ಜನ ಮನದ ನಾಡಿ ಮಿಡಿತ

Advertisement

ಕಡಬ:ಅಪರಾಧ ಮಾಡುವ ಹೆಚ್ಚಿನ ವ್ಶಕ್ತಿಗಳು ಮಾದಕ ವಸ್ತುವಿನ ದಾಸರಾಗಿರುತ್ತಾರೆˌˌಪೋಲೀಸ್ ಅಧಿಕಾರಿ ಹರೀಶ್ ಅಭಿಪ್ರಾಯ..

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದ ರಾಮನಗರದಲ್ಲಿ ವಿಶ್ವ ಮಾಧಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮವು ಅಖಿಲಕರ್ನಾಟಕ ಜನಜಾಗೃತಿ ವೇಧಿಕೆ ವತಿಯಿಂದ ನಡೆಯಿತು.

ಕಾರ್ಯಕ್ರಮವನ್ನು ಉಧ್ಘಾಟಿಸಿದ ಕಡಬ ಪೋಲೀಸ್ ಠಾಣೆಯ ಪೋಲೀಸ್ ಅಧಿಕಾರಿ ಹರೀಶ್ ರವರು ಮಾತನಾಡಿ. ವಿಶ್ವ ಮಾಧಕ ವಸ್ತುಗಳ ವಿರೋಧಿ ದಿನಾಚರಣೆಯ ಪ್ರಯುಕ್ತ ಸಾರ್ವಜನಿಕರಿಗೆ ಮಾಧಕ ವಸ್ತುಗಳ ದಷ್ಪರಿಣಾಮ ದ ತಿಳುವಳಿಕೆ ನೀಡುವುದು ಪ್ರತಿಯೋಬ್ಬ ಪ್ರಜ್ಞಾವಂತ ನಾಗರಿಕರ ಆಧ್ಶ ಕರ್ತವ್ಶವಾಗಿದೆ…ಧರ್ಮಸ್ಥಳ ಯೋಜನೆ ಹಾಗೂ ಅಖಿಲಕರ್ನಾಟಕ ಜನಜಾಗೃತಿ ವೇಧಿಕೆ ವತಿಯಿಂದ ನಡೆಸುವ ಹತ್ತು ಹಲವು ಜನಪಯೋಗಿ ಕಾರ್ಯಕ್ರಮಗಳಲ್ಲಿ ಇದೂ ಒಂದು. ವ್ಶಕ್ತಿಯ ದೇಹದಲ್ಲಿ ಮಧ್ಶಪಾನ ಗಾಂಜಾ ಅಫೀಮ್ ಗಳು ಅಮಲು ನೀಡುವ ಮಾತ್ರೆಗಳು ಕ್ಸೀರಪ್ ಗಳು ಪ್ರವೇಶಿಸಿ ಮನುಷ್ಶನ ದೇಹದ ಹತೋಟಿಯನ್ನು ತಪ್ಪಿಸುವುದರ ಜೊತೆಗೆ ಸಮಾಜಘಾತುಕ ಚಟುವಟಿಕೆಗಳನ್ನು ನಡೆಸಲು ಪ್ರೇರೇಪಿಸುತ್ತದೆ.
ಪೋಲೀಸ್ ಇಲಾಖೆಯ ಸರ್ವೇಕ್ಷಣೆ ಪ್ರಕಾರ ಅಪರಾಧಗಳನ್ನು ಮಾಡುವ ಅತೀ ಹೆಚ್ಚು ಪ್ರಕರಣಗಳು ಮಾಧಕ ವಸ್ತುಗಳನ್ನು ಸೇವಿಸಿದ ವ್ಶಕ್ತಿಯಿಂದಲೇ ನಡೆಯುತ್ತಿರುವುದು ಕಂಡುಬರುತ್ತಿದೆ. ಕಾನೂನು ಉಲ್ಲಂಘಣಾ ಚಟುವಟಿಕೆಗಳನ್ನು ಮಾಡಲೂ ಇದು ಪ್ರೇರಣೆ ನೀಡುತ್ತದೆ .ಸಂಚಾರಿ ನಿಯಮಗಳನ್ನೂ ಸರಿಯಾಗಿ ಪಾಲಿಸುವ ಕುರಿತು ಹಾಗೂ ಪೋಕ್ಸ್ ಕಾಯಿದೆಯನ್ವಯ ಅಪರಾಧಿಗಳಿಗೆ ಶಿಕ್ಷೆವಿಧಿಸುವ ವಿಧಾನಗಳು ಮಹಿಳಾ ಸಂರಕ್ಷಣಾ ಕಾನೂನಿನ ಅರಿವು ಮೂಡಿಸಿದರು. ಧರ್ಮಸ್ಥಳ ಯೋಜನೆಯ ಸ್ವಸಹಾಯ ಸಂಘಗಳ ಮೂಲಕ ಉತ್ತಮ ಸಂಸ್ಕಾರಯುತ ಜೀವನ ನಡೆಸುವ ಅದೆಷ್ಟೋ ಕುಟುಂಬಗಳು ಜನಜಾಗೃತಿ ವೇಧಿಕೆಯ ಕಾರ್ಯಕ್ರಮಗಳ ಪ್ರಯೋಜನದಿಂದಲೇ ಸಾಧ್ಶವಾಗಿದೆ ಎಂದು ಸ್ಲಾಘಿಸಿದರು
ಜಿಲ್ಲಾ ಜನಜಾಗೃತಿ ವೇಧಿಕೆ ಯ ಸದಸ್ಶರಾದ ಶಿವಪ್ರಸಾದ್ ರೈ ಮೈಲೇರಿಯವರು ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಶಕ್ಷತೆಯನ್ನು ರಾಮನಗರ ಒಕ್ಕೂಟದ ಅಧ್ಶಕ್ಷೆ ರಝೀಯಾ ವಹಿಸಿದ್ದರು.
ವೇಧಿಕೆಯಲ್ಲಿ ಶಾಲಾಭಿವಧ್ಧಿ ಸಮಿತಿ ಸದಸ್ಶೆ ಭವ್ಶ ಪೋಲೀಸ್ ಅಧಿಕಾರಿ ಸರಸ್ವತಿ ಹಾಗೂ ಒಕ್ಕೂಟದ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಮಾತೃಶ್ರೀ ಸಂಘದ ಸದಸ್ಶೆ ಅನಿತಾ ಸ್ವಾಗತಿಸಿ ಸೇವಾಪ್ರತಿನಿಧಿ Jayalaxmi ವಂದಿಸಿದರು.
ರಾಮನಗರ ಒಕ್ಕೂಟದ ಸದಸ್ಶರುಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರ್ವಹಿಸಿದರು..

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!