ಚಲೋ ದತ್ತ ಪೀಠ ಇದೇ ನವೆಂಬರ್ 5ರಂದು ಚಿಕ್ಕಮಗಳೂರಲ್ಲಿ ನಡೆಯಲಿದೆ. ದತ್ತ ಮಾಲಾ ಅಭಿಯಾನ ನಿಮಿತ್ತ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ಸಮಸ್ತ ದತ್ತ ಭಕ್ತರಿಗೆ, ಹಿಂದೂಗಳಿಗೆ, ದೇಶ ಭಕ್ತರಿಗೆ ಆಮಂತ್ರಣವನ್ನ ನೀಡಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳಿಂದ ನಡೆಯುತ್ತಿರುವ ದತ್ತಮಾಲಾ ಅಭಿಯಾನಕ್ಕೆ ಸರ್ವರೂ ಆಗಮಿಸಬೇಕು. ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಇದು ಹಿಂದೂಗಳ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ದತ್ತಭಕ್ತರು ಭಾಗವಹಿಸಬೇಕು ಎಂದು ಮುತಾಲಿಕ್ ಮನವಿ ಮಾಡಿಕೊಂಡಿದ್ದಾರೆ.



