ಜನ ಮನದ ನಾಡಿ ಮಿಡಿತ

Advertisement

ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿ’ಸೋಜಾ ನೇತೃತ್ವದಲ್ಲಿ ಮಂಗಳೂರಿನಲ್ಲಿ ದೇಶದ ಸೈನಿಕರಿಗಾಗಿ ಸರ್ವಧರ್ಮದ ಪ್ರಾಥನೆ ಕಾರ್ಯಕ್ರಮ

ಕಾಶ್ಮೀರದಲ್ಲಿ ಪಾಕಿಸ್ತಾನದ ಉಗ್ರರು ನಡೆಸಿದ ಕೃತ್ಯವನ್ನು ಖಂಡಿಸಿ ಭಾರತ ದೇಶದ ಸೈನಿಕರು ನೀಡಿದ ಪ್ರತಿರೋಧವನ್ನು ಬೆಂಬಲಿಸಿ ಭಾರತದ ಸೈನಿಕರಿಗೆ ಧೈರ್ಯ ತುಂಬುವ ಮತ್ತು ಭಾರತ ಸರ್ಕಾರ ಕೈಗೊಂಡ ನಿರ್ಧಾರವನ್ನು ಬೆಂಬಲಿಸಿ ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿ’ಸೋಜಾರವರ ನೇತೃತ್ವದಲ್ಲಿ ದಿನಾಂಕ: 10/05/2025 ರಂದು ಶನಿವಾರ ಸಂಜೆ 4.00ಗಂಟೆಯಿಂದ 6:00ಗಂಟೆಯವರೆಗೆ ಮಂಗಳೂರಿನ ಪುರಭವನ ಮುಂಭಾಗದಲ್ಲಿರುವ ಸಾರ್ವಜನಿಕ ರಾಜಾಜೀಪಾರ್ಕ್‌ ಸಭಾಂಗಣದಲ್ಲಿ ಸರ್ವಧಮೀಯರ ಪ್ರಾರ್ಥನೆಯನ್ನು ಹಮ್ಮಿಕೊಳ್ಳಲಾಗಿದೆ

 

 

ಈ ಪ್ರಾರ್ಥನೆ ದೇಶದ ಸೈನಿಕರನ್ನು ಬೆಂಬಲಿಸಲು ಮಂಗಳೂರಿನ ಏಲ್ಲಾ ಜನತೆ ಸೈನಿಕರ ಜೊತೆ ನಾವು ಇದ್ದೇವೆ ಎಂದು ತಿಳಿಸಲು ಹಾಗೂ ಕಾಶ್ಮೀರದ ಪಹಲ್ಗಾಮ್‌ನ ದುರಂತದಲ್ಲಿ ಮೃತರಾದ 28ಮಂದಿ ದೇಶ ಪ್ರೇಮಿಗಳಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಇದಾಗಿದ್ದು ಈ ಕಾರ್ಯಕ್ರಮದಲ್ಲಿ ಏಲ್ಲಾ ವರ್ಗಗಳ ಜನರು, ಕಾರ್ಮಿಕರು ಭಾಗವಹಿಸಬೇಕಾಗಿ ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿ’ಸೋಜಾರವರು ವಿನಂತಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ನಡೆಸಲಾದ ಪೂರ್ವಭಾವಿ ಸಭೆಯಲ್ಲಿ ಶ್ರೀ ಪ್ರಕಾಶ್‌
ಸಲ್ಯಾನ್‌, ನಾಗೇಂದ್ರ ಕುಮಾರ್‌, ಕೇಶವ ಮರೋಳಿ,ಅಮೃತ್‌ ಕದ್ರಿ, ಯು.ಪಿ ಇಬ್ರಾಹಿಂ, ಸಿರಾಜ್‌ ಬಜ್ಪೆ, ಮೆಲ್ವಿನ್‌ ಕ್ಯಾಸ್ತಲಿನೋ, ಇಮ್ರಾನ್‌ ಕುದ್ರೋಳಿ, ಬಾಸ್ಕರ್‌ ರಾವ್‌, ಮನುರಾಜ್‌ ,ಆಲ್ಟ್ಟನ್‌ ಡಿಕುನ್ಹಾ, ವಸಂತ್‌ ಶೆಟ್ಟಿ ವೀರನಗರ, ಚಂದ್ರಹಾಸ ಕೋಡಿಕಲ್‌, ಮಂಜುಳಾ ನಾಯಕ್‌ ಶಾಂತಲಾ ಗಟ್ಟಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪ*ಘಾತದಲ್ಲಿ ಯುವಕ ಸಾ*ವು….!

ಬಂಟ್ವಾಳ: ಅಮ್ಮುಂಜೆ ವೃದ್ಧೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ…!

ನವದೆಹಲಿ: ಚಿನ್ನದ ಬೆಲೆ ಇಳಿಯುತ್ತಾ? ವಿಶ್ವ ಚಿನ್ನ ಮಂಡಳಿಯ ಭವಿಷ್ಯ…!

error: Content is protected !!