ಮೂಡಬಿದಿರೆ: ನಾಟಕ, ಯಕ್ಷಗಾನ ವೇಷ ಭೂಷಣಗಳ ತಯಾರಕ, ಕಲಾವಿದ ಬೊಕ್ಕಸ ಜಗನ್ನಾಥ ರಾವ್ (76) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು.
ಮೂಡುಬಿದಿರೆ ಚೌಟರ ಅರಮನೆಯ ಬೊಕ್ಕಸದ ಲೆಕ್ಕ ಬರೆಯುತ್ತಿದ್ದ ವಂಶದ ಕುಡಿಯಾಗಿರುವ ಬೊಕ್ಕಸ ಜಗನ್ನಾಥ ರಾವ್ ಅವರು ತನ್ನ 12ನೇ ವಯಸ್ಸಿನಿಂದಲೇ ತನ್ನ ತಂದೆಯ ಜತೆಗೂಡಿ ಟೈಲರಿಂಗ್ ಜತೆಗೆ ವೇಷಭೂಷಣ ಹೊಲಿಯುವ, ಮಣಿಸರಕು ಪೋಣಿಸುವ, ಕಿರೀಟಾದಿ ತಯಾರಿಸುವ ಕಲೆಗಳಲ್ಲಿ ತೊಡಗಿಸಿಕೊಂಡಿದ್ದರು.
ಕಲಾವಿದರಾಗಿದ್ದ ಮೂಡುಬಿದಿರೆ ದಿ.ಲಾಡಿ ಕೃಷ್ಣ ಶೆಟ್ಟಿ ಅವರು ಸುದೀರ್ಘ ಕಾಲ ತಮ್ಮ ಮೇಕಪ್ ಕೈಯಾಗಿದ್ದರು.
ಕುರಿಯ ವಿಠಲ ಶಾಸ್ತ್ರಿಯವರ ಒಡನಾಟದಿಂದಾಗಿ ಧರ್ಮಸ್ಥಳ ಮೇಳದ ಸಂಪರ್ಕ ಲಭಿಸಿ ಮೇಳಕ್ಕೆ ಪ್ರಥಮವಾಗಿ ವೇಷಭೂಷಣ ತಯಾರಿಸಿಕೊಟ್ಟಿದರು. ಬೇತಾಳದ ವೇಷ, ಛದ್ಮವೇಷ, ಮೆರವಣಿಗೆಗೆ ಬೇಕಾದ ವೇಷಭೂಷಣಣಗಳನ್ನು ತಯಾರಿಸುವಲ್ಲಿ, ಮಕ್ಕಳ ವೇಷ, ಮದುವೆ ಮಂಟಪದ ನಿರ್ಮಾಣ ಆಲಂಕಾರದಲ್ಲಿ ಗಮನ ಸೆಳೆದಿದ್ದರು.
ನೇಪಥ್ಯ ಕಲಾವಿದರಾಗಿ ಆರು ದಶಕಗಳಿಗೂ ಮಿಗಿಲಾದ ಅನುಭವ, ಭಾರತದಾದ್ಯಂತ ತಿರುಗಾಟ ನಡೆಸಿದವರು. ಶೇಣಿ, ಸಾಮಗರು, ಕುಂಬ್ಳೆ, ಎಂಪೆಕಟ್ಟೆ, ಪುತ್ತೂರು ನಾರಾಯಣ ಹೆಗ್ಡೆ ಸಹಿತ ಹಲವು ಕಲಾವಿದರ ನಿಕಟ ಸಂಪರ್ಕವನ್ನು ಹೊಂದಿದ್ದರು. , ಶಾಲೆ, ಕಾಲೇಜುಗಳ ವಾರ್ಷಿಕೋತ್ಸವಗಳಲ್ಲಿ, ಕಲಾಸಂಘಗಳ ಆಟಗಳಲ್ಲಿ ತಮ್ಮ ವೇಷಭೂಷಣಗಳು ಮೆರೆದಿದೆ. ಮೂಡುಬಿದಿರೆಯ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ಸಹಿತ ಹಲವಾರು ಕಡೆಗಳಲ್ಲಿ ಸನ್ಮಾನಕ್ಕೆ ಪಾತ್ರರಾಗಿದ್ದರು.
ಮೂಡುಬಿದಿರೆಯ ನಾಗರಕಟ್ಟೆಯಲ್ಲಿ ವಾಸವಾಗಿದ್ದ ಅವರು ಪತ್ನಿ ಸತ್ಯವತಿ ಸಹಿತ ಸಹೋದರರನ್ನು ಅಗಲಿದ್ದಾರೆ.
ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ, ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿ ಅವರು ಇಂದು ನಿಧನರಾಗಿದ್ದಾರೆ. ಕಳೆದ ರಾತ್ರಿ ಸಮಾರಂಭವೊಂದರಲ್ಲಿ…
ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಪ್ರೆಸಿಡೆಂಟ್ ಕನ್ವೆನ್ಷನ್ ಹಾಲ್ ಮುಂಭಾಗ…
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…