ಜನ ಮನದ ನಾಡಿ ಮಿಡಿತ

Advertisement

ಪುತ್ತೂರು: ಭೂ ವಿಜ್ಞಾನಿ ಮಹಾದೇಶ್ವರ ಎಚ್ ಎಸ್ ವರ್ಗಾವಣೆಗೆ ಒತ್ತಾಯ

ಮಂಗಳೂರು ಗಣಿ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಅಮಾನತುಗೊಂಡಿರುವ ಬೆನ್ನಲ್ಲೇ, ಅವರ ಭ್ರಷ್ಟಾಚಾರಕ್ಕೆ ಬೆಂಬಲವಾಗಿ ನಿಂತಿದ್ದ ಭೂವಿಜ್ಞಾನಿ ಡಾ. ಮಹದೇಶ್ವರ ಎಚ್ ಎಸ್ ವರ್ಗಾವಣೆಗೆ ಸಾಮಾಜಿಕ ಹೋರಾಟಗಾರ ನವೀನ್ ಕುಮಾರ್ ರೈ ಕೈಕಾರ ಪಟ್ಟು ಹಿಡಿದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಡಾ. ಮಹಾದೇಶ್ವರ ಎಚ್ ಎಸ್ ಸರಿ ಸುಮಾರು 5 ವರ್ಷದಿಂದ ಜಿಲ್ಲೆಯಲ್ಲೇ ಜಾಂಡಾ ಹೂಡಿದ್ದಾರೆ. ರಾಜ್ಯ ಸರಕಾರದ ಸುತ್ತೋಲೆಯ ಪ್ರಕಾರ ಒಂದು ತಾಲೂಕು ಅಧಿಕಾರಿಯಾಗಿ ಇರುವವರು ಎರಡು ವರ್ಷದಿಂದ ಜಾಸ್ತಿ ಇರುವಾಗೆ ಇಲ್ಲ. ಆದರೂ ಸರಕಾರ ವರ್ಗಾವಣೆ ಎಂಬ ನೆಪ ಮಾಡಿದರು ಕನಿಷ್ಠ ಮೂರು ವರ್ಷ ಇರಬಹುದು. ಆದರೆ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಯಾಗಿದ್ದ ಮಹಾದೇಶ್ವರ ಎಚ್ ಎಸ್ ಸರಿ ಸುಮಾರು 5 ವರ್ಷವಾಗುತ್ತಾ ಬಂದಿದೆ.

ಇವರಿಗೆ 2024ರ ಅಕ್ಟೋಬರ್ 28 ರಂದು ವರ್ಗಾವಣೆ ಆದೇಶವಾಗಿತ್ತು. ಆದ್ರೆ ಹಿರಿಯ ಭೂವಿಜ್ಞಾನಿಯಾದ ಕೃಷ್ಣವೇಣಿಯವರು ಸರಕಾರದ ಆದೇಶವನ್ನು ಧಿಕ್ಕರಿಸಿ ಮಾದೇಶ್ವರ ಎಚ್ ಎಸ್ ಎಂಬ ಅಧಿಕಾರಿಯನ್ನು ರಿಲೀವ್ ಮಾಡಲಿಲ್ಲ. ಕಾರಣ ತನ್ನ ಲಂಚದ ಹಣಕ್ಕೆ ಸಹಕಾರ ನೀಡುತ್ತಿದ್ದ ಎಂಬ ಒಂದೇ ಕಾರಣಕ್ಕೆ ದೊಡ್ಡ ದೊಡ್ಡ ಅಕ್ರಮ ಮಾಫಿಯಾದ ಜನರನ್ನು ಇದೇ ಭೂ ವಿಜ್ಞಾನಿಯಾದ ಮಹಾದೇಶ್ವರ ಎಚ್ ಎಸ್ ಅವರು ಹಿರಿಯ ಭೂವಿಜ್ಞಾನಿಯಾದ ಕೃಷ್ಣವೇಣಿ ಅವರಿಗೆ ಪರಿಚಯ ಮಾಡಿದ್ದರು. ಇದು ಸಹ ಭೂ ವಿಜ್ಞಾನಿಯಾದ ಮಹದೇಶ್ವರ ಎಚ್ ಎಸ್ ಇವರಿಗೆ ವರ್ಗಾವಣೆ ಆಗದ ರೀತಿಯಲ್ಲಿ ಸಹಕಾರವಾಗಿತ್ತು. ಸರಕಾರ ವರ್ಗಾವಣೆಯನ್ನು ಮಾಡಿದ್ದರು ಈ ವರ್ಗಾವಣೆ ಆದೇಶವನ್ನೇ ತನ್ನ ಹಿಡಿತದಲ್ಲಿ ಇಟ್ಟುಕೊಂಡು ಸರಕಾರಕ್ಕೆ ಸವಾಲು ಎಸೆದಂತಹ ಲಂಚದ ಅಧಿಕಾರಿಯದ ಕೃಷ್ಣವೇಣಿಯವರ ಆಟ ನಿಂತು ಹೋಯಿತು. ಆದರೆ ಭೂವಿಜ್ಞಾನಿ ಮಹಾದೇಶ್ವರ ಎಚ್ ಎಸ್ ಯಾವಾಗ ವರ್ಗಾವಣೆ ಆಗುತ್ತಾರಾ ಏನು ಎಂಬುದು ತಿಳಿದಿಲ್ಲ. ಸರಕಾರ ತಕ್ಷಣ ಈ ವರ್ಗಾವಣೆ ಆದೇಶವನ್ನು ಪರಿಗಣಿಸಿ ಕೃಷ್ಣವೇಣಿ ಮತ್ತು ಭೂ ವಿಜ್ಞಾನಿಯಾದ ಮಾದೇಶ್ವರ ಎಚ್ ಎಸ್ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಜಿಲ್ಲೆಯ ಜನರ ಒತ್ತಾಯ. ಇನ್ನು ಇದಕ್ಕೆ ಪೂರಕವಾಗಿ ಭೂ ವಿಜ್ಞಾನಿ ಮಹಾದೇಶ್ವರ ಎಚ್ ಎಸ್ ಅವರ ಜೊತೆ ಸರ್ಕಾರದಿಂದ ಅನುಮತಿ ಪಡೆದ ವ್ಯಕ್ತಿ ಮಾತನಾಡಿರುವ ಆಡಿಯೋ ಕೂಡ ವೈರಲ್ ಆಗಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

ಬಂಟ್ವಾಳ: ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮನೆಯಲ್ಲಿ ನಡೆದ ಕಳವು ಪ್ರಕರಣದ ಆರೋಪಿಗಳು ಸರೆ..!

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿಯವರ ಅವರ ಮುಖ್ಯ ಸಲಹೆಗಾರರನ್ನಾಗಿ ಸುನಿಲ್ ಕಾನುಗೋಲು ನೇಮಕ…!

ಮಂಗಳೂರು: ಕಲ್ಲುಗುಡ್ಡೆ ನಿವಾಸಿ ಅರ್. ಪೈನ್ ಮೆಹತಾಬ್ (18) ನಾಪತ್ತೆ..!

error: Content is protected !!