ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಈ ಬಾರಿ ಕೊಳೆ ರೋಗ ಬಾಧೆ ತಡೆಯಲು ಔಷಧಿ ಸಿಂಪಡಿಸುವುದಕ್ಕೆ ಎಡೆಬಿಡದೆ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ.
ಈ ವರ್ಷ ಮುಂಗಾರು ಮಳೆ ನಿರೀಕ್ಷೆಗಿಂತ ಮೊದಲೇ ಆರಂಭವಾಗಿರುವುದರಿ0ದ ರೈತರಿಗೆ ಅಡಿಕೆ ಕೊಳೆರೋಗಕ್ಕೆ ಸಂಬ0ಧಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಅಡಿಕೆ ತೋಟಗಳನ್ನು ಹೊಂದಿರುವ ಕೃಷಿಕರು ಇದುವರೆಗೆ ಮೇ ತಿಂಗಳ ಕೊನೆಯಲ್ಲಿ ಮೊದಲ ಸುತ್ತಿನ ಔಷಧಿ ಸಿಂಪರಣೆಯನ್ನು ಮಾಡುತ್ತಿದ್ದರು. ಈ ಬಾರಿ ಮೇ ತಿಂಗಳ ಕೊನೆಯಲ್ಲಿ ಮಳೆಬಂದಿರುವುದರಿ0ದ ಔಷಧಿ ಸಿಂಪರಣೆ ಸಾಧ್ಯವಾಗಿಲ್ಲ. ಮಳೆಗಾಲದಲ್ಲಿ ಅಡಿಕೆ ಬೆಳೆಯನ್ನು ಶಿಲೀಂಧ್ರಗಳಿ0ದ ಹರಡುವ ಕೊಳೆ ರೋಗ ಭಾರೀ ಪ್ರಮಾಣದಲ್ಲಿ ನಾಶ ಮಾಡುತ್ತದೆ. ಇದಕ್ಕೆ ಪರಿಹಾರವಾಗಿ ಬೋರ್ಡೋ ದ್ರಾವಣವನ್ನು ಔಷಧಿಯಾಗಿ ಸಿಂಪಡಿಸಲಾಗುತ್ತದೆ.
ಮಳೆಗಾಲ ಆರಂಭಕ್ಕೆ ಮೊದಲೇ ಒಂದು ಬಾರಿ ಈ ದ್ರಾವಣ ಸಿಂಪರಿಸಿದರೆ ಬಳಿಕ 2-3 ಬಾರಿ ಈ ದ್ರಾವಣವನ್ನು ರೋಗ ಹತೋಟಿಗಾಗಿ ಸಿಂಪಡಿಸಲಾಗುತ್ತದೆ. ಕಳೆದ ಬಾರಿಯೂ ಔಷಧಿ ಸಿಂಪಡಿಸಲು ಮಳೆ ಬಿಡುವು ನೀಡಿರಲಿಲ್ಲ. ಜೊತೆಗೆ ಕಳೆದ ಬೇಸಿಗೆಯಲ್ಲಿ ನೀರಿಲ್ಲದೆ ತೋಟಗಳು ಒಣಗಿದ್ದವು, ಸಹಜವಾಗಿ ಫಸಲೂ ಅರ್ಧಕ್ಕರ್ಧ ಕಡಿಮೆಯಾಗಿತ್ತು. ಈ ಬಾರಿ ಬೇಸಿಗೆಯಲ್ಲಿ ಮಳೆ ಬಂದುದರಿAದ ಉತ್ತಮ ಫಸಲು ನಿರೀಕ್ಷೆ ಇತ್ತು. ಆದರೆ ಕೊಳೆ ನಿಯಂತ್ರಣ ಸಾಧ್ಯವಾಗದಿದ್ದರೆ ಅಡಿಕೆ ಎಳತಾಗಿರುವಾಗಲೇ ಉದುರಿ ನಷ್ಟ ಸಂಭವಿಸುವ ಆತಂಕವನ್ನು ಕೃಷಿಕರು ಎದುರಿಸುತ್ತಿದ್ದಾರೆ. ಅಡಿಕೆಗೆ ಔಷಧಿ ಸಿಂಪಡಿಸಲು ನುರಿತ ಕಾರ್ಮಿಕರು ಅಗತ್ಯ, ಅವರ ಕೊರತೆಯೂ ಕೃಷಿಕರನ್ನು ಬಾಧಿಸುತ್ತಿದೆ. ಆಧುನಿಕ ಪರಿಹಾರಗಳು ಬಂದಿವೆಯಾದರೂ ಅವುಗಳು ಕಾರ್ಮಿಕರ ಕೊರತೆಗೆ ಪರಿಹಾರ ಹುಡುಕುವ ಮಾದರಿಗಳಾಗಿ ಅಭಿವೃದ್ಧಿ ಹೊಂದಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಿಂದೂ ವಿರೋಧಿ ಬೆಳವಣಿಗೆಗಳನ್ನು ಖಂಡಿಸಿ ಉಡುಪಿ ಜಿಲ್ಲೆಯ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟ…
ಮಂಗಳೂರಿನಿಂದ ಜಮ್ಮು ಕತ್ರಾಕ್ಕೆ ಸಂಚರಿಸುತ್ತಿದ್ದ ನವಯುಗ ಎಕ್ಸ್ಪ್ರೆಸ್ ರೈಲು ಸ್ಥಗಿತಗೊಂಡು ಐದು ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ರೈಲು ಸೇವೆಯನ್ನು ಪುನರಾರಂಭಿಸುವಂತೆ…
ತುಳುನಾಡಿನ ಯುವಕರು ಹಿಂದು - ಮುಸ್ಲಿಂ ಎಂದು ಬಿಸಿ ಬಿಸಿ ವಾಗ್ವಾದದಲ್ಲಿ ತೊಡಗಿದ್ದರೆ, ಕುಪ್ಪೆಪದವು ಗ್ರಾಮ ಪಂಚಾಯತ್ ಮುಂಭಾಗ ಮಂಜೂರಾದ…
ಮಂಗಳೂರು ನಗರದ ಅತ್ಯಂತ ವಾಹನ ದಟ್ಟನೆಯ ಪ್ರದೇಶವಾದ ನಂತೂರು ಜಂಕ್ಷನ್ನಲ್ಲಿ ವಾಹನಗಳಿಗೆ ಫ್ರೀ ಲೆಫ್ಟ್ ಅಂದರೆ ಎಡಭಾಗದಲ್ಲಿ ತಿರುವು ತೆಗೆದುಕೊಂಡು…
ಮಾನವೀಯತೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದ್ದಾರೆ. ಜಯಶ್ರೀಕೃಷ್ಣ…
ಸಾಲು ಸಾಲು ದುರಂತ ಸಂಭವಿಸಿದರು ಪ್ರವಾಸಿಗರು ಮಾತ್ರ ಎಚ್ಚೆತ್ತೊಕೊಳ್ಳುತ್ತಿಲ್ಲ. ಅಪಾಯದ ಎಚ್ಚರಿಕೆ ಕೊಟ್ರೂ ಡೊಂಟ್ ಕೇರ್ ಎನ್ನದ ಪ್ರವಾಸಿಗರು ಹುಚ್ಚಾಟ…