ಶ್ರೀ ಧರ್ಮಶಾಸ್ತ ಭಕ್ತವೃಂದ, ಶ್ರೀ ಭಗವತೀ ದೇವಸ್ಥಾನ, ವಿಟ್ಲ ಇದರ ನೇತೃತ್ವದಲ್ಲಿ ಜರಗಲಿರುವ ಏಕಹಾ ಭಜನಾ ಕಾರ್ಯಕ್ರಮದ ಪೂರ್ವಭಾವಿ ಸಭೆ ವಿ.ಕೆ. ಮೋನಪ್ಪ ಗುರುಸ್ವಾಮಿ ಇವರ ಗೌರವ ಉಪಸ್ಥಿತಿಯಲ್ಲಿ ವಿಟ್ಲ ಶ್ರೀ ಭಗವತೀ ದೇವಸ್ಥಾನದಲ್ಲಿ ಜರುಗಿತು.

ಶ್ರೀ ಭಗವತೀ ದೇವಸ್ಥಾನ ವಿಟ್ಲ, ಶ್ರೀ ಧರ್ಮಶಾಸ್ತ ಭಕ್ತವೃಂದ ವಿಟ್ಲ ಹಾಗೂ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲಸೀಮೆ ಇದರ ಸಂಯುಕ್ತ ಆಶ್ರಯದಲ್ಲಿ 2024 ಜನವರಿ 02 ಸೂರ್ಯೋದಯದಿಂದ ಜನವರಿ 03 ಸೂರ್ಯೋದಯದವರೆಗೆ ನಿರಂತರ ಭಜನಾ ಸೇವೆ ನಡೆಸುವುದೆಂದು ತೀರ್ಮಾನಿಸಲಾಯ್ತು.

ಈ ಸಭೆಯಲ್ಲಿ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲಸೀಮೆ ಇದರ ಅಧ್ಯಕ್ಷರಾದ ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಜತೆಕಾರ್ಯದರ್ಶಿ ರಾಮಕೃಷ್ಣ ಆಚಾರ್ಯ ಪಡಿಬಾಗಿಲು, ಕಾರ್ಯದರ್ಶಿ ಜಯರಾಮ್ ನಾಯ್ಕ್ ಕುಂಟ್ರಕಲ ಇವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭ ಮೋನಪ್ಪ ಗುರುಸ್ವಾಮಿಯವರ ಶಿಷ್ಯ ಅಯ್ಯಪ್ಪ ಸ್ವಾಮಿ ವೃತದಾರಿಗಳು ಉಪಸ್ಥಿತರಿದ್ದರು



