ವಿಟ್ಲ: ಕರಾವಳಿ ಪರಿಸರದಾದ್ಯಂತ ಬಿಸಿಲಿನ ಅಬ್ಬರಕ್ಕೆ ಜನರು ಹೊರಗಡೆ ಕಾಲಿಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ವಾಹನ ಸವಾರರು ಮತ್ತು ಪಾದಾಚಾರಿಗಳು, ವ್ಯಾಪಾರಿಗಳು ಬವಣೆ ಅನುಭವಿಸುತ್ತಿದ್ದಾರೆ. ಇದರ ನಡುವೆಯೂ ವಿಟ್ಲದ ಎರಡು ಅಂಗಡಿಯವರು ಬಿಸಿಲಿನ ಉಷ್ಣಾಂಶವನ್ನು ತಡೆಯಲು ಅಂಗಡಿ ಮುಂಭಾಗ ನೀರಿನ ಫಾಗಿಂಗ್ ಮಾಡುವ ಮೂಲಕ ವಿಶೇಷ ಪ್ರಯೋಗ ಮಾಡಿದ್ದಾರೆ.
ವಿಟ್ಲ ನಾಲ್ಕು ಮಾರ್ಗ ರಸ್ತೆಯಲ್ಲಿರುವ ಕಿಟ್ ಕ್ಯಾಟ್ ಪೆಟ್ ಶಾಪ್ ಮಾಲಕ ಇಸ್ಮಾಯಿಲ್, ಮತ್ತು ಮೊಬೈಲ್ ಅಂಗಡಿ ಮಾಲಕ ಖಲಂದರ್ ಅವರು ತಮ್ಮ ಅಂಗಡಿ ಮುಂಭಾಗದ ಮೇಲ್ಭಾಗದಲ್ಲಿ ನೀರಿನ ಪೈಪ್ ಅಳವಡಿಸಿ ಫಾಗಿಂಗ್ ಮಾಡಿದ್ದಾರೆ. ಇದು ಕೇವಲ ಇವರ ಅಂಗಡಿಗೆ ಬರುವ ಗ್ರಾಹಕರಿಗೆ ಮಾತ್ರವಲ್ಲದೇ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪಾದಾಚಾರಿಗಳಿಗೆ ಪ್ರಯೋಜನಕಾರಿಯಾಗಿದೆ. ಮಧ್ಯಾಹ್ನ ವೇಳೆ ಉಂಟಾಗುವ ಸುಡು ಬಿಸಿಲಿಗೆ ಹೆಚ್ಚಾಗಿ ಫಾಗಿಂಗ್ ಮಾಡಲಾಗುತ್ತಿದೆ. ನೀರಿನ ಅಭಾವವನ್ನು ಅರಿತು ದಿನಕ್ಕೆ ವಿವಿಧ ಸಮಯಗಳಲ್ಲಿ ದಿನಕ್ಕೆ ಒಂದು ಗಂಟೆ ಫಾಗಿಂಗ್ ಮಾಡಲಾಗುತ್ತಿದ್ದು, ಸುಡು ಬಿಸಿಲಿಗೆ ಫಾಗಿಂಗ್ ಆಗುವಾಗ ಜನರಿಗೆ ತಂಪೆರೆಯುತ್ತದೆ. ಒಂದು ಗಂಟೆ ಫಾಗಿಂಗ್ ಮಾಡಲು ೨೦ ಲೀಟರ್ ನೀರು ಬೇಕಾಗುತ್ತದೆ. ಇದು ಅಳವಡಿಸಿದ್ದರಿಂದ ಅಂಗಡಿ ಒಳಗಡೆ ನಿಂತು ವ್ಯಾಪಾರ ಮಾಡಲು ಹಾಗೂ ಗ್ರಾಹಕರಿಗೆ, ರಸ್ತೆಯಲ್ಲಿ ತೆರಳುವ ಸಾರ್ವಜನಿಕರಿಗೂ ಕೂಡಾ ಇದು ಪ್ರಯೋಜವಾಗಿದೆ ಎಂದು ಅಂಗಡಿ ಮಾಲಕ ಇಸ್ಮಾಯಿಲ್ ಅವರು ಹೇಳುತ್ತಾರೆ.
ಈ ಪ್ರಯೋಗದಿಂದ ಕೇವಲ ಇವರ ಎರಡು ಅಂಗಡಿಗಳಿಗೆ ಮಾತ್ರ ಪ್ರಯೋಜನವಲ್ಲ. ರಸ್ತೆಯಲ್ಲಿ ತೆರಳುವ ಪಾದಾಚಾರಿಗಳಿಗೂ ಪ್ರಯೋಜವಾಗಿದೆ. ಇವರ ಈ ರೀತಿಯ ಪ್ರಯೋಗದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಕೂಲ್ ಬಸ್ಗಳು ಕಾನೂನು ಮತ್ತು ನಿಯಮಗಳನ್ನು ಪಾಲಿಸುತ್ತಿದೆಯಾ ಎಂಬ ಬಗ್ಗೆ…
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿಯಿಂದ ಹಳೇ ಸೇತುವೆ ಕಡೆಗೆ ಸಾಗುವ ದಾರಿಯ…
ಹೆಬ್ರಿ ಸಮೀಪದ ಹೊಸೂರು ಎಂಬಲ್ಲಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ಜೂಜಾಟ ನಡೆಯುತ್ತಿರುವ…
ಮಚ್ಚಿನ ಗ್ರಾಮ ಪಾಳ್ಯರ ಎಂಬಲ್ಲಿ ಪಿಕಪ್ ವಾಹನ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸವಾರರಿಬ್ಬರು ಚಿಕಿತ್ಸೆ…
ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ, ದೇಶಾದ್ಯಂತ ಗೋಹತ್ಯೆ ಹಾಗೂ ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಜಾರಿಗೊಳಿಸಬೇಕು ಎಂದು ಮುಸ್ಲಿಂ…
ಕಂಟೇನರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಕೋಟೇಶ್ವರ ಹಾಲಾಡಿ…