ಮಂಗಳೂರು ಗಣಿ ಇಲಾಖೆಯ ಹಿರಿಯ ಭೂವಿಜ್ಞಾನಿ ಕೃಷ್ಣವೇಣಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಅಮಾನತುಗೊಂಡಿರುವ ಬೆನ್ನಲ್ಲೇ, ಅವರ ಭ್ರಷ್ಟಾಚಾರಕ್ಕೆ ಬೆಂಬಲವಾಗಿ ನಿಂತಿದ್ದ ಭೂವಿಜ್ಞಾನಿ ಡಾ. ಮಹದೇಶ್ವರ ಎಚ್ ಎಸ್ ವರ್ಗಾವಣೆಗೆ ಸಾಮಾಜಿಕ ಹೋರಾಟಗಾರ ನವೀನ್ ಕುಮಾರ್ ರೈ ಕೈಕಾರ ಪಟ್ಟು ಹಿಡಿದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಡಾ. ಮಹಾದೇಶ್ವರ ಎಚ್ ಎಸ್ ಸರಿ ಸುಮಾರು 5 ವರ್ಷದಿಂದ ಜಿಲ್ಲೆಯಲ್ಲೇ ಜಾಂಡಾ ಹೂಡಿದ್ದಾರೆ. ರಾಜ್ಯ ಸರಕಾರದ ಸುತ್ತೋಲೆಯ ಪ್ರಕಾರ ಒಂದು ತಾಲೂಕು ಅಧಿಕಾರಿಯಾಗಿ ಇರುವವರು ಎರಡು ವರ್ಷದಿಂದ ಜಾಸ್ತಿ ಇರುವಾಗೆ ಇಲ್ಲ. ಆದರೂ ಸರಕಾರ ವರ್ಗಾವಣೆ ಎಂಬ ನೆಪ ಮಾಡಿದರು ಕನಿಷ್ಠ ಮೂರು ವರ್ಷ ಇರಬಹುದು. ಆದರೆ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಯಾಗಿದ್ದ ಮಹಾದೇಶ್ವರ ಎಚ್ ಎಸ್ ಸರಿ ಸುಮಾರು 5 ವರ್ಷವಾಗುತ್ತಾ ಬಂದಿದೆ.
ಇವರಿಗೆ 2024ರ ಅಕ್ಟೋಬರ್ 28 ರಂದು ವರ್ಗಾವಣೆ ಆದೇಶವಾಗಿತ್ತು. ಆದ್ರೆ ಹಿರಿಯ ಭೂವಿಜ್ಞಾನಿಯಾದ ಕೃಷ್ಣವೇಣಿಯವರು ಸರಕಾರದ ಆದೇಶವನ್ನು ಧಿಕ್ಕರಿಸಿ ಮಾದೇಶ್ವರ ಎಚ್ ಎಸ್ ಎಂಬ ಅಧಿಕಾರಿಯನ್ನು ರಿಲೀವ್ ಮಾಡಲಿಲ್ಲ. ಕಾರಣ ತನ್ನ ಲಂಚದ ಹಣಕ್ಕೆ ಸಹಕಾರ ನೀಡುತ್ತಿದ್ದ ಎಂಬ ಒಂದೇ ಕಾರಣಕ್ಕೆ ದೊಡ್ಡ ದೊಡ್ಡ ಅಕ್ರಮ ಮಾಫಿಯಾದ ಜನರನ್ನು ಇದೇ ಭೂ ವಿಜ್ಞಾನಿಯಾದ ಮಹಾದೇಶ್ವರ ಎಚ್ ಎಸ್ ಅವರು ಹಿರಿಯ ಭೂವಿಜ್ಞಾನಿಯಾದ ಕೃಷ್ಣವೇಣಿ ಅವರಿಗೆ ಪರಿಚಯ ಮಾಡಿದ್ದರು. ಇದು ಸಹ ಭೂ ವಿಜ್ಞಾನಿಯಾದ ಮಹದೇಶ್ವರ ಎಚ್ ಎಸ್ ಇವರಿಗೆ ವರ್ಗಾವಣೆ ಆಗದ ರೀತಿಯಲ್ಲಿ ಸಹಕಾರವಾಗಿತ್ತು. ಸರಕಾರ ವರ್ಗಾವಣೆಯನ್ನು ಮಾಡಿದ್ದರು ಈ ವರ್ಗಾವಣೆ ಆದೇಶವನ್ನೇ ತನ್ನ ಹಿಡಿತದಲ್ಲಿ ಇಟ್ಟುಕೊಂಡು ಸರಕಾರಕ್ಕೆ ಸವಾಲು ಎಸೆದಂತಹ ಲಂಚದ ಅಧಿಕಾರಿಯದ ಕೃಷ್ಣವೇಣಿಯವರ ಆಟ ನಿಂತು ಹೋಯಿತು. ಆದರೆ ಭೂವಿಜ್ಞಾನಿ ಮಹಾದೇಶ್ವರ ಎಚ್ ಎಸ್ ಯಾವಾಗ ವರ್ಗಾವಣೆ ಆಗುತ್ತಾರಾ ಏನು ಎಂಬುದು ತಿಳಿದಿಲ್ಲ. ಸರಕಾರ ತಕ್ಷಣ ಈ ವರ್ಗಾವಣೆ ಆದೇಶವನ್ನು ಪರಿಗಣಿಸಿ ಕೃಷ್ಣವೇಣಿ ಮತ್ತು ಭೂ ವಿಜ್ಞಾನಿಯಾದ ಮಾದೇಶ್ವರ ಎಚ್ ಎಸ್ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಜಿಲ್ಲೆಯ ಜನರ ಒತ್ತಾಯ. ಇನ್ನು ಇದಕ್ಕೆ ಪೂರಕವಾಗಿ ಭೂ ವಿಜ್ಞಾನಿ ಮಹಾದೇಶ್ವರ ಎಚ್ ಎಸ್ ಅವರ ಜೊತೆ ಸರ್ಕಾರದಿಂದ ಅನುಮತಿ ಪಡೆದ ವ್ಯಕ್ತಿ ಮಾತನಾಡಿರುವ ಆಡಿಯೋ ಕೂಡ ವೈರಲ್ ಆಗಿದೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…
ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…
ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…
ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು…
ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.…
ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ…