ರಾಶಿ ರಾಶಿ ಕಸ, ಕೊಳೆತ ತ್ಯಾಜ್ಯ, ಪ್ಲಾಸ್ಟಿಕ್ ಬಾಟಲಿಗಳು, ಕಲರ್ ಕಲರ್ ಚೀಲಗಳು ತುಂಬಿ ಪಾದಾಚಾರಿಗಳು ನಡೆಯಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಉಂಟಾಗಿರುವುದು ಕಲ್ಲಡ್ಕ- ಬೊಳಂತೂರು ರಸ್ತೆಯಲ್ಲಿ.

ಗೋಳ್ತಮಜಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲಡ್ಕ -ಬೋಳಂತೂರು ರಸ್ತೆಯ ಬೋಳಂತರು ಎಂಬಲ್ಲಿ ಕಾಣಸಿಗುವ ದೃಶ್ಯಗಳು ಇವು. ಸ್ವಚ್ಛ ಭಾರತ್ ಪರಿಕಲ್ಪನೆಯನ್ನು ಹೊಂದಿರುವ ದೇಶದ ಕನಸು, ಕೇವಲ ಕನಸಾಗಿಯೇ ಉಳಿಯುವುದು ಬಿಟ್ಟರೆ ನನಸಾಗಿಸಲು ಸಾಧ್ಯವಿಲ್ಲ ಎಂದು ಸಾಬೀತಾಗುತ್ತದೆ.

ಎಲ್ಲಿಯವರೆಗೆ ನಿಯಮ ಮೀರಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದು ನಿಲ್ಲುವುದಿಲ್ಲವೋ ಅಲ್ಲಿವರೆಗೆ ಸ್ವಚ್ಚತೆ ಎಂಬುದು ಕೇವಲ ಅದೇಶವಾಗಿ ಉಳಿಯುತ್ತದೆ. ಇಂತಹ ದೃಶ್ಯಗಳು ಕೇವಲ ಬೋಳಂತರೂ ರಸ್ತೆಯ ಬದಿಯಲ್ಲಿ ಕಾಣುತ್ತಿಲ್ಲ. ಬೇರೆ ಬೇರೆ ಕಡೆಗಳಲ್ಲಿ ಇಂತಹಾ ದೃಶ್ಯಗಳು ಸರ್ವೆ ಸಾಮಾನ್ಯವಾಗಿದೆ.



