ಜನ ಮನದ ನಾಡಿ ಮಿಡಿತ

Advertisement

ಸಾಲೆತ್ತೂರು: ಸಾಲೆತ್ತೂರು ಶಿವಗಿರಿ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ

ಸಾಲೆತ್ತೂರು ಶಿವಗಿರಿ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಚಾಲನೆ ನೀಡಿದ್ದಾರೆ. ಬಳಿಕ ಆಶೀವರ್ಚನ ನೀಡಿ, ನಮ್ಮ ಅಂತರಂಗದಲ್ಲಿ ದೇವರು ಇರುವುದನ್ನು ಅರಿತುಕೊಂಡರೆ ಎಲ್ಲ ಕಾರ್ಯಗಳನ್ನು ಯಶಸ್ವಿಯಾಗಿಸಲು ಸಾಧ್ಯ. ದೇಗುಲದ ಜೀಣೋದ್ಧಾರಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು. ಗ್ರಾಮದ ದೇವಳದ ಜೀಣೋದ್ಧಾರ ಕಾರ್ಯ ಭಕ್ತರಿಗೆ ಲಭಿಸಿದ ಪುಣ್ಯವಕಾಶ.

ದೇವಸ್ಥಾನ ಜೀಣೋದ್ಧಾರ ಪ್ರಕ್ರಿಯೆಗೆ ದ್ವಾರ ಶಿಲಾನ್ಯಾಸ ನಡೆಸಿದ್ದು ಕೂಡಾ ಶುಭ ಸೂಚನೆಯೇ ಆಗಿದೆ ಎಂದಿದ್ದಾರೆ. ಪ್ರಧಾನ ಅರ್ಚಕರಾದ ಭಾರ್ಗವ ಉಡುಪರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದಿದೆ. ಇನ್ನು ಸಂದರ್ಭದಲ್ಲಿ ಕ್ಷೇತ್ರ ತಂತ್ರಸ್ಥಾನದ ಮುಖ್ಯಸ್ಥರಾದ ಶ್ರೀನಿವಾಸ ಆಚಾರ್ ಮಂಕುಡೆ, ಮಂಗಳೂರು ಮನಪಾದ ವಲಯ ಆಯುಕ್ತರಾದ ರೇಖಾ ಜೆ ಶೆಟ್ಟಿ, ಶೀನಪ್ಪ ಆಳ್ವ ಕೊಲ್ಲಾಡಿ, ಚಿತ್ತರಂಜನ್ ಕರೈ, ಕೃಷಿಕರಾದ ಗೋಪಣ್ಣ ರೈ ಅಗರಿ, ಶ್ರೀಧರ ಪೂಜಾರಿ ಮಾವೆ, ಸದಾಶಿವ ಸೇವಾ ಟ್ರಸ್ಟ್ ಅಧ್ಯಕ್ಷರಾದ ಎಸ್ ರವಿ ಕುಮಾರ್ ಬಳ್ಳಕ್ಕುರಾಯ, ಕೋಶಾಧಿಕಾರಿ ಮಂಜುನಾಥ ರೈ ಅಗರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗಿರೀಶ್ ಭಂಡಾರಿ ಕುಳಾಲು ಸೇರಿದಂತೆ ಅನೇಕರು ಉಪಸ್ಥಿತರಿದ್ರು. ಈ ಪುಣ್ಯಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸೇರಿದಂತೆ ಊರ ಪರವೂರ ಭಕ್ತಾದಿಗಳು ಭಾಗಿಯಾಗಿದ್ದಾರೆ.

Leave a Reply

Your email address will not be published. Required fields are marked *

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

ಬಂಟ್ವಾಳದಲ್ಲಿ ಮಳೆ ಅವಾಂತರ; ಮರ ಬಿದ್ದು ಸ್ಥಳೀಯರ ಪರದಾಟ

ಶ್ರೀಲಂಕಾ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಗೆ ಆಕಿಬ್ ನಬಿ ಎಂಟ್ರಿ

ಬಿಹಾರದ ಸಹರ್ಸಾದಲ್ಲಿ ರೈಲು ಅಗ್ನಿ ಅವಘಡ; ತಪ್ಪಿದ ಭಾರೀ ಅನಾಹುತ

error: Content is protected !!