ಯುಗಾದಿ ಹಬ್ಬಕ್ಕೆ ತಂಪೆರೆದ ಮಳೆ, ಬಂಟ್ವಾಳ ತಾಲೂಕಿನಾಧ್ಯಂತ 6 ಗಂಟೆಯಿಂದ ಆರಂಭವಾದ ಮಳೆ ಸುಮಾರು 7.30 ಗಂಟೆವರೆಗೂ ಮಳೆ ಸುರಿದಿದೆ.

ಸೆಖೆಯಿಂದ ತಾಳಲಾರದೆ ಒದ್ದಾಡುತ್ತಿದ್ದ ಜನತೆಗೆ ಖುಷಿ ತಂದಿದೆ. ಆದರೆ ಕೃಷಿಕನಿಗೆ ಅಕಾಲಿಕ ಮಳೆಯಿಂದ ಸಾಕಷ್ಟು ನಷ್ಟ ಉಂಟಾಗಿದೆ. ಅಡಿಕೆ ಕೃಷಿಕರಿಗೆ ತಲೆಬಿಸಿ ಉಂಟಾಗಿದ್ದು, ಅನೇಕ ರೈತರ ಒಣ ಅಡಿಕೆ ಮಳೆಗೆ ಒದ್ದೆಯಾದರೆ, ಇನ್ನು ಅಡಿಕೆಯ ಹಿಂಗಾರದಲ್ಲಿ ಮಳೆ ನೀರು ನಿಂತು ಫಸಲು ಹಾಳಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಭತ್ತದ ಕೃಷಿಕರಿಗೂ ಮಳೆ ಸೂಕ್ತವಲ್ಲ ಎಂದು ಹೇಳಿದ್ದು.

ಮಳೆ ಒಂದಷ್ಟು ಮಂದಿಗೆ ತಂಪಾದರೆ ಕೃಷಿಕರಿಗಂತೂ ತೊಂದರೆಯಾಗಿದೆ.



