ಮಂಗಳೂರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ, ಕಾಶ್ಮೀರದಲ್ಲಿ ನಡೆದ ಭಾರತೀಯ ಪ್ರವಾಸಿಗರ ಮೇಲಿನ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಪ್ರತಿಭಟನೆಯನ್ನು ಮಿನಿ ವಿಧಾನಸೌಧ ಬಳಿ ನಡೆಸಿದರು.

ಈ ಸಂದರ್ಭ ಎಬಿವಿಪಿ ನಗರ ಕಾರ್ಯದರ್ಶಿ ಮೊನಿಶ್ ತುಮಿನಾಡು, ಜಿಲ್ಲಾ ಸಂಚಾಲಕ ಸುವಿತ್ ಶೆಟ್ಟಿ , ಜಿಲ್ಲಾ ಸಹ ಸಂಚಾಲಕ ಪ್ರತೀಕ್ ಬಂಟ್ವಾಳ್, ಶಶಾಂಕ್ ಶೆಟ್ಟಿ ,ಆದಿಶ್ ,ಮುಂತಾದ ವಿಧ್ಯಾರ್ಥಿ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು. ಭಯೋತ್ಪಾದಕರ ಪತ್ತೆ ಕಾರ್ಯ ಮತ್ತು ಸೂಕ್ತವಾದ ಶಿಕ್ಷೆಯನ್ನು ನೀಡುವಂತೆ ಅವರು ಆಗ್ರಹಿಸಿದರು.



