ಜನ ಮನದ ನಾಡಿ ಮಿಡಿತ

Advertisement

ಕಡಬ: ಧರ್ಮಸ್ಥಳ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿಯವರ ವರ್ಗಾವಣೆ; ನೂತನ ಯೋಜನಾಧಿಕಾರಿಯವರಿಂದ ಜವಾಬ್ದಾರಿ ಸ್ವೀಕಾರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕಿನಲ್ಲಿ ಐದು ವರ್ಷಗಳಿಂದ ಕರ್ತವ್ಶ ನಿರ್ವಹಿಸಿದ ಯೋಜನಾಧಿಕಾರಿಯವರಿಂದ ನೂತನ ಯೋಜನಾಧಿಕಾರಿಯವರಿಗೆ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮ ಕಡಬ ತಾಲೂಕು ಯೋಜನಾಕಛೇರಿಯಲ್ಲಿ ನಡೆಯಿತು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಪುತ್ತೂರು ಯೋಜನಾಕಛೇರಿಯಿಂದ ವಿಭಜಿತಗೊಂಡು ಕಳೆದ ಐದು ವರ್ಷದಿಂದ ಕಡಬ ತಾಲೂಕು ಯೋಜನಾ ಕಛೇರಿಯಲ್ಲಿ ತಾಲೂಕು ಯೋಜನಾಧಿಕಾರಿಯಾಗಿ 13690 ಸದಸ್ಶರನ್ನು ಒಳಗೊಂಡ 1996 ಪ್ರಗತಿಬಂಧು ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 125 ಕೋಟಿ ಆರ್ಥಿಕ ವ್ಶವಹಾರವನ್ನು ಬ್ಶಾಂಕ್ ಮೂಲಕ ಸದಸ್ಶರಿಗೆ ಒದಗಿಸಿರಿರುವ ಕಡಬ ತಾಲೂಕು ಯೋಜನಾ ಕಛೇರಿಯ ಯೋಜನಾಧಿಕಾರಿಯಾಗಿ ಕಳೆದ ಐದು ವರ್ಷದಿಂದ ಮೇದಪ್ಪಗೌಡ ನಾವೂರು ರವರು ಕೇಂದ್ರ ಕಛೇರಿಯ ಆದೇಶದಂತೆ ದಾರವಾಡ ಗ್ರಾಮಾಂತರ ತಾಲೂಕಿಗೆ ಯೋಜನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.

ಕಡಬ ತಾಲೂಕು ಯೋಜನಾ ಕಛೇರಿ ವ್ಶಾಪ್ತಿಯಲ್ಲಿ ತಾಲೂಕು ಜನಜಾಗೃತಿವೇದಿಕೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಸಮಿತಿ, ಶ್ರೀ ಮಂಜುನಾಥೇಶ್ವರ ಭಜನಾಪರಿಷತ್ ಕಡಬ ತಾಲೂಕು ಸಮಿತಿ, ಆರು ಜನಜಾಗೃತಿ ವಲಯ ಸಮಿತಿ, ಆರು ಶೌರ್ಯ ವಿಪತ್ತು ನಿರ್ವಹಣಾ ಘಟಕ, 18 ಸಿ ಯ ಸ್ಸಿ ಕೇಂದ್ರಗಳು, 37 SBI ಬ್ಶಾಂಕ್ ಪ್ರತಿನಿಧಿ ಕೇಂದ್ರಗಳು, 25 ಜ್ಞಾನವಿಕಾಸ ಕೇಂದ್ರಗಳು, 53 ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು, ಆರು ವಲಯ ಗಳಲ್ಲಿ 48 ಸೇವಾಪ್ರತಿನಿಧಿ ಕಾರ್ಯಕ್ಷೇತ್ರಗಳನ್ನು ಹೊಂದಿದ್ದು, ಪ್ರಸ್ತುತ ಶ್ರೀನಿವಾಸಪುರ ಯೋಜನಾ ಕಛೇರಿಯಿಂದ ವರ್ಗಾವಣೆಗೊಂಡು ಬಂದಿರುವ ನೂತನ ಯೋಜನಾಧಿಕಾರಿಗಳಾದ ಪ್ರಕಾಶ್ ಕುಮಾರ್ ರವರಿಗೆ ತಾಲೂಕಿನ ಒಟ್ಟು ನಿರ್ವಹಣಾ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಹಣಕಾಸು ಪ್ರಭಂಧಕಿ ಶ್ರೀಮತಿ ಸುಜಾತ, ಸಹಾಯಕ ಪ್ರಭಂಧಕರಾದ ಯಶವಂತ್, ಹಾಗೂ ಕಛೇರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!