ಆ್ಯಪ್ನಲ್ಲಿ ಪರಿಚಯವಾದವನ ಜೊತೆ ಸಲುಗೆ ಬೆಳೆಸಿದ ಪತ್ನಿ ತನ್ನ ಪತಿಯ ಫೋನ್ನಿಂದಲೇ RDX ಸ್ಫೋಟಿಸೋದಾಗಿ ಬೆದರಿಕೆ ಹಾಕಿರೋ ಘಟನೆ ಬೆಂಗಳೂರಿನ ಆನೇಕಲ್ನ ಮಾರುತಿ ಬಡಾವಣೆಯಲ್ಲಿ ನಡೆದಿದೆ.
ಕಿರಣ್ ಮತ್ತು ವಿದ್ಯಾರಾಣಿ ದಂಪತಿಗಳಾಗಿದ್ದು, ಮಾರುತಿ ಬಡಾವಣೆಯಲ್ಲಿ ವಾಸವಿದ್ದರು. ಈ ಜೋಡಿಗಳು ಮೂಲತಃ ಉತ್ತರ ಕರ್ನಾಟಕ ಮೂಲದವರಾಗಿದ್ದಾರೆ. ವಿದ್ಯಾರಾಣಿ ಮೊಬೈಲ್ ಬಳಸುತ್ತಿದ್ದು, ಈಕೆಗೆ ಸೋಷಿಯಲ್ ಮೀಡಿಯಾ ಆ್ಯಪ್ನಲ್ಲಿ ರಾಮ್ಪ್ರಸಾದ್ ಎಂಬ ವ್ಯಕ್ತಿಯ ಪರಿಚಯವಾಗುತ್ತದೆ. ಬಳಿಕ ವಿದ್ಯಾರಾಣಿ ಪರಿಚಯವಾದ ರಾಮ್ಪ್ರಸಾದ್ ಜೊತೆ ನಿರಂತರ ಚ್ಯಾಟಿಂಗ್ ಮಾಡುತ್ತಿದ್ದಳು. ಒಂದು ದಿನ ಈ ವಿಚಾರ ಗಂಡ ಕಿರಣ್ಗೆ ಗೊತ್ತಾಗಿ ಮೊಬೈಲ್ ಒಡೆದು ಹಾಕಿದ್ದ. ಈ ವಿಚಾರವನ್ನು ಬೇರೆ ನಂಬರ್ ಮೂಲಕ ರಾಮ್ಪ್ರಸಾದ್ಗೆ ವಿದ್ಯಾರಾಣಿ ತಿಳಿಸಿದ್ದಳು.
ಬಳಿಕ ವಿದ್ಯಾರಾಣಿಗೆ ರಾಮ್ ಪ್ರಸಾದ್ ಫ್ರೆಂಡ್ ಅಜಿತ್ ಎಂಬಾತ ಮೆಸೇಜ್ ಮಾಡಿದ್ದಾನೆ. ನೀನು ರಾಮ್ ಗೆ ಮೆಸೇಜ್ ಮಾಡು ಇಲ್ಲದಿದ್ದರೆ ನಿನ್ನ ಗಂಡನನ್ನ ಸಾಯಿಸುತ್ತೇನೆ ಎಂದು ಹೇಳಿದ್ದಾನೆ. ಮಾತ್ರವಲ್ಲದೆ, ನಿನ್ನ ಗಂಡ ಕಿರಣ್ನನ್ನ ನಾನು ಸಾಯಿಸಿ ಸ್ಟೇಷನ್ ಗೆ ಹೋಗಿ ನಿನ್ನ ಹೆಸರನ್ನ ಹೇಳುತ್ತೇನೆ. ನೀನೇ ಸಾಯಿಸು ಎಂಂದು ಹೇಳಿದ್ದಕ್ಕೆ ನಾನು ಸಾಯಿಸಿದೆ ಎಂದು ಸರೆಂಡರ್ ಆಗುತ್ತೇನೆ ಎಂದು ಅಜಿತ್ ಆಕೆಯನ್ನ ಹೆದರಿಸಿದ್ದಾನೆ.
ಹಾಗಾಗಿ ಅಜಿತ್ ಮೆಸೇಜ್ಗೆ ಹೆದರಿ ವಿದ್ಯಾ ಮತ್ತೆ ರಾಮ್ ಪ್ರಸಾದ್ ಗೆ ಮೆಸೇಜ್ ಮಾಡಿದ್ದಾಳೆ. ಈ ವಿಚಾರ ಕೂಡ ಗಂಡ ಕಿರನ್ಗೆ ಗೊತ್ತಾಗಿ ಆಕೆ ಮಾಡಿದ್ದ ಚಾಟ್ ನೋಡಿ ವಿದ್ಯಾಳ ಮೊಬೈಲ್ ಒಡೆದು ಹಾಕಿದ್ದಾನೆ. ಬಳಿಕ ಈ ಸಂಗತಿಯನ್ನು ವಿದ್ಯಾ ಅಜಿತ್ ಬಳಿ ಹೇಳಿದ್ದಾಳೆ.
ಕೊನೆಗೆ ವಿದ್ಯಾ ಹೇಳಿದ ವಿಚಾರ ಕೇಳಿ ಅಜಿತ್ ಹಾಗೂ ರಾಮ್ ಪ್ರಸಾದ್ ಒಂದು ಐಡಿಯಾ ಹೇಳಿದ್ದಾರೆ. ನಾನು ಕಳುಹಿಸುವ ಮೆಸೇಜ್ನ ಗಂಡನ ನಂಬರ್ನಿಂದ ಫಾರ್ವಡ್ ಮಾಡು ಅಂತ ಸೂಚನೆ ನೀಡಿದ್ದಾರೆ. ಡಿಸೆಂಬರ್ 5ರಂದು RDX ಬಾಂಬ್ ಹಾಕುವುದಾಗಿ ಬೆದರಿಕೆ ಸಂದೇಶ ಬರೆದು ಕಳುಹಿಸಿ ಬಳಿಕ ಗಂಡ ಕಿರಣ್ ಮೊಬೈಲ್ನಿಂದ ತನಿಖಾ ಸಂಸ್ಥೆಗಳಿಗೆ ರವಾನಿಸುವುದಾಗಿ ಹೇಳಿದ್ದಾರೆ. ಅಜಿತ್ ಮತ್ತು ರಾಮ್ ಹೇಳಿದಂತೆಯೇ ಆ ಸಂದೇಶವನ್ನು ವಿದ್ಯಾ ಗಂಡನ ಮೊಬೈಲ್ನಿಂದ ತನಿಖಾ ಸಂಸ್ಥೆಗೆ ಕಳುಹಿಸುತ್ತಾಳೆ.
ಮೆಸೇಜ್ ಕಳುಹಿಸಿದ ಬಳಿಕ ಗಂಡನ ಮೊಬೈಲ್ನಿಂದ ಮೆಸೇಜ್ ಡಿಲೀಟ್ ಮಾಡಿದ್ದಳು. ಆದರೆ ಅತ್ತ ಕಡೆಯಿಂದ ತನಿಖಾ ಸಂಸ್ಥೆ ಈ ಮೆಸೇಜ್ ಬಂದಿದ್ದ ನಂಬರ್ನ ಮೂಲ ಹುಡುಕಿ ಹೊರಟಿದ್ದಾರೆ. ಬಳಿಕ ಮನೆಗೆ ಬಂದು ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಪ್ರಿಯಕರ ಮತ್ತು ಆತನ ಸ್ನೇಹಿತನ ಪತ್ತೆಗಾಗಿ ಆನೇಕಲ್ ಪೊಲೀಸರ ತಂಡ ಬಲೆ ಬೀಸಿದೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…