ಜನ ಮನದ ನಾಡಿ ಮಿಡಿತ

Advertisement

ಕಂಬಳದಲ್ಲಿ ಅವಹೇಳನ ಮಾಡಿದವರು ಮಿಯಾರು ಕಂಬಳದಲ್ಲಿ ಕ್ಷಮೆ ಕೇಳಬೇಕು; ನಮ್ಮ ಕಂಬಳ ಟೀಂ ದುಬೈ!

ಮಂಗಳೂರು ಕಂಬಳದಲ್ಲಿ ಕಂಬಳ ಉದ್ಘೋಷಕರಾದ ಕಂಬಳ ಕ್ಷೇತ್ರದ ಭೀಷ್ಮ ಎಂಬ ಖ್ಯಾತಿ ಪಡೆದಿರುವ ಗುಣಪಾಲ ಕಡಂಬರವರಿಗೆ ಆದ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ ಹಾಗೂ ಇದು ತುಳುನಾಡಿನ ಕಂಬಳ ಕ್ಷೇತ್ರಕ್ಕೆ ಆದ ಅಗೌರವ ಎಂದು ಯುಎಇಯಲ್ಲಿ ಇರುವ ಕಂಬಳ ಅಭಿಮಾನಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಮರಳು ಭೂಮಿಯಲ್ಲಿ ದುಡಿಯುತ್ತಿರುವ ನಾವು ಕಂಬಳವನ್ನು ಅತಿ ಪ್ರೀತಿ ಹಾಗೂ ಭಕ್ತಿ ಪೂರ್ವಕವಾಗಿ ಕಂಬಳ ಆರಂಭದಿಂದ ಅಂತ್ಯದವರೆಗೆ ಮೊಬೈಲ್ ಫೋನ್ ಅಥವಾ ಇನ್ನಿತರ ಪರದೆಯಲ್ಲಿ ನೋಡುವ ನಮಗೆ ಕಂಬಳದ ಸವಿಯನ್ನು ಇನ್ನೂ ಹೆಚ್ಚಿಸುವವರು ಕಂಬಳ ಉದ್ಘೋಷಕರು. ಅಂತಹ ಉದ್ಘೋಷಕರಿಗೆ ಈ ರೀತಿಯ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದರು. ಕಂಬಳದಲ್ಲಿ ಗುಣಪಾಲ ಕಡಂಬರ ಧ್ವನಿಯೇ ಒಂದು ವಿಶೇಷ ಆಕರ್ಷಣೆಯಾಗಿದೆ. ಅವರ ಧ್ವನಿಯಿಂದ ಕಂಬಳದ ಇತಿಹಾಸವನ್ನು ಕೇಳಲು ಕಂಬಳ ಅಭಿಮಾನಿಗಳು ನಿರೀಕ್ಷೆಯಲ್ಲಿರುತ್ತಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಕಡಂಬರವರಿಗೆ ಮಾಡಿದ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಮಂಗಳೂರು ಕಂಬಳದಲ್ಲಿ ಅವಮಾನವನ್ನು ಮಾಡಿದವರು ನಾಳೆಯ ಮೀಯಾರಿನ ಕಂಬಳದಲ್ಲಿ ಕ್ಷಮೆ ಕೇಳಬೇಕು ಹಾಗೂ ಮುಂದಿನ ದಿನಗಳಲ್ಲಿ ಕಂಬಳ ಕ್ಷೇತ್ರಗಳಲ್ಲಿ ಇಂತಹ ಘಟನೆಗಳು ನಡೆಯಬಾರದು ಇದರ ಬಗ್ಗೆ ಕಂಬಳ ಜಿಲ್ಲಾ ಸಮಿತಿ ಮತ್ತು ಕಂಬಳ ರಾಜ್ಯ ಅಸೋಸಿಯೇಷನ್ ತುರ್ತು ಕ್ರಮವನ್ನು ತೆಗೆಯಬೇಕು ಎಂದು ನಮ್ಮ ಕಂಬಳ ಟೀಂ ದುಬೈಯ ಎಲ್ಲಾ ಸದಸ್ಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

ಮಾಣಿ: ಮರ ಬಿದ್ದು ಟ್ರಾನ್ಸ್ ಫಾರ್ಮರ್‌ಗೆ ಹಾನಿ; ರಸ್ತೆ ಮೇಲೆ ಮರ ಸಹಿತ ಮುರಿದುಬಿದ್ದು ಸಂಚಾರ ಬಂದ್…!

ಗೋಳಿತ್ತೊಟ್ಟು: ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು…!

ಬಂಟ್ವಾಳ: ಭಾರೀ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು..!

ಉಪ್ಪಿನಂಗಡಿ: ನಕಲಿ 500 ನೋಟು ಮಾದರಿ ಮುದ್ರಣ ಪ್ರಕರಣ, 7 ಮಂದಿ ವಶ….!

error: Content is protected !!