ಐಲೇಸಾದ ಮತ್ತು ಟೋಟಲ್ ಕನ್ನಡ ಲಾಂಛನದಡಿಯಲ್ಲಿ ಸಿರಿದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ಬಿಡುಗಡೆಗೆ ಸಿದ್ಧವಾಗಿದ್ದು, ತುಳು ಯಕ್ಷಗಾನ ಅಭಿಮಾನಿಗಳಿಗೆ ಈ ಪ್ರಸಂಗ ಅಚ್ಚಾಗಿ ಉಳಿಯಲಿದೆ ಎನ್ನುವುದು ಸಂತಸದ ವಿಷಯ.
ಐಲೇಸಾ ಮತ್ತು ಟೋಟಲ್ ಕನ್ನಡ ಈಗಾಗಲೇ ಹಲವು ಕೃತಿಗಳನ್ನು ಬಿಡುಗಡೆಗೊಳಿಸಿದ್ದು ಪುವೆಂಪು ನೂತ್ತೊಂಜಿ ನೆಂಪು, ತುಳು ಕವನ ಸಂಕಲನ, ತುಳು ನಾಟಕ, ಕಥಾಸಂಕಲನ ಹೀಗೆ ಹತ್ತು ಹಲವು, ಈಗ ಸಿರಿದೇವಿ ಮಹಾತ್ಮೆ ತುಳು ಯಕ್ಷ ಪದ ಸಂಕಲನ ಬಿಡುಗಡೆಗೆ ಸಜ್ಜಾಗಿದ್ದು ತುಳು ಯಕ್ಷಾಭಿಮಾನಿಗಳು ಸಂತಸ ಗೊಂಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸಾಧ್ಯವಾಗುವಾಗಲೆಲ್ಲಾ ಯಾವುದೇ ಆಡಂಬರವಿಲ್ಲದೆ ಸಾಹಿತ್ಯದ ಕೃಷಿ ಮಾಡುತ್ತಿರುವ ಐಲೇಸಾ ಈಗ “ದಿ. ಅಗರಿ ಶ್ರೀನಿವಾಸ ಭಾಗವತರ ಮೂಲ ದೇವಿ ಮಹಾತ್ಮೆ” ಯನ್ನು ದೇವದಾಸ ಈಶ್ವರಮಂಗಲ ತುಳುವಿಗೆ ಅನುವಾದಿಸಿದ್ದಾರೆ.
ಖ್ಯಾತ ಯಕ್ಷ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿಯವರು ಸಂಪಾದಿಸಿರುವ ಈ ಅಮೂಲ್ಯ ಸಂಪತ್ತನ್ನು ತುಳು ವರ್ಲ್ಡ್ ಮೀಡಿಯಾದ ಡಾ.ರಾಜೇಶ್ ಅಳ್ವ ಅವರು ಅಚ್ಚಿಸುವ ಅಭಿಲಾಷೆಯೊಂದಿಗೆ ಐಲೇಸಾದ ಮಡಿಲಿಗಿಟ್ಟಾಗ ಅದನ್ನು ಶ್ರೀದೇವಿ ಚಿತ್ತವೆಂದು, ಚಿತ್ತ ಪ್ರಸಾದವೆಂದೂ ಟೋಟಲ್ ಕನ್ನಡದ ಸಹಯೋಗದಲ್ಲಿ ಐಲೇಸಾ ಅಚ್ಚಿಸಿ ಈಗ ಪ್ರಕಟಿಸುತ್ತಿದೆ.
ಸೆಪ್ಟೆಂಬರ್ 30 ಶನಿವಾರ ಮಧ್ಯಾಹ್ನ 2 ಗಂಟೆಗೆ ಮಂಗಳೂರು ಪುರಭವನದಲ್ಲಿ ಶಾಸಕ ವೇದವ್ಯಾಸ ಕಾಮತ್ ಸಮಕ್ಷದಲ್ಲಿ ಲೋಕಾರ್ಪಣೆಯಾಗಲಿದೆ ಮತ್ತು ಪ್ರದರ್ಶನಗೊಳ್ಳಲಿದೆ
ಅಪೂರ್ವ ಪದ ಸಂಪತ್ತಿನ ಈ ಯಕ್ಷ ಪದ ತಮ್ಮೆಲರ ತನು ಮನ ತಂಪಾಗಿಸುವಲ್ಲಿ ಯಶಸ್ವಿಯಾಗಲಿ ಎನ್ನುವ ಪ್ರಾರ್ಥನೆಯೊಂದಿಗೆ ಸಿರಿ ದೇವಿ ಮಹಾತ್ಮೆಯನ್ನು ಯಕ್ಷ ಅಭಿಮಾನಿಗಳಿಗರ್ಪಿಸುತ್ತಿದ್ದೇವೆ ಎಂಬುದಾಗಿ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ದೇವಿ ಮೂಕಾಂಬಿಕಾ…
ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಸಂಪರ್ಕದ ಕೊಂಡಿ ಕಳಚಿ ಬಿದ್ದು, ಜನರು ದ್ವೀಪದಂತೆ, ಹಳ್ಳಿಯೊಳಗೆ…
ಜ್ವರದಿಂದ ಬಳಲುತ್ತಿದ್ದ ಬಾಲಕಿಯೊರ್ವಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದೆ. ಅಲ್ಲಿಪಾದೆ ಅನೇಜ…
ಬಿಸಿರೋಡಿನ ಪ್ರಸಿದ್ದ ಕ್ಯಾಂಟೀನ್ ಒಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ವಲ್ಪದರಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಬಿಸಿರೋಡಿನ ಮಿನಿ ವಿಧಾನ ಸೌಧದ…
ಬೇಕಲ ಕೋಟೆ ಸಮೀಪದ ಪಳ್ಳಿಕರೆ ಕಡಲತೀರದಲ್ಲಿ ಭಾನುವಾರ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಅವರಿಗಾಗಿ…
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ ಹೊಡೆದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ…