ಜನ ಮನದ ನಾಡಿ ಮಿಡಿತ

Advertisement

ಬಿ.ಸಿ.ರೋಡ್ : ಗೆಜ್ಜೆಗಿರಿ ಮೇಳದವರಿಂದ ಯಕ್ಷೋತ್ಸವ 2025

ಉಪನಿಷತ್ತ್, ಭಗವದ್ಗೀತೆ, ಇದನ್ನು ಜನ ಸಾಮಾನ್ಯರು ತಿಳಿದಿರುವುದು ತುಂಬ ಅಪರೂಪ. ಆದರೆ ಯಕ್ಷಗಾನದ ಮೂಲಕ ಇದನ್ನು ತಿಳಿಯುವುದು ಸಾಧ್ಯ. ಯಕ್ಷಗಾನದಿಂದ ನಮ್ಮ ಜೀವನದ ಮೂಲ ಚಿಂತನೆಯ ಅರಿವು ಉಂಟಾಗುತ್ತದೆ. ದುಷ್ಟರ ನಾಶವಾಗಿ ಶಿಷ್ಟರ ರಕ್ಷಣೆಯ ಬಗ್ಗೆಯೂ ಯಕ್ಷಗಾನದಲ್ಲಿ ತಿಳಿಯುತ್ತದೆ ಎಂದು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಹೇಳಿದ್ದಾರೆ.

ಅವರು ಬಿ.ಸಿ.ರೋಡಿನ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಗೆಜ್ಜೆಗಿರಿ ಮೇಳದವರಿಂದ ನಡೆದ ಯಕ್ಷೋತ್ಸವ 2025 ಕಾರ್ಯಕ್ರಮದ ಧಾರ್ಮಿಕ ಕಾಯಕ್ರಮದಲ್ಲಿ ಮಾತನಾಡಿ ನಮ್ಮ ಧರ್ಮರಕ್ಷಣೆಯ ಕೈಂಕರ್ಯದಲ್ಲಿ ಯಕ್ಷಗಾನ ಪ್ರಸಂಗ ಸದಾ ಪ್ರೇರಣೆ ನೀಡಲಿ ಎಂದರು.

ಇದೇ ಸಂದರ್ಭ ಮೇಳದ ಕಲಾವಿದರಾದ ಲಕ್ಣ್ಮಣ್ ಗೌಡ ಮುಚ್ಚೂರು, ದಾಮೋದರ ಪಾಟಾಳಿ, ದತ್ತೇಶ್ ಮಾವಿನಕಟ್ಡೆ, ಶ್ರೀಶ ಭಟ್ ಪೊಳಲಿ, ವಿಶ್ವನಾಥ ಕುಲಾಲ್ ಪದ್ಮುಂಜ ಮತ್ತು ಬಾಬಣ್ಣ ಪಾರೆಂಕಿ ಮಡಂತ್ಯಾರ್ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮೇಳದ ಪ್ರಧಾನ ಭಾಗವತರಾದ ಯೋಗೀಶ್ ಶರ್ಮ ಅಳದಂಗಡಿ, ಪ್ರಸಂಗಕರ್ತ ನಿತಿನ್ ಕುಮಾರ್ ತೆಂಕಕಾರಂದೂರು, ಹಿಮ್ಮೇಳ ಕಲಾವಿದ ಗಣಪತಿ ಭಟ್, ಉದ್ಯಮಿ ಭರತ್ ಅಂಚನ್ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!