ತುಳುನಾಡಿನ ಇತಿಹಾಸದ ಭವ್ಯತೆಯನ್ನು ಸಾರುವ ದೇವಾಲಯಗಳು, ಕೋಟೆಗಳನ್ನ ಕೆಲ ಪ್ರದೇಶಗಳಲ್ಲಿ ಇನ್ನು ನೋಡಬಹುದಾಗಿದೆ.
ಕುಂಬಳೆ ಅರಸರ ಕೇಂದ್ರವಾಗಿದ್ದ ಕಣ್ವಪುರ ಸನಿಹದಲ್ಲೇ ಕೆಳದಿ ನಾಯಕರ ಕುಂಬ್ಳೆ ಕೋಟೆ ಇಂದಿಗೂ ಇದೆ. ಈ ಕೋಟೆಯನ್ನು 1608 ರ ಸುಮಾರಿಗೆ ಇಕ್ಕೇರಿ ದೊರೆ ಹಿರಿಯ ವೆಂಕಟಪ್ಪ ನಾಯಕ ನಿರ್ಮಿಸಿದ್ದಾರೆ ಎಂದು ಇತಿಹಾಸ ಹೇಳತ್ತೆ. ಇತಿಹಾಸದಲ್ಲಿ ಬಾಳಿದ ಕೋಟೆ ಇಂದು ವಿನಾಶದ ಅಂಚಿಕೆ ಹೋಗ್ತಾ ಇದೆ. ಮಳೆಗಾಲದ ಸಮಯದಲ್ಲಿ ಕೋಟೆಯ ಕಲ್ಲುಗಳು ಅದರ ಸುತ್ತ ಮುತ್ತ ಹಸಿರಿನ ಭವ್ಯತೆಯಲ್ಲಿ ಮರೆಯಾಗುವ ಜೊತೆಯಲ್ಲಿ ಇತಿಹಾಸದಿಂದಲೂ ಮರೆಯಾಗುವ ಭೀತಿಯಲ್ಲಿ ಇದೆ. ಸರಿಯಾದ ನಿರ್ವಹಣೆ ಇಲ್ಲದೆ ಇತಿಹಾಸ ಕೋಟೆ ಅಸಹಾಯಕವಾಗಿ ನಿಂತಿದೆ.
ಸುತ್ತಲು ಹರಡಿದ ಹಸಿರ ಕಾಡು ಪೊದೆ ಕಣ್ಣಿಗೆ ಸುಂದರಾವಾಗಿ ಕಂಡರೂ ಅದು ಕೋಟೆಯ ಸುತ್ತುವರೆದಾಗ ಇತಿಹಾಸದ ಪತನವೇ ಸರಿ. ಪ್ರಮುಖ ಯಾತ್ರಾ ಸ್ಥಳವನ್ನಾಗಿ ಮಾರ್ಪಾಡು ಮಾಡಬಹುದಾದ ಸ್ಥಳ, ಸನಿಹವೇ ಇರುವ ರಾಷ್ಟ್ರೀಯ ಹೆದ್ದಾರಿ, ದೇವಾಲಯಗಳು ಈ ಕೋಟೆಯನ್ನು ದೊಡ್ಡ ಪ್ರವಾಸಿ ಕೇಂದ್ರವನ್ನಾಗಿ ಮಾಡಬಹುದು. ಆದರೆ ಈ ಬಗ್ಗೆ ಸರಕಾರ ಮುತುವರ್ಜಿ ವಹಿಸದೆ ಅದು ಹಾಗೆ ಉಳಿದಿರುವುದು ಬೇಸರದ ಸಂಗತಿ. ಕುಂಬ್ಳೆ ಕೋಟೆ ಇತ್ತೀಚಿಗೆ ಅವ್ಯಹಾರಗಳ ತಾಣವಾಗಿದೆ. ಈ ತಾಣ ಧೂಮಪಾನ ಮಧ್ಯಪಾನ ವ್ಯಸನಿಗಳ ಮಿನಿ ಬಾರ್ ಆಗಿ ಕೂಡ ಮಾರ್ಪಟ್ಟಿರುವುದು ದುರಂತ. ಸ್ಥಳೀಯ ಅಧಿಕಾರಿಗಳು, ಕೇರಳ ಪುರಾತತ್ವ ಇಲಾಖೆ ಈ ಬಗ್ಗೆ ಗಮನ ಹರಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಕಾಸರಗೋಡು ಜಿಲ್ಲೆಯಲ್ಲಿ ಬೇಕಲ ಕೋಟೆ ಒಂದು ಬಿಟ್ಟು ಮತ್ತೆಲ್ಲಾ ಕೋಟೆಯ ವ್ಯಥೆ ಇದುವೇ ಆಗಿದೆ.
ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿದ್ದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ…
ನಗರದ ಲಾಲ್ಬಾಗ್ ಸಿಗ್ನಲ್ ಸಮೀಪ ಶನಿವಾರ ಮಧ್ಯಾಹ್ನ ಸಾರ್ವಜನಿಕರ ಕಣ್ಣೆದುರಲ್ಲೇ ಭೀಕರ ಮಾರಕಾಸ್ತ್ರ ದಾಳಿ ನಡೆದಿದ್ದು, ಪ್ರಸಿದ್ಧ ರೌಡಿಶೀಟರ್ ಒಬ್ಬ…
ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಷಸೇವನೆ…
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ…
ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…