ಜನ ಮನದ ನಾಡಿ ಮಿಡಿತ

Advertisement

ತೀರ್ಥಂಕರರ ಪರಂಪರೆಯಲ್ಲಿ 23ನೆಯವರಾದ ಭ| ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಕಲ್ಯಾಣ

ತೀರ್ಥಂಕರರ ಪರಂಪರೆಯಲ್ಲಿ 23ನೆಯವರಾದ ಭ| ಪಾರ್ಶ್ವನಾಥ ಸ್ವಾಮಿ ಮೋಕ್ಷ ಪಡೆದ ದಿನ, 2780ನೇ ನಿರ್ವಾಣ ಮಹೋತ್ಸವ (ಮೋಕ್ಷ ಕಲ್ಯಾಣ) ಮೂಡುಬಿದಿರೆ ಗುರುಗಳ ಬಸದಿ ಹಾಗೂ ಶ್ರೀ ದಿಗಂಬರ ಜೈನ ಮಠದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿನಡೆಯಿತು.

ಗುರುಬಸದಿಯಲ್ಲಿ ಬೆಳಗ್ಗೆ 6.35ಕ್ಕೆ 12 ಅಡಿಯ ಚಂಡೋಘ್ರ ಪಾರ್ಶ್ವನಾಥ ಮೂರ್ತಿ ಜಲ, ಎಳನೀರು, ಕ್ಷೀರ, ಅಷ್ಟಗಂಧ ಸಹಿತ ಮಸ್ತಕಾಭಿಷೇಕ, ಸರ್ವಮಂಗಳ ಸದಸ್ಯೆಯರು, ಶ್ರಾವಿಕೆಯರು ಅಷ್ಟ ವಿಧಾರ್ಚನೆ ಸಹಿತ ಮಹಾ ಅರ್ಘ್ಯ ಎತ್ತಿ ಅರಹಂತ, ಸಿದ್ಧ ಜಿನೇಂದ್ರ ಪೂಜೆ ಸಲ್ಲಿಸಿ, ಜಪದೊಂದಿಗೆ ಮಹಾ ಮಂಗಳ ಆರತಿ ಸ್ವಾಮೀಜಿ ಮಂಗಲ ಆಶೀರ್ವಚನ ವಿತ್ತು ಪಾರ್ಶ್ವನಾಥ ಸ್ವಾಮಿಯ ಗುಣ ವಿಶೇಷ ತಿಳಿಸಿದರು. ಭಾರತೀಯ ಅಂಚೆ ಇಲಾಖೆಯ ಅಸ್ಸಾಮ್‌ ನಿರ್ದೇಶಕ ಅಭಿಷೇಕ್‌ ಜೈನ್‌ ದಂಪತಿಯನ್ನು ಸ್ವಾಮೀಜಿ ಪುರಸ್ಕರಿಸಿ ಹರಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಸಹಿತ ಸ್ಥಳೀಯರು, ಮಹಾರಾಷ್ಟ್ರ ಮಧ್ಯಪ್ರದೇಶ, ಅಸ್ಸಾಂನ ಶ್ರಾವಕ, ಶ್ರಾವಿಕೆಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!