ಜನ ಮನದ ನಾಡಿ ಮಿಡಿತ

Advertisement

ಕೊಡಗು: ತಾಯಿಯ ಕಣ್ಣು ತಪ್ಪಿಸಿ ತೋಟದೊಳಗೆ ಹೋದ ಮಗು; ಪತ್ತೆ ಹಚ್ಚಿದ್ದ ಸಾಕು ನಾಯಿ….!

ಮೊಬೈಲ್‌ನಲ್ಲಿ ಮುಳುಗಿದ್ದ ತಾಯಿಯ ಕಣ್ಣು ತಪ್ಪಿಸಿ ತೋಟದೊಳಗೆ ಹೋಗಿದ್ದ ಎರಡು ವರ್ಷದ ಮಗು ರಾತ್ರಿಯಿಡೀ ತೋಟದಲ್ಲಿ ಇದ್ದ ಘಟನೆ ಕೊಡಗಿನಲ್ಲಿ ನಡೆದಿದೆ.

ರಾತ್ರಿಯೆಲ್ಲಾ ತೋಟದಲ್ಲಿದ್ದ ಕಂದಮ್ಮನನ್ನು ಸಾಕು ನಾಯಿ ತೋಟದಲ್ಲಿ ಪತ್ತೆ ಹಚ್ಚಿ ಪಾಲಕರು ನಿರಾಳವಾಗುವಂತೆ ಮಾಡಿದ ಈ ಮನಕಲಕುವ ಘಟನೆ ನಡೆದಿರುವುದು ವೀರಾಜಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ. ನಾಪತ್ತೆಯಾಗಿದ್ದ ಮಗು ಸುನನ್ಯ ಭಾನುವಾರ ಪತ್ತೆಯಾಗಿದೆ.

ಶರಿ ಗಣಪತಿ ಎಂಬವರ ತೋಟದಲ್ಲಿ ಮಗುವಿನ ಪೋಷಕರು ಕೆಲಸ ಮಾಡುತ್ತಿದ್ರು, ಊಟದ ಬಳಿಕ ತಾಯಿ ನಾಗಿಣಿ ಮೊಬೈಲ್ ನೋಡಿಕೊಂಡು ಕುಳಿತಿದ್ದಾರೆ. ಸಂಜೆ ವೇಳೆಗೆ ಮಗು ನಾಪತ್ತೆಯಾಗಿರುವುದು ಅರಿವಿಗೆ ಬಂದಿದೆ. ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ಹುಡುಕಾಟ ನಡೆಸಿದ್ದಾರೆ. ಶೋಧ ಕಾರ್ಯಾಚರಣೆಯಲ್ಲಿ ಸಾಕುನಾಯಿಗಳು ಭಾಗವಹಿದ್ದವು. ಕೊನೆಗೂ ತೋಟದ ನಡುವೆ ಮಗುವನ್ನು ಶ್ವಾನ ಓರಿಯೋ ಪತ್ತೆ ಮಾಡಿದೆ. ಅನಿಲ್ ಕಾಳಪ್ಪ ಅವರಿಗೆ ಸೇರಿದ ಶ್ವಾನ ಇದಾಗಿದ್ದು, ಶ್ವಾನದಿಂದಾಗಿ ಕೊನೆಗೂ ಕಂದಮ್ಮ ಹೆತ್ತಮ್ಮನ ಮಡಿಲು ಸೇರಿದೆ. ಮಗು ಸುನನ್ಯ ಜೇನುಕುರುಬ ಸಮುದಾಯದ ಸುನಿಲ್-ನಾಗಿಣಿ ದಂಪತಿಯ ಪುತ್ರಿಯಾಗಿದ್ದಾಳೆ.

Leave a Reply

Your email address will not be published. Required fields are marked *

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

ಮಾಣಿ: ಮರ ಬಿದ್ದು ಟ್ರಾನ್ಸ್ ಫಾರ್ಮರ್‌ಗೆ ಹಾನಿ; ರಸ್ತೆ ಮೇಲೆ ಮರ ಸಹಿತ ಮುರಿದುಬಿದ್ದು ಸಂಚಾರ ಬಂದ್…!

ಗೋಳಿತ್ತೊಟ್ಟು: ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು…!

ಬಂಟ್ವಾಳ: ಭಾರೀ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು..!

ಉಪ್ಪಿನಂಗಡಿ: ನಕಲಿ 500 ನೋಟು ಮಾದರಿ ಮುದ್ರಣ ಪ್ರಕರಣ, 7 ಮಂದಿ ವಶ….!

error: Content is protected !!