ಜನ ಮನದ ನಾಡಿ ಮಿಡಿತ

Advertisement

ಕಲಿಕೆಯಲ್ಲಿ ಜಾಣೆ ಕಲಾ ಜಗತ್ತಿನಲ್ಲಿ ಪ್ರವೀಣೆ

ಚಿಕ್ಕ ಪ್ರಾಯದಲ್ಲೇ ಕಲಾ ಆಸಕ್ತಿಯನ್ನು ಬೆಳೆಸಿ, ಕಲಾ ಆರಾಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವವರು ಸುರೇಂದ್ರ ಪೂಜಾರಿ ಮತ್ತು ನಳಿನಿ ದಂಪತಿಗಳ ಪುತ್ರಿ ಸೃಜನಿ ಪೂಜಾರಿ.

ಸೃಜನಿ ಚಿಕ್ಕಂದಿನಿಂದಲೆ ತನ್ನನ್ನು ತಾನು ನಾಟ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ಅನೇಕ ಕಡೆಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿರುತ್ತಾರೆ. ಕೇವಲ ನಾಟ್ಯದಲ್ಲಿ ಮಾತ್ರ ಪ್ರವೀಣೆ ಆಗದೆ ಬಾಲ್ಯದಿಂದಲೂ ಯೋಗ,ಚೆಸ್,ಪ್ರಬಂಧ ,ಕಥೆ, ಭಾಷಣ ಹೀಗೆ ಕ್ರೀಡಾ ಕ್ಷೇತ್ರ ಮತ್ತು ಬರವಣಿಗೆ ಕ್ಷೇತ್ರದಲ್ಲಿ ತನ್ನನು ತಾನು ತೊಡಗಿಸಿ ಕೊಂಡಿದ್ದಾರೆ. ಜೊತೆಗೆ ಉತ್ತಮವಾದ ಮಾತುಗಾರಿಕೆ ನಿರೂಪಣೆ ಕ್ಷೇತ್ರದತ್ತವಾಲುವಂತೆ ಮಾಡುತ್ತದೆ. ಹಲವು ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಮಾಡಿ ಸೈ ಎಂದು ಎನಿಸಿಕೊಂಡಿದ್ದಾರೆ.

ಶಾಲಾ ದಿನಗಳಲ್ಲಿ ಪ್ರತಿಭಾಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿರುತ್ತಾಳೆ . ಕೇವಲ ನಾಟ್ಯ , ಆಟ , ಸಾಹಿತ್ಯ ಆಸಕ್ತಿಯ ಜೊತೆಗೆ ಕಲಿಕೆಯಲ್ಲೂ ಈಕೆ ಜಾಣೆಯಾಗಿದ್ದಳು . ಅಲ್ಲದೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ 96 ಶೇಕಡಾ ಅಂಕವನ್ನು ಪಡೆದು .ತನ್ನ ಉಜ್ವಲವಾದ ಕಲಾ ಕಲಿಕೆ ಜರ್ನಿಯೊಂದಿದೆ ಹೆಜ್ಜೆ ಹಾಕ್ತಾ ಇದ್ದಾರೆ . ವಾಯ್ಸ್ ಆಫ್ ಆರಾಧನ ತಂಡದ ಪ್ರತಿಭೆಯಾಗಿದ್ದು , ಈ ತಂಡದ ನೇತೃತ್ವದಲ್ಲಿ ನಡೆದ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಸಿದ್ದಾಳೆ. ಜೊತೆಗೆ ಕರಾವಳಿಯ ಜನಮನದ ನಾಡಿಮಿಡಿತವಾದ ಅಭಿಮತ ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಭಾ ಲೋಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಾ ಕೌಶಲ್ಯವನ್ನು ತೋರಿಸಿದ್ದಾರೆ .

 

 

Leave a Reply

Your email address will not be published. Required fields are marked *

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪ*ಘಾತದಲ್ಲಿ ಯುವಕ ಸಾ*ವು….!

ಬಂಟ್ವಾಳ: ಅಮ್ಮುಂಜೆ ವೃದ್ಧೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ…!

ನವದೆಹಲಿ: ಚಿನ್ನದ ಬೆಲೆ ಇಳಿಯುತ್ತಾ? ವಿಶ್ವ ಚಿನ್ನ ಮಂಡಳಿಯ ಭವಿಷ್ಯ…!

error: Content is protected !!