ಕರಾವಳಿಯಲ್ಲಿ ಕೆಂಪು ಕಲ್ಲಿನ ಉದ್ಯಮಕ್ಕೆ ಹೊಡೆತ ಬಿದ್ದ ಪರಿಣಾಮ ಕೆಲಸವಿಲ್ಲದೇ ಕಳ್ಳತನ ಮಾಡಿದ ಯುವಕನನ್ನು ಬಂಧಿಸಿದ ಘಟನೆ ಪುತ್ತೂರಿನ ಈಶ್ವರಮಂಗಲದಲ್ಲಿ ನಡೆದಿದೆ.

ನೆಟ್ಟಣಿಗೆ ಮುಡ್ನೂರು ಮುಂಡ್ಯ ನಿವಾಸಿ ದಯಾನಂದ ನಾಯ್ಕ ಎಂಬಾತ ಬಂಧಿತ ಆರೋಪಿ. ಕಳೆದ 5 ದಿನಗಳ ಹಿಂದೆ ಈಶ್ವರಮಂಗಲದಲ್ಲಿ ಕಳ್ಳತನ ನಡೆಯುತ್ತಿದ್ದು, ಈಶ್ವರಮಂಗಲ ಪೇಟೆಯ ನಿವಾಸಿ ಶೋಭಾ ಕೃಷ್ಣರಾಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಪಾಟಿನ ಬೀಗ ಮುರಿದು 31 ಗ್ರಾಂ ಚಿನ್ನ ಹಾಗೂ 5 ಸಾವಿರ ನಗದುದನ್ನು ಕಳ್ಳತನ ಮಾಡಿದ್ದಾನೆ.

ಕೆಂಪು ಕಲ್ಲಿನ ಲೋಡಿಂಗ್ ಕೆಲಸ ಮಾಡುತ್ತಿದ್ದ ಈತ ವಿವಿಧ ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿಕೊಂಡಿದ್ದ ಕೆಲಸವಿಲ್ಲದೇ ಸಾಲ ಹಿಂತಿರುಗಿಸಲಾಗದೇ ಕಂಗೆಟ್ಟಿದ್ದ ಆರೋಪಿ ಕಳ್ಳತನದ ಹಾದಿಯನ್ನು ಹಿಡಿದಿದ್ದಾನೆಂದು ಸಾರ್ವಜನಿಕರಿಂದ ಮಾಹಿತಿ ಲಭ್ಯವಾಗಿದೆ.



