ಜನ ಮನದ ನಾಡಿ ಮಿಡಿತ

Advertisement

ನಾಯಿಮರಿಯನ್ನು ರಸ್ತೆಗೆ ಎಸೆದು ಕಾಲಿನಿಂದ ತುಳಿದು ಸಾಯಿಸಿದ ರಾಕ್ಷಸ!!! ವಿಡಿಯೋ ವೈರಲ್

ಪುಟ್ಟ ಪುಟ್ಟ ಮರಿಗಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ??? ಮಾತು ಬಾರದ ಪ್ರಾಣಿಗಳನ್ನ ನಾವು ದೇವರಂತೆ ಕಾಣುವಾಗ ಇಲ್ಲೊಬ್ಬ ನರ ರಾಕ್ಷಸ ಪುಟ್ಟ ನಾಯಿ ಮರಿಯನ್ನ ಎತ್ತಿ ನೆಲಕ್ಕೆ ಹೊಡೆದು, ಅದನ್ನ ತುಳಿದು ಕೊಂದಿದ್ದಾನೆ .

ಇದಕ್ಕೆ ಸಂಬoಧ ಪಟ್ಟ ವಿಡಿಯೋ ಇದೀಗ ನೆಟ್ಟಿಗರ ರಕ್ತ ಕುದಿಯುವಂತೆ ಮಾಡಿದೆ. ವಿಡಿಯೋದಲ್ಲಿ ವ್ಯಕ್ತಿಯೋರ್ವ ರಸ್ತೆ ಬದಿಯಲ್ಲಿ ಕುಳಿತುಕೊಂಡಿರುವಾಗ ಮುದ್ದಾದ ನಾಯಿ ಮರಿಯೊಂದು ಆಟ ಆಡುತ್ತ ಅವನ ಹತ್ತಿರ ಬರುತ್ತದೆ. ನಾಯಿ ಮರಿಗಳು ಕಂಡ ಕೂಡಲೇ ಅದನ್ನೆತ್ತಿ ಮುದ್ದಾಡುವ ಜನರ ನಡುವೆ ಈತ ಮಾಡಿದ್ದು ಮನುಷ್ಯ ಕುಲವೇ ಸಂಕಟ ಪಡುವ ಕೆಲಸ. ಆ ನಾಯಿ ಮರಿಯನ್ನ ಎತ್ತಿ ರಸ್ತೆಗೆ ಜೋರಾಗಿ ಬೀಸಾಡಿದ್ದಾನೆ.

ಅದಾದ ಮೇಲೆಯೂ ಬಿಡದ ರಕ್ಕಸ ಯುವಕ ನಾಯಿಯನ್ನ ತುಳಿದು ಕೊಲೆ ಮಾಡಿದ್ದಾನೆ. . ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ವಿಡಿಯೋ ನೋಡಿ ಸ್ವತಹ ಮಧ್ಯಪ್ರದೇಶದ ಸಿಎಂ ಶಿವರಾಜ್? ಸಿಂಗ್ ಚೌಹಣ್, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಕೂಡ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. ಇಂತಹ ಕ್ರೂರತೆ ತೋರಿದ ಪಾಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ನ್ಯುಮೋನಿಯಾಗೆ 6ನೇ ತರಗತಿ ವಿದ್ಯಾರ್ಥಿನಿ ಬಲಿ

ಬಂಟ್ವಾಳ: ಬಿಸಿರೋಡು–ಅಡ್ಡಹೊಳೆ ಚತುಷ್ಪಥ ಕಾಮಗಾರಿ ನಿಂತಿಲ್ಲ: ಕೆಎನ್‌ಆರ್‌ಸಿಎಲ್ ಸ್ಪಷ್ಟನೆ

ವಾಷಿಂಗ್ಟನ್: ಟ್ರಂಪ್ ಸುಂಕಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕಂಪನಿಗಳಿಗೆ ಬಿಲಿಯನ್‌ಗಟ್ಟಲೆ ಮರುಪಾವತಿ..!

ಟೆಹ್ರಾನ್: ಮೊಜ್ತಬಾ ಖಮೇನಿ ಸಂಪರ್ಕಿಸುವುದು ಕಷ್ಟ; ಇರಾನ್ ಅಧ್ಯಕ್ಷರ ಬಹಿರಂಗ ಹೇಳಿಕೆ…!

ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಮೀನುಗಾರರ ಸಮುದ್ರ ಪೂಜೆ; ಉತ್ತಮ ಮೀನುಗಾರಿಕೆಗೆ ಪ್ರಾರ್ಥನೆ..!

ಮಂಗಳೂರು: ಮಂಗಳೂರು-ಮೂಡುಬಿದಿರೆ ಹೆದ್ದಾರಿಯಲ್ಲಿ ಅಪಾಯದ ಮುನ್ಸೂಚನೆ; ಕೆತ್ತಿಕಲ್ ಗುಡ್ಡ ಮತ್ತೆ ಕುಸಿತ..!

ಬೆಳ್ತಂಗಡಿ: ಪ್ರಚೋದನಾಕಾರಿ ಭಾಷಣ ಪ್ರಕರಣ; ಎಸ್ಟಿಪಿಐ ಮುಖಂಡನಿಗೆ 6 ತಿಂಗಳ ಜೈಲು ಶಿಕ್ಷೆ…!

ಗದಗ: ಚಿಪ್ಸ್ ತರಲು ಹೋದ ಬಾಲಕಿಗೆ ಬೀದಿ ನಾಯಿಗಳ ದಾಳಿ; ಆಸ್ಪತ್ರೆಗೆ ದಾಖಲು…!

ಬಂಟ್ವಾಳ: ಮಳೆ ನೀರಿನ ಅವಾಂತರಕ್ಕೆ ಬ್ರೇಕ್; ಜೋಗಿಬೆಟ್ಟು ರಸ್ತೆಯಲ್ಲಿ ಕಾಮಗಾರಿ ಆರಂಭ…!

error: Content is protected !!