ಕರಾವಳಿ

ಉಡುಪಿ: ಕರಾವಳಿಯಲ್ಲಿ ಮೀನಿಗೆ ಬರ; ಗಗನಕ್ಕೇರಿದ ಮೀನಿನ ದರ

ಉಡುಪಿ: ಬೇಸಗೆಯ ತಾಪ ಎಲ್ಲೆಡೆ ಪರಿಣಾಮ ಬೀರುತ್ತಿದ್ದು, ಮೀನುಗಾರಿಕಾ ವಲಯಕ್ಕೂ ಬಿಸಿ ತಟ್ಟಿದೆ. ಬಿಸಿಲಿನ ಬೇಗೆಗೆ ತೀರದತ್ತ ಮೀನುಗಳು ಬಾರದೇ ಇರುವುದರಿಂದ ಮೀನುಗಾರಿಕೆಗೆ ಹೊಡೆತ ಬಿದ್ದಿದ್ದು, ಇದರಿಂದ ಬಹುಬೇಡಿಕೆಯ ಮೀನುಗಳ ದರ ದುಬಾರಿಯಾಗಿದೆ.

ಕರಾವಳಿಯಲ್ಲಿಯೇ ಎರಡು- ಮೂರು ದಿನಗಳ ಹಿಂದೆ ಅಂಜಲ್ ಕೆಜಿಗೆ ಬರೋಬ್ಬರಿ 1,800 ರೂ.ಗೆ ತಲುಪಿತ್ತು. ಇದುವರೆಗಿನ ಗರಿಷ್ಠ ಬೆಲೆಯಿದು. ಸದ್ಯ ಮಾರುಕಟ್ಟೆಯಲ್ಲಿ 1,400-1,500 ರೂ.ನಲ್ಲಿ ಮಾರಾಟವಾಗುತ್ತಿದೆ. ಇನ್ನು ಬಿಳಿ ಪಾಂಫ್ರೆಟ್ ಕೆಜಿಗೆ 1,500 ರೂ. ಇದ್ದು, ಇದೂ ಇದುವರೆಗಿನ ದಾಖಲೆಯಾಗಿದೆ.
3 ವರ್ಷಗಳ ಹಿಂದೆ ಅಂಜಲ್‌ಗೆ 1 ಸಾವಿರ ರೂ. ಇದ್ದರೆ, ಅದೇ ದುಬಾರಿ. ಆದರೆ ಈಗ 1,500 ರೂ. ಗಡಿಯೂ ದಾಟಿ 1,700-1,800 ರೂ.ಗೆ ತಲುಪಿರುವುದು ಅಂಜಲ್‌ಗೆ ಬರದ ಸಂಕೇತ. ಇನ್ನು ಬಿಳಿ ಪಾಂಫ್ರೆಟ್‌ಗೆ 700-800 ರೂ. ಆಗಿದ್ದರೆ ಅದುವೇ ಗರಿಷ್ಠ ಆಗಿತ್ತು. ಆದರೆ ಈಗ 1300-1400 ರೂ. ವರೆಗೆ ತಲುಪಿದೆ. 350-400 ರೂ. ಇರುತ್ತಿದ್ದ ಕಪ್ಪು ಪಾಂಫ್ರೆಟ್‌ಗೆ ಈಗ 750 – 800 ರೂ. ಆಗಿದೆ. ಇನ್ನು ಸಣ್ಣಪುಟ್ಟ ಮೀನುಗಳೂ ಕೈಗೆ ಎಟುಕುತ್ತಿಲ್ಲ. ನಿತ್ಯ ಮೀನು ಸೇವಿಸುವ ಮಂದಿ,ಉರಿಬಿಸಿಲಿಗೆ ಮೀನು ಸಿಕ್ಕಿದರೂ ರುಚಿಯೇ ಇಲ್ಲ ಎನ್ನುತ್ತಿದ್ದಾರೆ. ಒಟ್ಟಾರೆ ಮೀನು ಪ್ರಿಯರಿಗೆ ಸಾಕಷ್ಟು ತೊಂದರೆಯಾಗಿದೆ.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕಾಗುಡ್ಡೆ ಎಂಬಲ್ಲಿ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಮನೆಯ ಚಾವಣಿ…

2 hours ago

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದಂತಹ ಅವಘಡದಲ್ಲಿ ಮನೆಯ ಪೀಠೋಪಕರಣಗಳು ಹಾಗೂ ದಿನನಿತ್ಯ…

2 hours ago

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಾಷಿಂಗ್ಟನ್ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಯು. ಟಿ. ಖಾದರ್ ಫರೀದ್ ಅವರ ಸಾರ್ವಜನಿಕ ಸೇವೆ…

7 hours ago

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ಫಿಫಾ ವಿಶ್ವಕಪ್ 2026ರ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳ ವೇಳೆ ನಡೆದ ಗಲಾಟೆ ಮತ್ತು ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ, ಅರ್ಜೆಂಟೀನಾ…

8 hours ago

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

'ನ್ಯೂಯಾರ್ಕ್ ಟೈಮ್ಸ್' ತನ್ನ ವರದಿಯಲ್ಲಿ 'ಪಾಕಿಸ್ತಾನಿ ಕಾಶ್ಮೀರ' ಎಂದು ಉಲ್ಲೇಖಿಸಿರುವುದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕದಲ್ಲಿರುವ ಭಾರತೀಯ ರಾಯಭಾರ…

8 hours ago

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಚೀನಾ ಪಾಕಿಸ್ತಾನದ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್‌ಗಳನ್ನು ಪೂರೈಸಿದೆ ಎಂಬ ವರದಿಗಳು ಜಾಗತಿಕ ಆತಂಕಕ್ಕೆ ಕಾರಣವಾಗಿವೆ. ಈ ಕುರಿತು…

8 hours ago