ಮಾಣಿಯ ಅಂಡರ್ ಪಾಸ್ನಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು, ಇಂದು ಬೆಳಿಗ್ಗೆಯಿಂದ ಘನವಾಹನಗಳ ಸಹಿತ ಇತರ ವಾಹನಗಳು ಸಂಚಾರ ಆರಂಭಿಸಿವೆ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರ ಸೂಚನೆಯ ಮೇಲೆ ಮಾಣಿಯ ಅಂಡರ್ ಪಾಸ್ನಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಕೆಸರುಮಯ ಮತ್ತು ಹೊಂಡಗು0ಡಿಗಳಿ0ದ ಮಾಣಿಯಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿತ್ತು.

ಮಳೆಗಾಲದಲ್ಲಿ ಅಂತೂ ಕಿರಿದಾದ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿತ್ತು. ಸರ್ವೀಸ್ ರಸ್ತೆ ಮೂಲಕ ಬಂದ ವಾಹನಗಳು ಮಾಣಿಯಿಂದ ಪುತ್ತೂರು ಕಡೆಗೆ ತಿರುಗುವ ಅಂಡರ್ ಪಾಸ್ ಕೆಳಗೆ ಕಾಂಕ್ರೀಟ್ ಕಾಮಗಾರಿ ನಡೆದಿಲ್ಲ.ಹಾಗಾಗಿ ಪುತ್ತೂರು ಕಡೆ ಸಂಚಾರ ಮಾಡುವ ವಾಹನಗಳು ಹಳೆಯ ರಸ್ತೆಯಲ್ಲಿ ಸಂಚಾರ ಮಾಡುತ್ತಿವೆ.ಹಾಗಾಗಿ ಸಂಪೂರ್ಣ ಸಮಸ್ಯೆ ಪರಿಹಾರ ಕಂಡಿಲ್ಲ.



