ಜನ ಮನದ ನಾಡಿ ಮಿಡಿತ

Advertisement

ಅಚ್ಚಾಗಿದೆ ತುಳು “ದೇವಿ ಮಹಾತ್ಮೆ” ಅಚ್ಚಳಿಯದೆ ಉಳಿಯಲಿದೆ ಮಹಾತ್ಮೆ

ಐಲೇಸಾದ ಮತ್ತು ಟೋಟಲ್ ಕನ್ನಡ ಲಾಂಛನದಡಿಯಲ್ಲಿ ಸಿರಿದೇವಿ ಮಹಾತ್ಮೆ  ಯಕ್ಷಗಾನ ಪ್ರಸಂಗ ಬಿಡುಗಡೆಗೆ ಸಿದ್ಧವಾಗಿದ್ದು, ತುಳು ಯಕ್ಷಗಾನ ಅಭಿಮಾನಿಗಳಿಗೆ ಈ ಪ್ರಸಂಗ  ಅಚ್ಚಾಗಿ ಉಳಿಯಲಿದೆ ಎನ್ನುವುದು ಸಂತಸದ ವಿಷಯ. 

     ಐಲೇಸಾ ಮತ್ತು ಟೋಟಲ್ ಕನ್ನಡ ಈಗಾಗಲೇ ಹಲವು ಕೃತಿಗಳನ್ನು ಬಿಡುಗಡೆಗೊಳಿಸಿದ್ದು ಪುವೆಂಪು ನೂತ್ತೊಂಜಿ ನೆಂಪು, ತುಳು ಕವನ ಸಂಕಲನ, ತುಳು ನಾಟಕ,  ಕಥಾಸಂಕಲನ ಹೀಗೆ ಹತ್ತು ಹಲವು,  ಈಗ ಸಿರಿದೇವಿ ಮಹಾತ್ಮೆ ತುಳು ಯಕ್ಷ ಪದ ಸಂಕಲನ ಬಿಡುಗಡೆಗೆ ಸಜ್ಜಾಗಿದ್ದು ತುಳು  ಯಕ್ಷಾಭಿಮಾನಿಗಳು ಸಂತಸ ಗೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸಾಧ್ಯವಾಗುವಾಗಲೆಲ್ಲಾ ಯಾವುದೇ ಆಡಂಬರವಿಲ್ಲದೆ ಸಾಹಿತ್ಯದ ಕೃಷಿ ಮಾಡುತ್ತಿರುವ ಐಲೇಸಾ ಈಗ “ದಿ. ಅಗರಿ ಶ್ರೀನಿವಾಸ ಭಾಗವತರ ಮೂಲ ದೇವಿ ಮಹಾತ್ಮೆ” ಯನ್ನು ದೇವದಾಸ ಈಶ್ವರಮಂಗಲ   ತುಳುವಿಗೆ ಅನುವಾದಿಸಿದ್ದಾರೆ. 

ಖ್ಯಾತ ಯಕ್ಷ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿಯವರು ಸಂಪಾದಿಸಿರುವ ಈ ಅಮೂಲ್ಯ ಸಂಪತ್ತನ್ನು ತುಳು ವರ್ಲ್ಡ್ ಮೀಡಿಯಾದ ಡಾ.ರಾಜೇಶ್ ಅಳ್ವ ಅವರು  ಅಚ್ಚಿಸುವ ಅಭಿಲಾಷೆಯೊಂದಿಗೆ ಐಲೇಸಾದ ಮಡಿಲಿಗಿಟ್ಟಾಗ ಅದನ್ನು ಶ್ರೀದೇವಿ ಚಿತ್ತವೆಂದು, ಚಿತ್ತ ಪ್ರಸಾದವೆಂದೂ ಟೋಟಲ್ ಕನ್ನಡದ ಸಹಯೋಗದಲ್ಲಿ  ಐಲೇಸಾ ಅಚ್ಚಿಸಿ ಈಗ ಪ್ರಕಟಿಸುತ್ತಿದೆ. 

 ಸೆಪ್ಟೆಂಬರ್ 30 ಶನಿವಾರ ಮಧ್ಯಾಹ್ನ 2 ಗಂಟೆಗೆ ಮಂಗಳೂರು ಪುರಭವನದಲ್ಲಿ ಶಾಸಕ ವೇದವ್ಯಾಸ ಕಾಮತ್  ಸಮಕ್ಷದಲ್ಲಿ ಲೋಕಾರ್ಪಣೆಯಾಗಲಿದೆ ಮತ್ತು ಪ್ರದರ್ಶನಗೊಳ್ಳಲಿದೆ

ಅಪೂರ್ವ ಪದ ಸಂಪತ್ತಿನ ಈ ಯಕ್ಷ ಪದ ತಮ್ಮೆಲರ ತನು ಮನ ತಂಪಾಗಿಸುವಲ್ಲಿ ಯಶಸ್ವಿಯಾಗಲಿ ಎನ್ನುವ ಪ್ರಾರ್ಥನೆಯೊಂದಿಗೆ  ಸಿರಿ ದೇವಿ ಮಹಾತ್ಮೆಯನ್ನು ಯಕ್ಷ ಅಭಿಮಾನಿಗಳಿಗರ್ಪಿಸುತ್ತಿದ್ದೇವೆ ಎಂಬುದಾಗಿ ಆಯೋಜಕರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆ*ಂಕಿ…!

ಬಂಟ್ವಾಳ: ಹಗ್ಗ ಕಡಿದು ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು ಪಾರು….!

ಕಡೇಶಿವಾಲಯ: ನೆತ್ತರ ಬಾಬು ಪೂಜಾರಿಯವರ ಮನೆಗೆ ಸಿಡಿಲು ಬಡಿದು ಹಾನಿ….!

ಬಂಟ್ವಾಳ: ಸಿಡಿಲು ಬಡಿದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು..!

ಬಂಟ್ವಾಳ: ಕರಾವಳಿಯ ಕಾರಣೀಕ ದೈವ ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ಖ್ಯಾತ ಚಲನಚಿತ್ರ ನಟಿಯಾಗಿರುವ ರಚಿತರಾಮ್..!

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಹತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಡಿದ ಸಿಡಿಲು..!

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೆಲ ಮನೆಗಳಿಗೆ ಸಿಡಿಲು ಬಡಿದು ಹಾನಿ..!

ಹಾಸನ: ಸಿಡಿಲು ಬಡಿದು ಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ಮೃತ್ಯು..!

ಮಂಗಳೂರು : ಶ್ರೀ ಭದ್ರಕಾಳಿ ಚೆಂಡೆ ತಂಡದ ಮಾಲೀಕ ಹೃ*ದಯಾಘಾ*ತದಿಂದ ಮೃ*ತ್ಯು..!

error: Content is protected !!