೆ ಎಂದರು. ಈ ಮ್ಯಾರಥಾನ್ ಉದ್ಘಾಟನೆಯಲ್ಲಿ ಮಧೂರು ದೇವಾಲಯದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತಿದ್ದರು.
ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಎಂಬಲ್ಲಿ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಮನೆಯ ಚಾವಣಿ…
ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದಂತಹ ಅವಘಡದಲ್ಲಿ ಮನೆಯ ಪೀಠೋಪಕರಣಗಳು ಹಾಗೂ ದಿನನಿತ್ಯ…
ವಾಷಿಂಗ್ಟನ್ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಯು. ಟಿ. ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ…
ಫಿಫಾ ವಿಶ್ವಕಪ್ 2026ರ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳ ವೇಳೆ ನಡೆದ ಗಲಾಟೆ ಮತ್ತು ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ, ಅರ್ಜೆಂಟೀನಾ…
'ನ್ಯೂಯಾರ್ಕ್ ಟೈಮ್ಸ್' ತನ್ನ ವರದಿಯಲ್ಲಿ 'ಪಾಕಿಸ್ತಾನಿ ಕಾಶ್ಮೀರ' ಎಂದು ಉಲ್ಲೇಖಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕದಲ್ಲಿರುವ ಭಾರತೀಯ ರಾಯಭಾರ…
ಚೀನಾ ಪಾಕಿಸ್ತಾನದ ಮೂಲಕ ಇರಾನ್ಗೆ 400 ರಾಕೆಟ್ ಲಾಂಚರ್ಗಳನ್ನು ಪೂರೈಸಿದೆ ಎಂಬ ವರದಿಗಳು ಜಾಗತಿಕ ಆತಂಕಕ್ಕೆ ಕಾರಣವಾಗಿವೆ. ಈ ಕುರಿತು…