ಜನ ಮನದ ನಾಡಿ ಮಿಡಿತ

Advertisement

ಪತಿಯನ್ನ ಸಿಲುಕಿ ಹಾಕಲು ಪ್ರಿಯಕರನ ಮಾತು ಕೇಳಿದ ಪತ್ನಿ.. ತನಿಖಾ ಸಂಸ್ಥೆಗೇ ಬಾಂಬ್ ಬೆದರಿಕೆ ಹಾಕಿ ಸಿಕ್ಕಿಬಿದ್ದ ಖತರ್ನಾಕ್ ಲೇಡಿ..!

ಆ್ಯಪ್​ನಲ್ಲಿ ಪರಿಚಯವಾದವನ ಜೊತೆ ಸಲುಗೆ ಬೆಳೆಸಿದ ಪತ್ನಿ ತನ್ನ ಪತಿಯ ಫೋನ್​ನಿಂದಲೇ RDX ಸ್ಫೋಟಿಸೋದಾಗಿ ಬೆದರಿಕೆ ಹಾಕಿರೋ ಘಟನೆ ಬೆಂಗಳೂರಿನ ಆನೇಕಲ್‌ನ ಮಾರುತಿ ಬಡಾವಣೆಯಲ್ಲಿ ನಡೆದಿದೆ.

ಕಿರಣ್ ಮತ್ತು ವಿದ್ಯಾರಾಣಿ ದಂಪತಿಗಳಾಗಿದ್ದು, ಮಾರುತಿ ಬಡಾವಣೆಯಲ್ಲಿ ವಾಸವಿದ್ದರು. ಈ ಜೋಡಿಗಳು ಮೂಲತಃ ಉತ್ತರ ಕರ್ನಾಟಕ ಮೂಲದವರಾಗಿದ್ದಾರೆ. ವಿದ್ಯಾರಾಣಿ ಮೊಬೈಲ್ ಬಳಸುತ್ತಿದ್ದು, ಈಕೆಗೆ ​ಸೋಷಿಯಲ್ ಮೀಡಿಯಾ ಆ್ಯಪ್‌ನಲ್ಲಿ ರಾಮ್‌ಪ್ರಸಾದ್ ಎಂಬ ವ್ಯಕ್ತಿಯ ಪರಿಚಯವಾಗುತ್ತದೆ. ಬಳಿಕ ವಿದ್ಯಾರಾಣಿ ಪರಿಚಯವಾದ ರಾಮ್‌ಪ್ರಸಾದ್ ಜೊತೆ ನಿರಂತರ ಚ್ಯಾಟಿಂಗ್ ಮಾಡುತ್ತಿದ್ದಳು. ಒಂದು ದಿನ ಈ ವಿಚಾರ ಗಂಡ ಕಿರಣ್‌ಗೆ ಗೊತ್ತಾಗಿ ಮೊಬೈಲ್ ಒಡೆದು ಹಾಕಿದ್ದ. ಈ ವಿಚಾರವನ್ನು ಬೇರೆ ನಂಬರ್ ಮೂಲಕ ರಾಮ್‌ಪ್ರಸಾದ್‌ಗೆ ವಿದ್ಯಾರಾಣಿ ತಿಳಿಸಿದ್ದಳು.

ಬಳಿಕ ವಿದ್ಯಾರಾಣಿಗೆ ರಾಮ್ ಪ್ರಸಾದ್ ಫ್ರೆಂಡ್ ಅಜಿತ್ ಎಂಬಾತ ಮೆಸೇಜ್ ಮಾಡಿದ್ದಾನೆ. ನೀನು ರಾಮ್ ಗೆ ಮೆಸೇಜ್ ಮಾಡು ಇಲ್ಲದಿದ್ದರೆ ನಿನ್ನ ಗಂಡನನ್ನ ಸಾಯಿಸುತ್ತೇನೆ ಎಂದು ಹೇಳಿದ್ದಾನೆ. ಮಾತ್ರವಲ್ಲದೆ, ನಿನ್ನ ಗಂಡ ಕಿರಣ್​ನನ್ನ ನಾನು ಸಾಯಿಸಿ ಸ್ಟೇಷನ್ ಗೆ ಹೋಗಿ ನಿನ್ನ ಹೆಸರನ್ನ ಹೇಳುತ್ತೇನೆ. ನೀನೇ ಸಾಯಿಸು ಎಂಂದು ಹೇಳಿದ್ದಕ್ಕೆ ನಾನು ಸಾಯಿಸಿದೆ ಎಂದು ಸರೆಂಡರ್ ಆಗುತ್ತೇನೆ ಎಂದು ಅಜಿತ್​ ಆಕೆಯನ್ನ ಹೆದರಿಸಿದ್ದಾನೆ.

ಹಾಗಾಗಿ ಅಜಿತ್ ಮೆಸೇಜ್​ಗೆ ಹೆದರಿ ವಿದ್ಯಾ ಮತ್ತೆ ರಾಮ್ ಪ್ರಸಾದ್ ಗೆ ಮೆಸೇಜ್ ಮಾಡಿದ್ದಾಳೆ. ಈ ವಿಚಾರ ಕೂಡ ಗಂಡ ಕಿರನ್​ಗೆ ಗೊತ್ತಾಗಿ ಆಕೆ ಮಾಡಿದ್ದ ಚಾಟ್ ನೋಡಿ ವಿದ್ಯಾಳ ಮೊಬೈಲ್ ಒಡೆದು ಹಾಕಿದ್ದಾನೆ. ಬಳಿಕ ಈ ಸಂಗತಿಯನ್ನು ವಿದ್ಯಾ ಅಜಿತ್ ಬಳಿ ಹೇಳಿದ್ದಾಳೆ.

ಕೊನೆಗೆ ವಿದ್ಯಾ ಹೇಳಿದ ವಿಚಾರ ಕೇಳಿ ಅಜಿತ್ ಹಾಗೂ ರಾಮ್ ಪ್ರಸಾದ್ ಒಂದು ಐಡಿಯಾ ಹೇಳಿದ್ದಾರೆ. ನಾನು ಕಳುಹಿಸುವ ಮೆಸೇಜ್‌ನ ಗಂಡನ ನಂಬರ್‌ನಿಂದ ಫಾರ್ವಡ್ ಮಾಡು ಅಂತ ಸೂಚನೆ ನೀಡಿದ್ದಾರೆ. ಡಿಸೆಂಬರ್ 5ರಂದು RDX ಬಾಂಬ್ ಹಾಕುವುದಾಗಿ ಬೆದರಿಕೆ ಸಂದೇಶ ಬರೆದು ಕಳುಹಿಸಿ ಬಳಿಕ ಗಂಡ ಕಿರಣ್ ಮೊಬೈಲ್​ನಿಂದ ತನಿಖಾ ಸಂಸ್ಥೆಗಳಿಗೆ ರವಾನಿಸುವುದಾಗಿ ಹೇಳಿದ್ದಾರೆ. ಅಜಿತ್​ ಮತ್ತು ರಾಮ್​ ಹೇಳಿದಂತೆಯೇ ಆ ಸಂದೇಶವನ್ನು ವಿದ್ಯಾ ಗಂಡನ ಮೊಬೈಲ್​ನಿಂದ ತನಿಖಾ ಸಂಸ್ಥೆಗೆ ಕಳುಹಿಸುತ್ತಾಳೆ.

ಮೆಸೇಜ್​ ಕಳುಹಿಸಿದ ಬಳಿಕ ಗಂಡನ ಮೊಬೈಲ್‌ನಿಂದ ಮೆಸೇಜ್ ಡಿಲೀಟ್ ಮಾಡಿದ್ದಳು. ಆದರೆ ಅತ್ತ ಕಡೆಯಿಂದ ತನಿಖಾ ಸಂಸ್ಥೆ ಈ ಮೆಸೇಜ್ ಬಂದಿದ್ದ ನಂಬರ್‌ನ ಮೂಲ ಹುಡುಕಿ ಹೊರಟಿದ್ದಾರೆ. ಬಳಿಕ ಮನೆಗೆ ಬಂದು ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಪ್ರಿಯಕರ ಮತ್ತು ಆತನ ಸ್ನೇಹಿತನ ಪತ್ತೆಗಾಗಿ ಆನೇಕಲ್ ಪೊಲೀಸರ ತಂಡ ಬಲೆ ಬೀಸಿದೆ.

Leave a Reply

Your email address will not be published. Required fields are marked *

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

ಮಾಣಿ: ಮರ ಬಿದ್ದು ಟ್ರಾನ್ಸ್ ಫಾರ್ಮರ್‌ಗೆ ಹಾನಿ; ರಸ್ತೆ ಮೇಲೆ ಮರ ಸಹಿತ ಮುರಿದುಬಿದ್ದು ಸಂಚಾರ ಬಂದ್…!

ಗೋಳಿತ್ತೊಟ್ಟು: ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು…!

ಬಂಟ್ವಾಳ: ಭಾರೀ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು..!

ಉಪ್ಪಿನಂಗಡಿ: ನಕಲಿ 500 ನೋಟು ಮಾದರಿ ಮುದ್ರಣ ಪ್ರಕರಣ, 7 ಮಂದಿ ವಶ….!

error: Content is protected !!