ವಿಟ್ಲ: ಕರಾವಳಿ ಪರಿಸರದಾದ್ಯಂತ ಬಿಸಿಲಿನ ಅಬ್ಬರಕ್ಕೆ ಜನರು ಹೊರಗಡೆ ಕಾಲಿಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ವಾಹನ ಸವಾರರು ಮತ್ತು ಪಾದಾಚಾರಿಗಳು, ವ್ಯಾಪಾರಿಗಳು ಬವಣೆ ಅನುಭವಿಸುತ್ತಿದ್ದಾರೆ. ಇದರ ನಡುವೆಯೂ ವಿಟ್ಲದ ಎರಡು ಅಂಗಡಿಯವರು ಬಿಸಿಲಿನ ಉಷ್ಣಾಂಶವನ್ನು ತಡೆಯಲು ಅಂಗಡಿ ಮುಂಭಾಗ ನೀರಿನ ಫಾಗಿಂಗ್ ಮಾಡುವ ಮೂಲಕ ವಿಶೇಷ ಪ್ರಯೋಗ ಮಾಡಿದ್ದಾರೆ.
ವಿಟ್ಲ ನಾಲ್ಕು ಮಾರ್ಗ ರಸ್ತೆಯಲ್ಲಿರುವ ಕಿಟ್ ಕ್ಯಾಟ್ ಪೆಟ್ ಶಾಪ್ ಮಾಲಕ ಇಸ್ಮಾಯಿಲ್, ಮತ್ತು ಮೊಬೈಲ್ ಅಂಗಡಿ ಮಾಲಕ ಖಲಂದರ್ ಅವರು ತಮ್ಮ ಅಂಗಡಿ ಮುಂಭಾಗದ ಮೇಲ್ಭಾಗದಲ್ಲಿ ನೀರಿನ ಪೈಪ್ ಅಳವಡಿಸಿ ಫಾಗಿಂಗ್ ಮಾಡಿದ್ದಾರೆ. ಇದು ಕೇವಲ ಇವರ ಅಂಗಡಿಗೆ ಬರುವ ಗ್ರಾಹಕರಿಗೆ ಮಾತ್ರವಲ್ಲದೇ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪಾದಾಚಾರಿಗಳಿಗೆ ಪ್ರಯೋಜನಕಾರಿಯಾಗಿದೆ. ಮಧ್ಯಾಹ್ನ ವೇಳೆ ಉಂಟಾಗುವ ಸುಡು ಬಿಸಿಲಿಗೆ ಹೆಚ್ಚಾಗಿ ಫಾಗಿಂಗ್ ಮಾಡಲಾಗುತ್ತಿದೆ. ನೀರಿನ ಅಭಾವವನ್ನು ಅರಿತು ದಿನಕ್ಕೆ ವಿವಿಧ ಸಮಯಗಳಲ್ಲಿ ದಿನಕ್ಕೆ ಒಂದು ಗಂಟೆ ಫಾಗಿಂಗ್ ಮಾಡಲಾಗುತ್ತಿದ್ದು, ಸುಡು ಬಿಸಿಲಿಗೆ ಫಾಗಿಂಗ್ ಆಗುವಾಗ ಜನರಿಗೆ ತಂಪೆರೆಯುತ್ತದೆ. ಒಂದು ಗಂಟೆ ಫಾಗಿಂಗ್ ಮಾಡಲು ೨೦ ಲೀಟರ್ ನೀರು ಬೇಕಾಗುತ್ತದೆ. ಇದು ಅಳವಡಿಸಿದ್ದರಿಂದ ಅಂಗಡಿ ಒಳಗಡೆ ನಿಂತು ವ್ಯಾಪಾರ ಮಾಡಲು ಹಾಗೂ ಗ್ರಾಹಕರಿಗೆ, ರಸ್ತೆಯಲ್ಲಿ ತೆರಳುವ ಸಾರ್ವಜನಿಕರಿಗೂ ಕೂಡಾ ಇದು ಪ್ರಯೋಜವಾಗಿದೆ ಎಂದು ಅಂಗಡಿ ಮಾಲಕ ಇಸ್ಮಾಯಿಲ್ ಅವರು ಹೇಳುತ್ತಾರೆ.
ಈ ಪ್ರಯೋಗದಿಂದ ಕೇವಲ ಇವರ ಎರಡು ಅಂಗಡಿಗಳಿಗೆ ಮಾತ್ರ ಪ್ರಯೋಜನವಲ್ಲ. ರಸ್ತೆಯಲ್ಲಿ ತೆರಳುವ ಪಾದಾಚಾರಿಗಳಿಗೂ ಪ್ರಯೋಜವಾಗಿದೆ. ಇವರ ಈ ರೀತಿಯ ಪ್ರಯೋಗದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿದ್ದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ…
ನಗರದ ಲಾಲ್ಬಾಗ್ ಸಿಗ್ನಲ್ ಸಮೀಪ ಶನಿವಾರ ಮಧ್ಯಾಹ್ನ ಸಾರ್ವಜನಿಕರ ಕಣ್ಣೆದುರಲ್ಲೇ ಭೀಕರ ಮಾರಕಾಸ್ತ್ರ ದಾಳಿ ನಡೆದಿದ್ದು, ಪ್ರಸಿದ್ಧ ರೌಡಿಶೀಟರ್ ಒಬ್ಬ…
ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಷಸೇವನೆ…
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ…
ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…