ಕರಾವಳಿ

ಉಡುಪಿ: ಕರಾವಳಿಯಲ್ಲಿ ಮೀನಿಗೆ ಬರ; ಗಗನಕ್ಕೇರಿದ ಮೀನಿನ ದರ

ಉಡುಪಿ: ಬೇಸಗೆಯ ತಾಪ ಎಲ್ಲೆಡೆ ಪರಿಣಾಮ ಬೀರುತ್ತಿದ್ದು, ಮೀನುಗಾರಿಕಾ ವಲಯಕ್ಕೂ ಬಿಸಿ ತಟ್ಟಿದೆ. ಬಿಸಿಲಿನ ಬೇಗೆಗೆ ತೀರದತ್ತ ಮೀನುಗಳು ಬಾರದೇ ಇರುವುದರಿಂದ ಮೀನುಗಾರಿಕೆಗೆ ಹೊಡೆತ ಬಿದ್ದಿದ್ದು, ಇದರಿಂದ ಬಹುಬೇಡಿಕೆಯ ಮೀನುಗಳ ದರ ದುಬಾರಿಯಾಗಿದೆ.

ಕರಾವಳಿಯಲ್ಲಿಯೇ ಎರಡು- ಮೂರು ದಿನಗಳ ಹಿಂದೆ ಅಂಜಲ್ ಕೆಜಿಗೆ ಬರೋಬ್ಬರಿ 1,800 ರೂ.ಗೆ ತಲುಪಿತ್ತು. ಇದುವರೆಗಿನ ಗರಿಷ್ಠ ಬೆಲೆಯಿದು. ಸದ್ಯ ಮಾರುಕಟ್ಟೆಯಲ್ಲಿ 1,400-1,500 ರೂ.ನಲ್ಲಿ ಮಾರಾಟವಾಗುತ್ತಿದೆ. ಇನ್ನು ಬಿಳಿ ಪಾಂಫ್ರೆಟ್ ಕೆಜಿಗೆ 1,500 ರೂ. ಇದ್ದು, ಇದೂ ಇದುವರೆಗಿನ ದಾಖಲೆಯಾಗಿದೆ.
3 ವರ್ಷಗಳ ಹಿಂದೆ ಅಂಜಲ್‌ಗೆ 1 ಸಾವಿರ ರೂ. ಇದ್ದರೆ, ಅದೇ ದುಬಾರಿ. ಆದರೆ ಈಗ 1,500 ರೂ. ಗಡಿಯೂ ದಾಟಿ 1,700-1,800 ರೂ.ಗೆ ತಲುಪಿರುವುದು ಅಂಜಲ್‌ಗೆ ಬರದ ಸಂಕೇತ. ಇನ್ನು ಬಿಳಿ ಪಾಂಫ್ರೆಟ್‌ಗೆ 700-800 ರೂ. ಆಗಿದ್ದರೆ ಅದುವೇ ಗರಿಷ್ಠ ಆಗಿತ್ತು. ಆದರೆ ಈಗ 1300-1400 ರೂ. ವರೆಗೆ ತಲುಪಿದೆ. 350-400 ರೂ. ಇರುತ್ತಿದ್ದ ಕಪ್ಪು ಪಾಂಫ್ರೆಟ್‌ಗೆ ಈಗ 750 – 800 ರೂ. ಆಗಿದೆ. ಇನ್ನು ಸಣ್ಣಪುಟ್ಟ ಮೀನುಗಳೂ ಕೈಗೆ ಎಟುಕುತ್ತಿಲ್ಲ. ನಿತ್ಯ ಮೀನು ಸೇವಿಸುವ ಮಂದಿ,ಉರಿಬಿಸಿಲಿಗೆ ಮೀನು ಸಿಕ್ಕಿದರೂ ರುಚಿಯೇ ಇಲ್ಲ ಎನ್ನುತ್ತಿದ್ದಾರೆ. ಒಟ್ಟಾರೆ ಮೀನು ಪ್ರಿಯರಿಗೆ ಸಾಕಷ್ಟು ತೊಂದರೆಯಾಗಿದೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…

14 hours ago

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…

14 hours ago

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…

15 hours ago

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…

7 days ago

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…

7 days ago

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…

7 days ago