ಖಾರದಪುಡಿ ಎರಚಿ ವ್ಯಕ್ತಿಯಿಂದ ಏಳೂವರೆ ಲಕ್ಷ ಹಣ ದೋಚಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು ಕಳ್ಳರನ್ನು ಕೇವಲ 2 ಗಂಟೆಯಲ್ಲಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಆರಾಧ್ಯ ಹೋಟೆಲ್ನಲ್ಲಿ ಶಿವಶಂಕರ ಎನ್ನುವವರು ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ರು. ಇವರು ವಾಕಿಂಗ್ ಹೋಗುತ್ತಿದ್ದ ವೇಳೆ ಸಂಬ0ಧಿ ಯುವಕ ಯಶ್ವಂತ್ ಪರಿಚಯವಾಗಿದ್ದ. ಯಶ್ವಂತ್ ಅರಾಧ್ಯ ತಾನು ಯೆಲ್ಲೋ ಬೋರ್ಡ್ ಕಾರು ಇಟ್ಕಂಡಿದ್ದು ಲಕ್ಷ ಲಕ್ಷ ದುಡೀತಿದ್ದೀನಿ. ನಿಮಗೂ ಕಡಿಮೆ ಬೆಲೆಗೆ ಕಾರು ಕೊಡಿಸ್ತೀನಿ ಎಂದು ತಲೆಕೆಡಿಸಿದ್ದನು. ಈತನ ಮಾತು ನಂಬಿದ ಶಿವಶಂಕರ್ ಮನೆಯಲ್ಲಿದ್ದ ಆರೂವರೆ ಲಕ್ಷ ಹಣ ಹಾಗೂ ಒಡವೆಗಳನ್ನ ಅಡ ಇಟ್ಟು ಏಳೂವರೆ ಲಕ್ಷ ಹಣ ತಂದು ಕಾರು ತರೋಕೆ ಅಂತ ಮನೆಯಿಂದ ಅಚೆ ಬಂದಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಯುವಕರು, ‘ಸರ್ ಈ ಅಡ್ರೆಸ್ ಎಲ್ಲಿ’ ಅಂತ ಕೇಳೋ ನೆಪದಲ್ಲಿ ಬಂದು ಕಣ್ಣಿಗೆ ಖಾರದಪುಡಿ ಎರಚಿ ಕೈಯಲ್ಲಿದ್ದ ಏಳೂವರೆ ಲಕ್ಷ ರೂಪಾಯಿ ಇದ್ದ ಬ್ಯಾಗ್ ಕಿತ್ತಕೊಂಡು ಎಸ್ಕೆಪ್ ಆಗಿದ್ದಾರೆ.



