ಶಬರಿಮಲೆಗೆ ತೆರಳಿದ್ದ ಬಂಟ್ವಾಳದ ಶಾಲೆಯ ಶಿಕ್ಷಕರೊಬ್ಬರು ಸನ್ನಿಧಿಯಲ್ಲಿ ಕುಸಿದು ಬಿದ್ದು ಮೃತಪಟ್ಟ ಬುಧವಾರ ನಡೆದಿದೆ.

ಬಂಟ್ವಾಳ ತಾಲೂಕಿನ ಕೆದಿಲ ಪಾಟ್ರಕೋಡಿ ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಉಮರಗಿ ಶರಣಪ್ಪ(೫೭) ಮೃತಪಟ್ಟವರು. ಇವರು ಬಂಟ್ವಾಳ ತಂಡದ ಜತೆಗೆ ಎ. ೮ರಂದು ಶಬರಿಮಲೆಗೆ ತೆರಳಿದ್ದು, ಬುಧವಾರ ಮುಂಜಾನೆ ದೇವರ ದರ್ಶನಕ್ಕೆ ತೆರಳಲು ಹೋಗುತ್ತಿದ್ದಾಗ ಪಂಬ ಸನ್ನಿಧಿಯಲ್ಲಿ ಕುಸಿದು ಬಿದ್ದಿದ್ದಾರೆ. ಇವರು ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ.



