ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: 62 ವರ್ಷಗಳ ಬಳಿಕ ಊರಿಗೆ ಬಂದ ಸಂಜೀವ ಪೂಜಾರಿ

ಸುಮಾರು 62 ವರ್ಷಗಳ ಹಿಂದೆ ಮುಂಬಾಯಿ ನಗರಕ್ಕೆ ಕೆಲಸವನ್ನು ಹುಡುಕಿಕೊಂಡು ಹೋಗಿದ್ದ ವ್ಯಕ್ತಿಯೊಬ್ಬರು ಇದೀಗ ಊರಿನತ್ತ ಹಿಂತಿರುಗಿದ ಆಶ್ಚರ್ಯಕರ ಘಟನೆಯೊಂದು ಬಂಟ್ವಾಳ ತಾಲೂಕಿನ ನರಿಕೊಂಬುವಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ರಾಯಶ ನಿವಾಸಿ ದಿ. ಗುಡ್ಡಪ್ಪ ಪೂಜಾರಿ ಹಾಗೂ ನಾಗಮ್ಮ ಅವರ ಮೂರನೇ ಪುತ್ರ ಸಂಜೀವ ಪೂಜಾರಿ ಅವರು ತನ್ನ 13 ನೇ ಇಸವಿಯಲ್ಲಿ ಮನೆ ಬಿಟ್ಟು ಕೆಲಸಕ್ಕಾಗಿ ಮುಂಬಯಿ ನಗರಕ್ಕೆ ಕಾಲಿಟ್ಟರು. ಅದಾದ ಬಳಿಕ ಇಂದಿನವರೆಗೆ ಮನೆ ಮಂದಿಯವರ ಮುಖವನ್ನು ಒಮ್ಮೆಯೂ ತಿರುಗಿ ನೋಡಿದವರಲ್ಲ.

ತಂದೆ ತಾಯಿಯ ಸುಖದುಖದಲ್ಲಾಗಲಿ,ಅಣ್ಣ ತಮ್ಮಂದಿರ ಗೌಜಿಗಮ್ಮತ್ತುಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಬಂದಿರಲಿಲ್ಲ.ಒಟ್ಟಿನಲ್ಲಿ ಹೇಳುವುದಾದರೆ ಯಾವುದೇ ಸಂಪರ್ಕ ಮನೆಯವರ ಜೊತೆ ಸಿಗಲಿಲ್ಲವಂತೆ. ಅಷ್ಟಕ್ಕೂ ಅವರನ್ನು ಸ್ಥಳೀಯ ತನಿಯಪ್ಪ ಎಂಬವರು ಉದ್ಯೋಗ ನೀಡುವುದಾಗಿ ಮುಂಬಯಿಗೆ ಕರೆದುಕೊಂಡು ಹೋಗಿದ್ದರು ಎಂದಿದ್ದಾರೆ. ತಂದೆ ತಾಯಿಗೆ ಮಗನ ಬರುವಿಕೆ ಕಾದು ಕಾದು ಕೊನೆಯುಸಿರೆಳೆದರು. ಮಗ ಬದುಕಿ ಬರುವ ಆಸೆಯನ್ನು ತಂದೆತಾಯಿಯ ಜೊತೆ ಮನೆಯವರು ಕಳೆದುಕೊಂಡಿದ್ದರು. ಇದೀಗ ಅವರ ತಮ್ಮ ಗಂಗಾಧರ ಪೂಜಾರಿ ಅವರ ಮನೆಗೆ ಬಂದಿದ್ದಾರೆ.62 ವರ್ಷಗಳ ಬಳಿಕ ಊರಿಗೆ ಬಂದ ಅಣ್ಣನನ್ನು ಕಂಡು ತಮ್ಮನಿಗೆ ಬಹಳ ಸಂತೋಷವಾಗಿದೆ ಮಲೆಯಾಳ, ಮರಾಠಿ, ಬಂಗಾಳಿ, ಹಿ0ದಿ, ತುಳು ಹಾಗೂ ಕನ್ನಡ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಿದ್ದಾರೆ. ಯಾವುದೇ ದಾಖಲೆ ಪತ್ರಗಳು ಅವರಲ್ಲಿ ಇಲ್ಲ ಎಂದು ಹೇಳುತ್ತಾರೆ ಎಂದು ಮನೆಯವರು ತಿಳಿಸುತ್ತಾರೆ.

Leave a Reply

Your email address will not be published. Required fields are marked *

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಬಂಟ್ವಾಳ: ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಲ್ಲಿ ಆತಂಕ..!

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

error: Content is protected !!