ಜನ ಮನದ ನಾಡಿ ಮಿಡಿತ

Advertisement

ಕಾಸರಗೋಡು: ಇತಿಹಾಸ ಕೋಟೆ ಬಂಧಿಯಾಗುವ ಭೀತಿಯಲ್ಲಿ ಕುಂಬ್ಳೆ ಕೋಟೆ

ತುಳುನಾಡಿನ ಇತಿಹಾಸದ ಭವ್ಯತೆಯನ್ನು ಸಾರುವ ದೇವಾಲಯಗಳು, ಕೋಟೆಗಳು ಈ ಭಾಗವದಲ್ಲಿ ನೋಡಬಹುದು. ಅಂತೆಯೇ ಕುಂಬಳೆ ಅರಸರ ಕೇಂದ್ರವಾಗಿದ್ದ ಕಣ್ವಪುರ ಸನಿಹದಲ್ಲೇ ಕೆಳದಿ ನಾಯಕರ ಕುಂಬ್ಳೆ ಕೋಟೆ ಇದೆ.

ಈ ಕೋಟೆಯನ್ನು 1608ರ ಸುಮಾರಿಗೆ ಇಕ್ಕೇರಿ ದೊರೆ ಹಿರಿಯ ವೆಂಕಟಪ್ಪ ನಾಯಕ ನಿರ್ಮಿಸಿದ್ದು ಇತಿಹಾಸ. ಇತಿಹಾಸದಲ್ಲಿ ಬಾಳಿದ ಕೋಟೆ ಇಂದು ವಿನಾಶದ ಅಂಚಿಕೆ ಹೋಗ್ತಾ ಇದೆ. ಮಳೆಗಾಲದ ಸಮಯದಲ್ಲಿ ಕೋಟೆಯ ಕಲ್ಲುಗಳು ಅದರ ಸುತ್ತ ಮುತ್ತ ಹಸಿರಿನ ಭವ್ಯತೆಯಲ್ಲಿ ಮರೆಯಾಗುವ ಜೊತೆಯಲ್ಲಿ ಇತಿಹಾಸದಿಂದಲೂ ಮರೆಯಾಗುವ ಭೀತಿಯಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಇತಿಹಾಸ ಕೋಟೆ ಅಸಹಾಯಕವಾಗಿ ನಿಂತಿದೆ. ಸುತ್ತಲು ಹರಡಿದ ಹಸಿರ ಕಾಡು ಪೊದೆ ಕಣ್ಣಿಗೆ ಸುಂದರಾವಾಗಿ ಕಂಡರೂ ಅದು ಕೋಟೆಯ ಸುತ್ತುವರೆದಾಗ ಇತಿಹಾಸದ ಪತನವೇ ಸರಿ. ಸ್ಥಳೀಯ ಅಧಿಕಾರಿಗಳು, ಕೇರಳ ಪುರಾತತ್ವ ಇಲಾಖೆ ಈ ಬಗ್ಗೆ ಗಮನ ಹರಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಕಾಸರಗೋಡು ಜಿಲ್ಲೆಯಲ್ಲಿ ಬೇಕಲ ಕೋಟೆ ಒಂದು ಬಿಟ್ಟು ಮತ್ತೆಲ್ಲಾ ಕೋಟೆಯ ವ್ಯಥೆ ಇದುವೇ ಆಗಿದೆ.

Leave a Reply

Your email address will not be published. Required fields are marked *

ಮೂಡುಬಿದಿರೆ: ಗರ್ಭಿಣಿ ದನಗಳ ಮೇಲೆ ಕತ್ತಿಯಿಂದ ಹ*ಲ್ಲೆ…..!

ಮಂಗಳೂರು: ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ; ಮೂವರು ಆರೋಪಿಗಳ ಬಂಧನ..!

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ಆರೋಪ; ನೇತ್ರಾವತಿ ನದಿಯಲ್ಲಿ ಮರಳು ದಂಧೆ…!

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

error: Content is protected !!