ತುಳುನಾಡಿನ ಇತಿಹಾಸದ ಭವ್ಯತೆಯನ್ನು ಸಾರುವ ದೇವಾಲಯಗಳು, ಕೋಟೆಗಳು ಈ ಭಾಗವದಲ್ಲಿ ನೋಡಬಹುದು. ಅಂತೆಯೇ ಕುಂಬಳೆ ಅರಸರ ಕೇಂದ್ರವಾಗಿದ್ದ ಕಣ್ವಪುರ ಸನಿಹದಲ್ಲೇ ಕೆಳದಿ ನಾಯಕರ ಕುಂಬ್ಳೆ ಕೋಟೆ ಇದೆ.

ಈ ಕೋಟೆಯನ್ನು 1608ರ ಸುಮಾರಿಗೆ ಇಕ್ಕೇರಿ ದೊರೆ ಹಿರಿಯ ವೆಂಕಟಪ್ಪ ನಾಯಕ ನಿರ್ಮಿಸಿದ್ದು ಇತಿಹಾಸ. ಇತಿಹಾಸದಲ್ಲಿ ಬಾಳಿದ ಕೋಟೆ ಇಂದು ವಿನಾಶದ ಅಂಚಿಕೆ ಹೋಗ್ತಾ ಇದೆ. ಮಳೆಗಾಲದ ಸಮಯದಲ್ಲಿ ಕೋಟೆಯ ಕಲ್ಲುಗಳು ಅದರ ಸುತ್ತ ಮುತ್ತ ಹಸಿರಿನ ಭವ್ಯತೆಯಲ್ಲಿ ಮರೆಯಾಗುವ ಜೊತೆಯಲ್ಲಿ ಇತಿಹಾಸದಿಂದಲೂ ಮರೆಯಾಗುವ ಭೀತಿಯಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಇತಿಹಾಸ ಕೋಟೆ ಅಸಹಾಯಕವಾಗಿ ನಿಂತಿದೆ. ಸುತ್ತಲು ಹರಡಿದ ಹಸಿರ ಕಾಡು ಪೊದೆ ಕಣ್ಣಿಗೆ ಸುಂದರಾವಾಗಿ ಕಂಡರೂ ಅದು ಕೋಟೆಯ ಸುತ್ತುವರೆದಾಗ ಇತಿಹಾಸದ ಪತನವೇ ಸರಿ. ಸ್ಥಳೀಯ ಅಧಿಕಾರಿಗಳು, ಕೇರಳ ಪುರಾತತ್ವ ಇಲಾಖೆ ಈ ಬಗ್ಗೆ ಗಮನ ಹರಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಕಾಸರಗೋಡು ಜಿಲ್ಲೆಯಲ್ಲಿ ಬೇಕಲ ಕೋಟೆ ಒಂದು ಬಿಟ್ಟು ಮತ್ತೆಲ್ಲಾ ಕೋಟೆಯ ವ್ಯಥೆ ಇದುವೇ ಆಗಿದೆ.



