ಜನ ಮನದ ನಾಡಿ ಮಿಡಿತ

Advertisement

ಕಲರ್ ಕ್ಯಾಂಡಿ, ಗೋಬಿ ಬಳಿಕ ಮತ್ತೊಂದು ಆಪತ್ತು.. ಈ ಟೀ ಪುಡಿಗಳಿಂದಲೂ ಜೀವಕ್ಕೆ ಇದೆ ಸಂಚಕಾರ..!

ಬೆಳಗ್ಗೆ ಎದ್ದು ಮೊದಲು ಕುಡಿಯುವುದೇ ಚಹಾ. ಇದನ್ನು ಕುಡಿದ ಮೇಲೆ ಸಾಕಷ್ಟು ಜನರು ಮುಂದಿನ ಕೆಲಸ ಮಾಡಲು ಶುರು ಮಾಡ್ತಾರೆ. ಮನೆಯಲ್ಲಿ ಟೀ ಕುಡಿದಿಲ್ಲ ಎಂದರೂ ಬಿದಿ ಬದಿಯ ಅಂಗಡಿಗಳಲ್ಲಿ ಕುಡಿಯುವುದು ಅಭ್ಯಾಸ ಆಗಿ ಬಿಟ್ಟಿದೆ. ಈ ರೀತಿ ಹೊರಗೆ ಟೀ ಕುಡಿಯುವ ಮುನ್ನ ಕೊಂಚ ಜಾಗೃತಿ ವಹಿಸುವುದು ಉತ್ತಮ. ಏಕೆಂದರೆ ಚಹಾಗೆ ಹಾಕುವ ಪುಡಿಗಳಿಂದಲೂ ನಮ್ಮ ಜೀವಕ್ಕೆ ಆಪತ್ತು ಕಾದಿದೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.

ಕಲರ್ ಕ್ಯಾಂಡಿ, ಗೋಬಿ ಬಳಿಕ ಬ್ರ್ಯಾಂಡ್ ಹೆಸರಲ್ಲಿ ಮಾರಾಟ ಮಾಡುವ ಟೀ ಪುಡಿಗಳಿಂದಲೂ ಅಪಾಯ ಕಾದಿದೆ. ರಸ್ತೆ ಬದಿಯ ಅಂಗಡಿಗಳಲ್ಲಿ ಕಡಿಮೆ ಬೆಲೆಯಲ್ಲಿ ಚಹಾ ಸಿಗುತ್ತದೆ ಎಂದು ಕುಡಿದರೆ ಪ್ರಾಣಕ್ಕೆ ಆಪತ್ತು ಇದೆ. ಟೀ ಪುಡಿ ಅಷ್ಟೇ ಅಲ್ಲ, ಸಾಂಬಾರ್ ಪುಡಿಗಳಿಂದಲೂ ಭಾರೀ ಅಪಾಯ ನಮಗೆಲ್ಲ ಕಾದಿದೆ. ಹೀಗಂತ ಹೇಳುತ್ತಿರುವುದು ನಾವಲ್ಲ. ಈ ಬಗ್ಗೆ ಖುದ್ದು ಆಹಾರ ಸಂರಕ್ಷಣಾಧಿಕಾರಿ ಶ್ರೀನಿವಾಸ್ ಅವರೇ ಹೇಳಿದ್ದಾರೆ.


ಟೀ ಪುಡಿಗಳ ಪ್ರತಿಷ್ಠಿತ ಕಂಪನಿಗಳಿಂದಲೇ ಸದ್ಯಕ್ಕೆ ಯಡವಟ್ಟು ಆಗುತ್ತಿದೆ. ಇದು ಒಂದೋ, ಎರಡೋ ಕಂಪನಿಗಳಿಂದ ಈ ರೀತಿ ಆಗುತ್ತಿಲ್ಲ. 10ಕ್ಕೂ ಹೆಚ್ಚು ಚಹಾ ಕಂಪನಿಗಳಿಂದ ಸಮಸ್ಯೆ ಆಗುತ್ತಿದೆ. ಯಾವುದೇ ಪ್ರಾಡಕ್ಟ್​ ಬ್ರ್ಯಾಂಡ್​ ಹೆಸರಲ್ಲಿ ರಿಜಿಸ್ಟರ್ ಆಗುವಾಗ ಯಾವ ಪ್ರಮಾಣದಲ್ಲಿ ಅದರಲ್ಲಿ ಸಾಮಾಗ್ರಿಗಳನ್ನು, ಕೆಮಿಕಲ್​ಗಳನ್ನ, ಕಲರ್​ಗಳನ್ನ ಹಾಕಲಾಗುತ್ತದೆ ನಮೂದು ಮಾಡಿಸುತ್ತಾರೆ. ಆದರೆ ಮಾಲೀಕರು ತನ್ನ ಬ್ರ್ಯಾಂಡ್​ ಮೂಲವನ್ನು ಉಳಿಸಿಕೊಳ್ಳುವುದು ಕರ್ತವ್ಯ ಆಗಿರುತ್ತದೆ. ಇದರಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಬ್ರ್ಯಾಂಡ್​ನ ವಸ್ತು ಕಳಪೆ ಆಗಿ ಬಿಡುತ್ತದೆ. ಇಂತಹ ಬ್ರ್ಯಾಂಡ್​ ವಸ್ತುಗಳನ್ನು ಬಳಸುವುದು ಅಪಾಯ ಆಗಿರುತ್ತೆ ಎಂದಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!