ಜನ ಮನದ ನಾಡಿ ಮಿಡಿತ

Advertisement

ಮೂಡಬಿದ್ರಿ : ಸ್ಥಳೀಯರ ಸಕಾಲಿಕ ನೆರವಿನಿಂದ ಬದುಕಿ ಬಂದ ಪ್ರವಾಸಿ ತಂಡ

ಮಳೆ ಶುರುವಾಯಿತೆಂದರೆ ಕರಾವಳಿಯಲ್ಲಿ ಜಲಪಾತಗಳು ಮೈದೋರುತ್ತವೆ. ಇವು ದೂರದಿಂದ ನೋಡಲು ರೋಚಕ ಮತ್ತು ಸುಂದರ. ದ.ಕ ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಯಲ್ಲಿ ಜಲಪಾತಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಬಂದವರು ಜಲಪಾತದೆದುರು ತಮ್ಮ ಕೌಶಲ್ಯ ಪ್ರದರ್ಶನಕ್ಕೆ ಮುಂದಾಗಿ ಅಪಾಯಕ್ಕೆ ಸಿಲುಕುತ್ತಾರೆ. ಇಂತಹ ಘಟನೆ ಮೂಡಬಿದ್ರೆ ಸಮೀಪದ ಎರುಗುಂಡಿ ಜಲಪಾತದ ಸಮೀಪ ನಡೆದಿದೆ. ಸ್ಥಳೀಯರು ಹಗ್ಗ ಬಳಸಿ ಜಲಪಾತದ ನಡುವೆ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ.

ಮೂಡುಬಿದ್ರಿ ಪಾಲಡ್ಕ ಎರುಗುಂಡಿ ಫಾಲ್ಸ್ ಮಳೆಗಾಲದಲ್ಲಿ ಅಬ್ಬರಿಸುವ ಜಲಪಾತ. ಬಂಡೆಗಳ ನಡುವೆ ಧುಮ್ಮಿಕ್ಕುವ ಜಲಪಾತವನ್ನು ನೋಡಲು ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಬರುತ್ತಾರೆ. ಕಾಡಿನ ನಡುವೆ ಇರುವುದರಿಂದ ಜಲಪಾತದವರೆಗೆ ರಸ್ತೆ ಇಲ್ಲ. ನಡೆದುಕೊಂಡು ಸಾಗಬೇಕು. ಇದರಿಂದಾಗಿ ಇಲ್ಲಿ ಪೊಲೀಸರ ನಿಗಾ ಕಡಿಮೆ. ಬರುವ ಪ್ರವಾಸಿಗರು ಮೋಜಿನಾಟದಲ್ಲಿ ಬಂಡೆಗಳ ಮೇಲೆ ಸರ್ಕಸ್ ಮಾಡಲು ತೊಡಗುತ್ತಾರೆ. ಮಳೆ ಬಂದರೆ ಜಲಪಾತಕ್ಕೆ ಹರಿದು ಬರುವ ನೀರಿನ ಪ್ರಮಾಣ ಏಕಾಏಕಿ ಏರುತ್ತದೆ. ಮೋಜಿನಾಟದಲ್ಲಿ ತೊಡಗಿದ್ದವರು ಪ್ರಾಣಾಪಾಯಕ್ಕೆ ಸಿಲುಕುತ್ತಾರೆ. ಇಂತಹ ಘಟನೆ ನಡೆದಾಗ ಸ್ಥಳೀಯರು ಹಗ್ಗ ಕಟ್ಟಿ ಜಲಪಾತದ ನಡುವೆ ಸಿಲುಕಿದವರನ್ನು ರಕ್ಷಿಸಿದ್ದಾರೆ. ಅಪಾಯ ಲೆಕ್ಕಿಸದೆ ಜಲಪಾತದಲ್ಲಿ ನೀರಾಟವಾಡಲು ಹೋಗಿದ್ದ ಪ್ರವಾಸಿಗರು ಅಪಾಯಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿರುವ ಘಟನೆಗಳು ಈ ಹಿಂದೆ ನಡೆದಿವೆ. ಈ ಬಾರಿ ಪ್ರವಾಸಿ ತಂಡದವರ ಅದೃಷ್ಟ ನೆಟ್ಟಗಿತ್ತು. ಸ್ಥಳೀಯರ ಸಕಾಲಿಕ ನೆರವಿನಿಂದ ಬದುಕಿ ಬಂದಿದ್ದಾರೆ.

Leave a Reply

Your email address will not be published. Required fields are marked *

ಆಂಧ್ರಪದೇಶದಲ್ಲಿ ಫ್ಲೋರ್ ಮಾಸ್ಟರ್ಸ್ ಮೊದಲ ಫ್ಲಾಟ್ ಬ್ರೆಡ್ ಸ್ಥಾವರ; ರೂ. 100 ಕೋಟಿ ಹೂಡಿಕೆ, ರಫ್ತು ಆಧಾರಿತ ಉದ್ಯಮ..!

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿ ಬಸ್-ಕಾರು ಡಿಕ್ಕಿ; ಮಕ್ಕಳಿದ್ದ ಕಾರು ಅಪಾಯದಿಂದ ಪಾರು

ನ್ಯೂಯಾರ್ಕ್: ಅಮೆರಿಕ-ಇರಾನ್ ಮಿಲಿಟರಿ ವಿರಾಮದ ಪರಿಣಾಮ; ಕಚ್ಚಾ ತೈಲ ಬೆಲೆ ಇಳಿಕೆ, ಹಣದುಬ್ಬರಕ್ಕೂ ಬ್ರೇಕ್?

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಬಂಟ್ವಾಳ: ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಲ್ಲಿ ಆತಂಕ..!

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

error: Content is protected !!