ಬುಡೋಕನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯನ್ ಕರ್ನಾಟಕ ಇವರ ನೇತೃತ್ವದಲ್ಲಿ ರಾಷ್ಟ್ರ ಮಟ್ಟದ ಕರಾಟೆ ಓಪನ್ ಪಂದ್ಯಾವಳಿ ” ಕೊಪ್ಪ ಟ್ರೋಫಿ ” ಕೊಪ್ಪದ ದಿವ್ಯ ಕ್ಷೇತ್ರ ಹರಿಹರಪುರದಲ್ಲಿ ಜನವರಿ 21ರಂದು ನಡೆಯಿತು.

ಈ ಪಂದ್ಯಾವಳಿಯಲ್ಲಿ ಕರಾಟೆ ಶಿಕ್ಷಕರಾದ ಸೆನ್ಸಾಯಿ ಮಾಧವ ವಿಟ್ಲ ಇವರ ತಂಡ ಭಾಗವಹಿಸಿದ್ದು ಹಲವು ಪ್ರಶಸ್ತಿಗಳನ್ನು ಪಡಕೊಂಡಿದ್ದಾರೆ.
ಕುಮಿಟೆ ವಿಭಾಗದಲ್ಲಿ ಓಜಾಲು ಸರಕಾರಿ ಶಾಲೆಯ ಹಂಸಿಕ ಪಿ – ಪ್ರಥಮ, ವಿಠಲ ಪದವಿ ಪೂರ್ವ ಕಾಲೇಜಿನ ಭವಿಶ್ – ಪ್ರಥಮ, ಪುತ್ತೂರು ಬೆಥನಿ ಆಂಗ್ಲ ಮಾದ್ಯಮ ಶಾಲೆಯ ರಿಯೋನ್ ಲಸ್ರಾದೊ – ದ್ವಿತೀಯ, ವಿಟ್ಲ ಜೇಸಿಸ್ ಶಾಲೆಯ ದ್ರುವ – ದ್ವಿತೀಯ, ಸಂತ ವಿಕ್ಟರ್ಸ್ ಪುತ್ತೂರು ಶಾಲೆಯ ಸಾನಿಧ್ಯ – ದ್ವಿತೀಯ, ವಿಟ್ಲ ಮಾದರಿ ಶಾಲೆಯ ಸಾರ್ಥಕ್ – ದ್ವಿತೀಯ, ವಿಟ್ಲ ಜೇಸಿಸ್ ಶಾಲೆಯ ಸಾನ್ವಿ – ತೃತೀಯ ಸ್ಥಾನವನ್ನು ಪಡಗೊಂಡಿದ್ದಾರೆ.
ಹಾಗೇನೇ ಕಟಾ ವಿಭಾಗದಲ್ಲಿ ಓಜಾಲು ಸರಕಾರಿ ಶಾಲೆಯ ಹಂಸಿಕ ಪಿ – ಪ್ರಥಮ, ವಿಠಲ ಪದವಿ ಪೂರ್ವ ಕಾಲೇಜಿನ ಭವಿಶ್ – ಪ್ರಥಮ, ಸಂತ ವಿಕ್ಟರ್ಸ್ ಪುತ್ತೂರು ಶಾಲೆಯ ಸಾನಿಧ್ಯ – ಪ್ರಥಮ, ವಿಟ್ಲ ಮಾದರಿ ಶಾಲೆಯ ಸಾರ್ಥಕ್ – ಪ್ರಥಮ, ವಿಟ್ಲ ಜೇಸಿಸ್ ಶಾಲೆಯ ದ್ರುವ – ದ್ವಿತೀಯ, ಪುತ್ತೂರು ಬೆಥನಿ ಆಂಗ್ಲ ಮಾದ್ಯಮ ಶಾಲೆಯ ರಿಯೋನ್ ಲಸ್ರಾದೊ – ತೃತೀಯ, ವಿಟ್ಲ ಜೇಸಿಸ್ ಶಾಲೆಯ ಸಾನ್ವಿ – ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮಕ್ಕಳಿಗೆ ದಿಲೀಪ್, ರೋಹಿತ್ S N, ನಿಖಿಲ್ K T ತರಬೇತಿ ನೀಡಿರುತ್ತಾರೆ.



