ಯಕ್ಷಮಿತ್ರರು ಪಂಜಿನಡ್ಕ ಹಾಗು ಸುರೇಶ್ ಕೊಲಕಾಡಿ ಶಿಷ್ಯ ವೃಂದ ಹಾಗೂ ಅಭಿಮಾನಿ ಬಳಗ ಇವರ ಜಂಟಿ ಆಶ್ರಯದಲ್ಲಿ ಸುರೇಶ್ ಕೊಲಕಾಡಿ ಇವರ 35ನೇ ವರ್ಷದ ಯಕ್ಷ ಪಯಣದ ಪ್ರಯುಕ್ತ ಸುರೇಶ್ ಕೊಲಕಾಡಿಯವರಿಗೆ ಸಾರ್ವಜನಿಕರ ಸಂಮಾನ ಬಿರುದು ಪ್ರದಾನ ಮತ್ತು ಯಕ್ಷಗಾನ ಮೇ.31ರಂದು ನಡೆಯಲಿದೆ.
ಸಂಜೆ 6ರಿಂದ ಶ್ರೀ ಕೋಡ್ದಬ್ಬು ಧೂಮಾವತಿ ದೈವಸ್ಥಾನದ ವಠಾರ ಕಕ್ವ ಮುಲ್ಕಿಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಸಂಜೆ 6ರಿಂದ ದೇವಿ ಮಹಾತ್ಮೇ ಯಕ್ಷಗಾನ ಬಯಲಾಟ ನಡೆಯಲಿದ್ದು, ರಾತ್ರಿ 8;30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನದ ಹಿರಿಯ ಕಲಾವಿದರಾದ ಅಂಬರೀಶ್ ಶೆಟ್ಟಿಯವರಿಗೆ ಗುರುವಂದನೆ ಬಳಿಕ ಯಕ್ಷಗಾನದಲ್ಲಿ ಆರ್ಥಿಕವಾಗಿ ಹಿಂದುಳಿದ ಕಲಾವಿದರಿಗೆ ಗೌರವಧನ ನೀಡಲಾಗುವುದು. ಇನ್ನು ಪಂಜಿನಡ್ಕ ಶಾಲೆಯಲ್ಲಿ 10ನೇ ತರಗತಿಯಲ್ಲಿ 90% ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಧನಸಹಾಯ ನೀಡಲಿದ್ದಾರೆ. ಉತ್ತಮ ಸೇವೆಗಾಗಿ 2023ನೇ ಸಾಲಿನ ರಾಜ್ಯದ ಸಿಎಂ ಅವರಿಂದ ಪದಕ ಸ್ವೀಕರಿಸಿದ ಶ್ರೀಮತಿ ಕಾತ್ಯಾಯಿನಿ ಆಳ್ವ ಇವರಿಗೆ ಸಂಮಾನ ನಡೆಯಲಿದೆ. ಇವರ ಜೊತೆಗೆ ಈ ಸಂಮಾನವನ್ನು ಉತ್ತಮ ಸಮಾಜಸೇವೆಗೈದಂತಹ ಶ್ರೀಮತಿ ರೇಖಾ ದೇವಾಡಿಗ ಪಡೆದುಕೊಳ್ಳಲಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಖ್ಯಾತ ಶನಿಪೂಜೆ ಅರ್ಥಧಾರಿ ಕಿರಣ್ ಕುಮಾರ್ ಪಡುಪಣಂಬೂರ್ ಅವರ ಬಗ್ಗೆಗಿನ ಕೃತಿ ಬಿಡುಗಡೆಗೊಳ್ಳಲಿದೆ. ಮುಖ್ಯವಾಗಿ ವಿಶೇಷ ಸನ್ಮಾನಿತರಾಗಿ ತುಳು ಹಾಗೂ ಕನ್ನಡ ಚಿತ್ರರಂಗದ ಪ್ರಸಿದ್ಧ ಕಲಾವಿದರಾದ `ಕಾಂತಾರ’ ಚಲನಚಿತ್ರ ಖ್ಯಾತಿಯ ಪ್ರಕಾಶ್ ಕೆ ತುಮಿನಾಡು ಹಾಗೂ ದೀಪಕ್ ರೈ ಪಾಣಾಜೆ ಆಗಮಿಸಲಿದ್ದಾರೆ. ಇನ್ನು ಈ ಎಲ್ಲಾ ಕಾರ್ಯಕ್ರಮಗಳು ಅಭಿಮತ ಟಿವಿ ಯೂಟ್ಯುಬ್ ಚಾನಲ್ನಲ್ಲಿ ನೇರಪ್ರಸಾರಗೊಳ್ಳಲಿದೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…
ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…
ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…
ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು…
ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.…
ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ…