ವಿದೇಶದಿಂದ ಮರಳಿ ಬಂದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿ ಕೊಂದು ೧೫ ತುಂಡುಗಳಾಗಿ ಕತ್ತರಿಸಿದ ಘಟನೆ ಮೀರತ್ನಲ್ಲಿ ನಡೆದಿದೆ. ಸೌರಭ್ ಕುಮಾರ್ ಮೃತ ದುರ್ದೈವಿಯಾಗಿದ್ದಾನೆ.

ಪತ್ನಿ ಮುಸ್ಕಾನ್ ಹಾಗೂ ಪುತ್ರಿ ಪಿಹು ಹುಟ್ಟುಹಬ್ಬಕ್ಕೆ ಧಿಡೀರ್ ಮನೆಗೆ ಬಂದಿದ್ದ ಪತಿ ಸೌರಭ್ ನನ್ನು ಕಂಡು ತಬ್ಬಿಬ್ಬಾದ ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಗೆ ಅಮಲು ಪದಾರ್ಥ ನೀಡಿ ಕೊಂದಿದ್ದಾರೆ. ಬಳಿಕ ಮೃತದೇಹವನ್ನು ೧೫ ತುಂಡುಗಳಾಗಿ ಮಾಡಿ ಪ್ಲಾಸ್ಟಿಕ್ ಡ್ರಾಮ್ ನಲ್ಲಿ ಹಾಕಿ ಸಿಮೆಂಟಿನಿಂದ ಮುಚ್ಚಿದ್ದಾರೆ.
ಆರೋಪಿಗಳು ಕೃತ್ಯ ನಡೆಸಿ ಊರು ಬಿಟ್ಟು ಶಿಮ್ಲಾಗೆ ಪರಾರಿಯಾಗಿದ್ದರು. ಬಳಿಕ ಮನೆಗೆ ಹಿಂದುರಿಗಿದ ಪತ್ನಿ ಮುಸ್ಕಾನ್ ತನ್ನ ತಂದೆಯ ಬಳಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ್ಡಿದ್ದಾಳೆ. ನಾಗ್ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



