ಜನ ಮನದ ನಾಡಿ ಮಿಡಿತ

Advertisement

ಕಾಸರಗೋಡು ಜಿಲ್ಲೆಯ ಕ್ಷೇತ್ರ ಉತ್ಸವಗಳಿಗೆ ಸಿಡಿಮದ್ದು ಪೂರೈಸುತ್ತಿದ್ದ ಬದಿಯಡ್ಕದ “ಬೆಡಿ ಖಾದ್ರಿಚ್ಚ” ನಿಧನ

ಬದಿಯಡ್ಕ: ಹಲವಾರು ಕ್ಷೇತ್ರ ಉತ್ಸವಗಳಿಗೆ ಸಿಡಿಮದ್ದು ತಯಾರಿಸಿ ನೀಡುತ್ತಾ “ಬೆಡಿ ಖಾದ್ರಿಚ್ಚ” ಎಂದೇ ಜನಜನಿತರಾದ ಕೆ.ಎಂ.ಅಬ್ದುಲ್ ಖಾದರ್(70) ಇಂದು ಬೆಳಿಗ್ಗೆ ನಿಧನರಾದರು. ಅಲ್ಪ ಕಾಲದ ಅಸೌಖ್ಯದಿಂದ ಇವರನ್ನು ಮಂಗಳೂರು ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು.

ಸೋಹ ಮುಂತಾಸ್ ಮಂಜಿಲ್ ನಲ್ಲಿ ವಾಸಿಸುತ್ತಿದ್ದ ಇವರು ಬದಿಯಡ್ಕದ ಪೆರ್ಲ ರಸ್ತೆಯಲ್ಲಿ ಸಿಡಿಮದ್ದು ಪಟಾಕಿಗಳ ಅಂಗಡಿಗಳನ್ನು ತೆರೆದಿದ್ದರು. ಜಿಲ್ಲೆಯ ಹಲವಾರು ಪ್ರಸಿದ್ಧ ಕ್ಷೇತ್ರಗಳ ಉತ್ಸವ ಸಂದರ್ಭದಲ್ಲಿ ಪರಂಪರಾಗತವಾಗಿ ಸಿಡಿಮದ್ದು ಸಿಡಿಸುವ ವೃತ್ತಿಯನ್ನು ನಿರ್ವಹಿಸುತ್ತಿದ್ದ ಇವರು ಸರ್ವಧರ್ಮ ಸಮನ್ವತೆಗೆ ಪ್ರಾಧಾನ್ಯತೆ ನೀಡಿ ಎಲ್ಲಾ ಧರ್ಮಿಯರಲ್ಲೂ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದರು.

2022ರಲ್ಲಿ ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ನಡೆದ ಶ್ರೀರುದ್ರ ಹೈಮಾವತೀ ಮಹಾ ಯಾಗದ ಸಂದರ್ಭದಲ್ಲಿ ಇವರನ್ನು ಎಡನೀರು ಮಠದ ಶ್ರೀಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸನ್ಮಾನಿಸಿದ್ದರು.

ಮೃತರು ಪತ್ನಿ ಸುಬೈದ, ಮಕ್ಕಳಾದ ಫೌಸಿಯ,ಇಖ್ಬಾಲ್ ಕಾಸಿಂ,ಬಲ್ಕೀಸ್,ಸೋಹ ಮುಂತಾಸ್, ಮೊಮ್ಮಕ್ಕಳಾದ ಇಬ್ರಾಹಿಂ,ಫೈರುಸ,ಮುಸ್ತಫ,ಅಮೀನ್.ಸಹೋದರ ಅಬ್ದುಲ್ ,ಆಯಿಷಾ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಬಿಸಿಯೂಟ ಸಿಬ್ಬಂದಿಯ ಕೈ ತುರಿಮಣೆಯಲ್ಲಿ ಸಿಲುಕಿ ಅವಘಡ; ಸಮಯಪ್ರಜ್ಞೆ ಮೆರೆದ 5ನೇ ತರಗತಿ ಬಾಲಕ

ಮಂಗಳೂರು: ಕೆಪಿಟಿ ಸಿಗ್ನಲ್ ಬಳಿ ಭಾರೀ ಗುಂಡಿ; ಅಪಾಯದಂಚಿನಲ್ಲಿ ವಾಹನ ಸವಾರರು

ಬಂಟ್ವಾಳ: ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ವಿಶೇಷ ತೀರ್ಥಸ್ನಾನ

ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಸಾರ್ವಜನಿಕ ಪಾಲೆದ ಕೆತ್ತೆ ಕಷಾಯ ವಿತರಣೆ

ಬಂಟ್ವಾಳ: ದಕ್ಷಿಣ ಕನ್ನಡದ ತಾಲೂಕು ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ

ಬಂಟ್ವಾಳ: ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಸಂಭ್ರಮ

ಮೂಡಬಿದ್ರೆ: ಮಿಜಾರ್‌ನಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಸುಟ್ಟ ಗಾಯ…!

ಮಂಗಳೂರು: ತಂಗಿಯ ಸಾವಿನ ಬೆನ್ನಲ್ಲೇ ಸಹೋದರನೂ ಶವವಾಗಿ ಪತ್ತೆ; ಮಂಗಳೂರಿನ ಲಾಡ್ಜ್‌ನಲ್ಲಿ ದುರಂತ

ಕೊಲಂಬಿಯಾ: ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ; 111 ಮಂದಿ ಸಾವು

error: Content is protected !!