ಜನ ಮನದ ನಾಡಿ ಮಿಡಿತ

Advertisement

ಒಂದೂವರೆ ವರ್ಷದಲ್ಲಿ ನಾಲ್ವರು ಆತ್ಮಹತ್ಯೆ!….ಅಸಲಿಗೆ ಆತ್ಮಹತ್ಯೆಯ ಕಾರಣ ಆದರೂ ಏನು?..

ಸಾನಿಧ್ಯ.. ಐಷಾರಾಮಿ ಬಂಗಲೆ.. ಇದರಲ್ಲಿ ಇದ್ದೋರು ಹಣವಂತರು.. ಅಧಿಕಾರವಂತರು. ಆದ್ರೆ, ಇವರ ಹಣೆಬರಹದಲ್ಲಿ ಸಾವು ಹೀಗೆ ಬರುತ್ತೆ ಅಂತ ಊಹಿಸಿರಲಿಲ್ಲವೇನೋ? ತಮ್ಮ ಕೈಯ್ಯಾರೆ ತಾವೇ ಪ್ರಾಣ ತೆಗೆದುಕೊಂಡಿದ್ದಾರೆ.

ಈ ಸಾನಿಧ್ಯವೀಗ ಸಾವಿನ ಸಾನಿಧ್ಯವಾಗಿ ಕಳಂಕವನ್ನ ಹೊತ್ತಿದೆ. ಇದು ಸಾವಿನ ಮನೆಯ ದುರಂತ ಕಥೆ. ಆ ಮನೆಗೆ ಇರೋ ದೋಷವೋ ಅಥವಾ ದುರ್ಬಲ ಮನಸ್ಥಿತಿಯೋ ಸಾಲು ಸಾಲು ಆತ್ಮಹತ್ಯೆ ನಡೆದುಹೋಗಿದೆ. ಒಂದೇ ಮನೆಯಲ್ಲಿ ಈವರೆಗೂ ನಾಲ್ವರು ಸಾವನ್ನಪ್ಪಿದ್ದಾರೆ. ಅದರಲ್ಲಿ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಆತ್ಮಹತ್ಯೆಗಳು ನಡೆದಿರೋ ಮನೆಗೆ ಭಯದ ಕಂಟಕ ಅಂಟಿದೆ. ಸ್ಥಳೀಯರಲ್ಲಿ ಆತಂಕದ ಛಾಯೆ ಆವರಿಸಿದೆ.
ಶಿವಮೊಗ್ಗದ ಅಶ್ವತ್ ನಗರದ ಸಾನಿಧ್ಯ ನಿವಾಸ.. ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಅವರ ಕುಟುಂಬಕ್ಕೆ ಸೇರಿದ ಭವ್ಯಬಂಗಲೆ.. ಆದ್ರೀಗ ಈ ಮನೆಯ ಬಗ್ಗೆಯೇ ಸುತ್ತ ಮುತ್ತಲ ಜನರಲ್ಲಿ ಭಯವನ್ನ ಹುಟ್ಟಿಸಿದೆ.

ಹೊಮ್ಮರಡಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಕುಟುಂಬದ ದುರಂತ ಕಥೆ ಸತ್ಯಕ್ಕೆ ನಿಲುಕದಾಗಿದೆ. ಇಡೀ ಕುಟುಂಬ ನೆಲೆಸಿದ್ದ `ಸಾನಿಧ್ಯ’ ನಿವಾಸ ಸಾವಿನ ನಿವಾಸವಾಗಿಬಿಟ್ಟಿದೆ. ಇದುವರೆಗೂ ಈ ಮನೆಯಲ್ಲಿ ನಾಲ್ಕು ಸಾವಾಗಿದೆ. ಅದರಲ್ಲೂ ನಾಲ್ವರು ಆತ್ಮಹತ್ಯೆಗೆ ಶರಣಾಗಿರೋದು ಆತಂಕ ಮೂಡಿಸಿದೆ. ಮನೆಯಲ್ಲಿ ಮೊದಲು ಮನೆಯ ಯಜಮಾನ ಡಾ. ನಾಗರಾಜ್ ಹೊಮ್ಮರಡಿ ಆತ್ಮಹತ್ಯೆಗೆ ಶರಣಾಗಿದ್ರಂತೆ. ಇದಾದ ಬಳಿಕ ಕಳೆದ ಒಂದೂವರೆ ವರ್ಷಗಳ ಹಿಂದಷ್ಟೇ ಅವರ ಪುತ್ರ ಆಕಾಶ್ ಪತ್ನಿ ನವಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ಮಾಸುವ ಮುನ್ನವೇ ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ ಹೊಮ್ಮರಡಿ ಮತ್ತು ಅವರ ಪುತ್ರ ಆಕಾಶ್ ಹೊಮ್ಮರಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಹಿಂದೆ ಈ ಮನೆಯ ಮೂಲ ಮಾಲೀಕರು ಎನ್ನಲಾದ ರಾಜಶೇಖರ್ ಎನ್ನುವವರು ಕೂಡ ಮನೆ ಕಟ್ಟಿದ ಕೆಲವೇ ದಿನಗಳಲ್ಲಿ ಆನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!