ಜನ ಮನದ ನಾಡಿ ಮಿಡಿತ

Advertisement

ಕಾಸರಗೋಡು ಜಿಲ್ಲೆಯ ಕ್ಷೇತ್ರ ಉತ್ಸವಗಳಿಗೆ ಸಿಡಿಮದ್ದು ಪೂರೈಸುತ್ತಿದ್ದ ಬದಿಯಡ್ಕದ “ಬೆಡಿ ಖಾದ್ರಿಚ್ಚ” ನಿಧನ

ಬದಿಯಡ್ಕ: ಹಲವಾರು ಕ್ಷೇತ್ರ ಉತ್ಸವಗಳಿಗೆ ಸಿಡಿಮದ್ದು ತಯಾರಿಸಿ ನೀಡುತ್ತಾ “ಬೆಡಿ ಖಾದ್ರಿಚ್ಚ” ಎಂದೇ ಜನಜನಿತರಾದ ಕೆ.ಎಂ.ಅಬ್ದುಲ್ ಖಾದರ್(70) ಇಂದು ಬೆಳಿಗ್ಗೆ ನಿಧನರಾದರು. ಅಲ್ಪ ಕಾಲದ ಅಸೌಖ್ಯದಿಂದ ಇವರನ್ನು ಮಂಗಳೂರು ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು.

ಸೋಹ ಮುಂತಾಸ್ ಮಂಜಿಲ್ ನಲ್ಲಿ ವಾಸಿಸುತ್ತಿದ್ದ ಇವರು ಬದಿಯಡ್ಕದ ಪೆರ್ಲ ರಸ್ತೆಯಲ್ಲಿ ಸಿಡಿಮದ್ದು ಪಟಾಕಿಗಳ ಅಂಗಡಿಗಳನ್ನು ತೆರೆದಿದ್ದರು. ಜಿಲ್ಲೆಯ ಹಲವಾರು ಪ್ರಸಿದ್ಧ ಕ್ಷೇತ್ರಗಳ ಉತ್ಸವ ಸಂದರ್ಭದಲ್ಲಿ ಪರಂಪರಾಗತವಾಗಿ ಸಿಡಿಮದ್ದು ಸಿಡಿಸುವ ವೃತ್ತಿಯನ್ನು ನಿರ್ವಹಿಸುತ್ತಿದ್ದ ಇವರು ಸರ್ವಧರ್ಮ ಸಮನ್ವತೆಗೆ ಪ್ರಾಧಾನ್ಯತೆ ನೀಡಿ ಎಲ್ಲಾ ಧರ್ಮಿಯರಲ್ಲೂ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ದರು.

2022ರಲ್ಲಿ ಉಪ್ಲೇರಿ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ನಡೆದ ಶ್ರೀರುದ್ರ ಹೈಮಾವತೀ ಮಹಾ ಯಾಗದ ಸಂದರ್ಭದಲ್ಲಿ ಇವರನ್ನು ಎಡನೀರು ಮಠದ ಶ್ರೀಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಸನ್ಮಾನಿಸಿದ್ದರು.

ಮೃತರು ಪತ್ನಿ ಸುಬೈದ, ಮಕ್ಕಳಾದ ಫೌಸಿಯ,ಇಖ್ಬಾಲ್ ಕಾಸಿಂ,ಬಲ್ಕೀಸ್,ಸೋಹ ಮುಂತಾಸ್, ಮೊಮ್ಮಕ್ಕಳಾದ ಇಬ್ರಾಹಿಂ,ಫೈರುಸ,ಮುಸ್ತಫ,ಅಮೀನ್.ಸಹೋದರ ಅಬ್ದುಲ್ ,ಆಯಿಷಾ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!