ಬ್ರಹ್ಮಾವರ ತಾಲೂಕು ಯಡ್ತಾಡಿ ಗ್ರಾಮದ ಪ್ರಗತಿಪರ ರೈತ ಹಾಗೂ ಸಮಾಜಸೇವಕ 79ರ ಇಳಿ ವಯಸ್ಸಿನ ಯಡ್ತಾಡಿ ಸತೀಶಕುಮಾರ ಶೆಟ್ಟಿ ಅವರು ಯೋಗ ಧ್ಯಾನ ಹಾಗೂ ಪ್ರಾಣಾಯಾಮದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊ0ಡಿದ್ದಾರೆ.
ತಾವು 1983 ರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯ ಯೋಗ ವಿಭಾಗದಿಂದ ವೈಜ್ಞಾನಿಕವಾಗಿ ಯೋಗ ಕಲಿತು ಪ್ರತಿದಿನ ತಪ್ಪದೇ ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಘಂಟೆ ಯೋಗಾಭ್ಯಾಸ ಮಾಡುತ್ತಿದ್ದು ತಮ್ಮ ಆರೋಗ್ಯ ಕಾಪಾಡಿಕೊಂಡಿರುವುದಾಗಿ ತಿಳಿಸಿರುತ್ತಾರೆ. ಇವರು ಹಲವಾರು ಯೋಗ ಶಿಬಿರಗಳಲ್ಲಿ ಭಾಗವಹಿಸಿ ಯೋಗದ ಕುರಿತು ಪ್ರಾತ್ಯಕ್ಷಿಕೆ ಹಾಗೂ ಸಲಹೆ ಸೂಚನೆ ನೀಡಿರುತ್ತಾರೆ. ನಮ್ಮ ದೇಶದ ಪ್ರಾಚೀನ ಋಷಿ ಪರಂಪರೆಯಿ0ದ ಬಂದ ಈ ಜ್ಞಾನ ಭಂಡಾರದ ಕುರಿತು ಹಲವಾರು ಪುಸ್ತಕಗಳನ್ನು ಓದಿ ಅದರ ಪ್ರಯೋಜನ ಪಡೆದಿರುತ್ತಾರೆ. ತಮ್ಮ ಮಕ್ಕಳಿಗೂ ಚಿಕ್ಕಂದಿನಲ್ಲೇ ಯೋಗಾಭ್ಯಾಸದ ಕುರಿತು ಆಸಕ್ತಿ ಹುಟ್ಟಿಸಿರುತ್ತಾರೆ. ಯೋಗ ಅಭ್ಯಾಸವನ್ನು ನುರಿತ ಗುರುಗಳಿಂದಲೇ ಅವರ ಮಾರ್ಗದರ್ಶನದಲ್ಲಿ ಯೋಗ ಕಲಿಯಬೇಕೆಂದು ಅವರ ಸಲಹೆ. ಯೋಗಾಭ್ಯಾಸವನ್ನು ಎಂಟು ವರ್ಷದ ಮಕ್ಕಳ ನಂತರ ವೃದ್ಧರೂ ಅತಿವೃದ್ಧರೂ ವ್ಯಾಧಿತರೂ ದುರ್ಬಲರೂ ಅವರವರ ಶಕ್ತ್ಯಾನುಸಾರ ನಿರಂತರ ಮಾಡಿದಲ್ಲಿ ಸಿದ್ಧಿಯನ್ನು ಪಡೆಯಬಹುದು. ಪ್ರತಿದಿನ ಬೆಳಿಗ್ಗೆ ಶೌಚ, ದಂತ ಧಾವನಾದಿಗಳನ್ನು ತೀರಿಸಿ, ಪ್ರಶಾಂತ ಗಾಳಿ ಬೆಳಕು ಇರುವ ವಾತಾವರಣದಲ್ಲಿ ಯೋಗ ಪ್ರಾಣಾಯಾಮ ಧ್ಯಾನ ಮಾಡತಕ್ಕದ್ದು. ಸಹನೆ, ಶ್ರದ್ಧೆ, ಮಿತ ಆಹಾರ, ತಾಳ್ಮೆಯಿಂದ ಯೋಗಾಭ್ಯಾಸ ಮಾಡಿದಲ್ಲಿ ತುಂಬಾ ಪ್ರಯೋಜನ ಪಡೆಯಬಹುದು ಎಂದು ಶೆಟ್ಟರ ಅಭಿಪ್ರಾಯ. ತನ್ನ ನಿರಂತರ ಯೋಗ ಸಾಧನೆಗೆ ಸಹಕರಿಸಿದ ಮಣಿಪಾಲ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾಕ್ಟರ್ ಮಂಜುನಾಥ ಹಂದೆ ಅಲ್ಲದೆ ತಮ್ಮ ಕುಟುಂಬ ವೈದ್ಯರಾದ ಡಾಕ್ಟರ್ ರಾಮಚಂದ್ರ ಬಾಯಿರಿ ಹಾಗೂ ಮಣಿಪಾಲದ ಯೋಗ ಕೇಂದ್ರದವರಿಗೂ ಅವರು ತಮ್ಮ ಕೃತಜ್ಞತೆ ವ್ಯಕ್ತಪಡಿಸಿರುತ್ತಾರೆ. ನಮ್ಮ ಪ್ರಧಾನಮಂತ್ರಿ ಮೋದಿ ಅವರು ಪ್ರತಿವರ್ಷ ಜೂನ್ 21ರಂದು ವಿಶ್ವಯೋಗ ದಿನವೆಂದು ಘೋಷಿಸಿದ್ದು ಅದು ಈಗ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಈ ವಿಶ್ವಯೋಗ ದಿನದ ಪ್ರಯೋಜನವನ್ನು ಎಲ್ಲರೂ ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಿಶ್ವ ಯೋಗ ದಿನಾಚರಣೆಯ ಸಂದರ್ಭ ಸಂದೇಶ ನೀಡಿರುತ್ತಾರೆ.
ಬಸ್ವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಾಪು…
ಮುಡಿಪು-ಬಿ. ಸಿ. ರೋಡ್ ರಸ್ತೆಯ ಸಜಿಪ ಎಂಬಲ್ಲಿ ಕಾರು ಮತ್ತು ಆಕ್ಟಿವಾ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ…
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ದೇವಿ ಮೂಕಾಂಬಿಕಾ…
ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಸಂಪರ್ಕದ ಕೊಂಡಿ ಕಳಚಿ ಬಿದ್ದು, ಜನರು ದ್ವೀಪದಂತೆ, ಹಳ್ಳಿಯೊಳಗೆ…
ಜ್ವರದಿಂದ ಬಳಲುತ್ತಿದ್ದ ಬಾಲಕಿಯೊರ್ವಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದೆ. ಅಲ್ಲಿಪಾದೆ ಅನೇಜ…
ಬಿಸಿರೋಡಿನ ಪ್ರಸಿದ್ದ ಕ್ಯಾಂಟೀನ್ ಒಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ವಲ್ಪದರಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಬಿಸಿರೋಡಿನ ಮಿನಿ ವಿಧಾನ ಸೌಧದ…